<p>2012ರ ಏಪ್ರಿಲ್ 1ರಿಂದ 2015ರ ಡಿಸೆಂಬರ್ 31ರವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಿರುವ ಪದವಿ ಕಾಲೇಜಿನ ಅಧ್ಯಾಪಕರು, ದೈಹಿಕ ಶಿಕ್ಷಕರು ಹಾಗೂ ಗ್ರಂಥಾಲಯ ಅಧಿಕಾರಿಗಳ ಪಿಂಚಣಿ ಕಡಿತಗೊಳಿಸಲು ಸರ್ಕಾರ ಮುಂದಾಗಿರುವುದರಿಂದ, ಇಳಿವಯಸ್ಸಿನಲ್ಲಿ ನೆಮ್ಮದಿ ಜೀವನ ನಡೆಸಬೇಕಾಗಿದ್ದ ಅವರು ಆತಂಕಕ್ಕೆ ಒಳಗಾಗಿದ್ದಾರೆ.</p>.<p>ಸರ್ಕಾರದ ಆದೇಶದಂತೆ, ಬರುವ ಜುಲೈ ತಿಂಗಳ ಪಿಂಚಣಿಯು ಕನಿಷ್ಠ ಹನ್ನೆರಡೂವರೆ ಸಾವಿರ ರೂಪಾಯಿ ಕಡಿತಗೊಳ್ಳುವುದರಿಂದ, ನಿವೃತ್ತಿದಾರರು ಚಿಂತಾಕ್ರಾಂತರಾಗಿದ್ದಾರೆ. ಸರ್ಕಾರ ಒಂದು ಕಡೆ ಕಾಲ್ಪನಿಕ ಸೇವೆ ಎಂದು ಕಡಿಮೆ ಪಿಂಚಣಿ ನಿಗದಿಪಡಿಸಿ ಕೆಲವರಿಗೆ ತಾರತಮ್ಯ ಮಾಡಿದೆ. ಆ ಚಿಂತೆಯಲ್ಲಿ ಇರುವಾಗಲೇ ಅದೇ ಕಡಿಮೆ ಪಿಂಚಣಿಯಲ್ಲಿ ಮತ್ತೆ ಕಡಿತಗೊಳಿಸಲು ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅವೈಜ್ಞಾನಿಕವಾದ ಪಿಂಚಣಿ ಕಡಿತದ ಆದೇಶವನ್ನು ಹಿಂಪಡೆದು, ನಿವೃತ್ತಿದಾರರ ನೆಮ್ಮದಿಯ ಜೀವನಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಲಿ.</p>.<p><em><strong>ಸಿ.ಸಿದ್ದರಾಜು ಆಲಕೆರೆ,ಮಂಡ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>2012ರ ಏಪ್ರಿಲ್ 1ರಿಂದ 2015ರ ಡಿಸೆಂಬರ್ 31ರವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದಿರುವ ಪದವಿ ಕಾಲೇಜಿನ ಅಧ್ಯಾಪಕರು, ದೈಹಿಕ ಶಿಕ್ಷಕರು ಹಾಗೂ ಗ್ರಂಥಾಲಯ ಅಧಿಕಾರಿಗಳ ಪಿಂಚಣಿ ಕಡಿತಗೊಳಿಸಲು ಸರ್ಕಾರ ಮುಂದಾಗಿರುವುದರಿಂದ, ಇಳಿವಯಸ್ಸಿನಲ್ಲಿ ನೆಮ್ಮದಿ ಜೀವನ ನಡೆಸಬೇಕಾಗಿದ್ದ ಅವರು ಆತಂಕಕ್ಕೆ ಒಳಗಾಗಿದ್ದಾರೆ.</p>.<p>ಸರ್ಕಾರದ ಆದೇಶದಂತೆ, ಬರುವ ಜುಲೈ ತಿಂಗಳ ಪಿಂಚಣಿಯು ಕನಿಷ್ಠ ಹನ್ನೆರಡೂವರೆ ಸಾವಿರ ರೂಪಾಯಿ ಕಡಿತಗೊಳ್ಳುವುದರಿಂದ, ನಿವೃತ್ತಿದಾರರು ಚಿಂತಾಕ್ರಾಂತರಾಗಿದ್ದಾರೆ. ಸರ್ಕಾರ ಒಂದು ಕಡೆ ಕಾಲ್ಪನಿಕ ಸೇವೆ ಎಂದು ಕಡಿಮೆ ಪಿಂಚಣಿ ನಿಗದಿಪಡಿಸಿ ಕೆಲವರಿಗೆ ತಾರತಮ್ಯ ಮಾಡಿದೆ. ಆ ಚಿಂತೆಯಲ್ಲಿ ಇರುವಾಗಲೇ ಅದೇ ಕಡಿಮೆ ಪಿಂಚಣಿಯಲ್ಲಿ ಮತ್ತೆ ಕಡಿತಗೊಳಿಸಲು ಮುಂದಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಅವೈಜ್ಞಾನಿಕವಾದ ಪಿಂಚಣಿ ಕಡಿತದ ಆದೇಶವನ್ನು ಹಿಂಪಡೆದು, ನಿವೃತ್ತಿದಾರರ ನೆಮ್ಮದಿಯ ಜೀವನಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಲಿ.</p>.<p><em><strong>ಸಿ.ಸಿದ್ದರಾಜು ಆಲಕೆರೆ,ಮಂಡ್ಯ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>