ಇತ್ತೀಚಿನ ದಿನಗಳಲ್ಲಿ ಸತ್ಯ ಮರೆಮಾಚುವ ಸರಳ ವಿಧಾನವೆಂದರೆ ಎನ್ಕೌಂಟರ್ ಎಂಬಂತಾಗಿದೆ. ದೇಶದಲ್ಲಿ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳ ಹಂಗಿನಲ್ಲಿ ಬದುಕುವ ಕೆಲವು ಪುಡಿ ರೌಡಿಗಳು, ಗ್ಯಾಂಗ್ಸ್ಟರ್ಗಳು ಹೀನ ಕೃತ್ಯಕ್ಕೆ ಮುಂದಾಗಿ ಪೊಲೀಸರಿಗೆ ಸಿಕ್ಕಿಬಿದ್ದಾಗ, ನ್ಯಾಯದೇವತೆಯ ಬಾಗಿಲು ತಟ್ಟುವ ಮುನ್ನವೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಕಾಣದ ಕೈಗಳ ಒತ್ತಡಕ್ಕೆ ಮಣಿದು ವ್ಯವಸ್ಥೆಯು ಎನ್ಕೌಂಟರ್ ಎನ್ನುವ ಅಸ್ತ್ರಕ್ಕೆ ಶರಣಾಗುತ್ತಿದೆ.