ಸರ್ಕಾರದ ಆದೇಶದಂತೆ, ಬರುವ ಜುಲೈ ತಿಂಗಳ ಪಿಂಚಣಿಯು ಕನಿಷ್ಠ ಹನ್ನೆರಡೂವರೆ ಸಾವಿರ ರೂಪಾಯಿ ಕಡಿತಗೊಳ್ಳುವುದರಿಂದ, ನಿವೃತ್ತಿದಾರರು ಚಿಂತಾಕ್ರಾಂತರಾಗಿದ್ದಾರೆ. ಸರ್ಕಾರ ಒಂದು ಕಡೆ ಕಾಲ್ಪನಿಕ ಸೇವೆ ಎಂದು ಕಡಿಮೆ ಪಿಂಚಣಿ ನಿಗದಿಪಡಿಸಿ ಕೆಲವರಿಗೆ ತಾರತಮ್ಯ ಮಾಡಿದೆ. ಆ ಚಿಂತೆಯಲ್ಲಿ ಇರುವಾಗಲೇ ಅದೇ ಕಡಿಮೆ ಪಿಂಚಣಿಯಲ್ಲಿ ಮತ್ತೆ ಕಡಿತಗೊಳಿಸಲು ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅವೈಜ್ಞಾನಿಕವಾದ ಪಿಂಚಣಿ ಕಡಿತದ ಆದೇಶವನ್ನು ಹಿಂಪಡೆದು, ನಿವೃತ್ತಿದಾರರ ನೆಮ್ಮದಿಯ ಜೀವನಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಲಿ.