<p>ಪತ್ನಿಯ ಆಸೆ ಪೂರೈಸಲು ಶಿಕ್ಷಕರೊಬ್ಬರು ಬಾಡಿಗೆ ಹೆಲಿಕಾಪ್ಟರ್ ಬಳಸಿ ಆಗಸಯಾನ ಮಾಡಿರುವುದನ್ನು ಪ್ರಶ್ನಿಸುತ್ತಾ, ಶಿಕ್ಷಕರು ಸರಳ ಜೀವನದ ಕ್ರಮದಲ್ಲಿ ಸಮಾಜಕ್ಕೆ ಮಾದರಿಯಾಗಿ ಇರಬೇಕೆಂದು ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ ಹೇಳಿದ್ದಾರೆ (ವಾ.ವಾ., ಸೆ. 6). ಸಂಗಾತಿಯ ಬಹುದಿನಗಳ ಬಯಕೆಯನ್ನು ತನ್ನ ಜೀವಮಾನದ ಗಳಿಕೆಯ ಅತಿದೊಡ್ಡ ಮೊತ್ತವನ್ನು ಬಳಸಿ ಈಡೇರಿಸಿರುವುದು ಪತ್ನಿಯ ಮೇಲಿನ ಪ್ರೀತಿಯನ್ನು ತೋರುತ್ತದೆ. ಅದನ್ನು ದುಂದುವೆಚ್ಚ ಎನ್ನಲಾಗದು. ಹಣ ಸಂಪಾದನೆ ಮಾಡುವ ಮೂಲ ಉದ್ದೇಶವೇ ದಿನನಿತ್ಯದ ಖರ್ಚುಗಳೂ ಸೇರಿದಂತೆ ತಮ್ಮತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವುದು ಆಗಿರುತ್ತದೆ. ಇಲ್ಲವಾದಲ್ಲಿ ಹಣ ಸಂಪಾದನೆಯ ಅವಶ್ಯಕತೆಯೇ ಇರುವುದಿಲ್ಲ.</p>.<p>ಕೇವಲ ಕಾಫಿ, ತಿಂಡಿ ಸೇವನೆಗೆ, ಮರೆತುಹೋದ ಕನ್ನಡಕ ತರಲು ಹೆಲಿಕಾಪ್ಟರುಗಳನ್ನು ಬಳಸಿದ ಮಂತ್ರಿಯನ್ನೂ ಮುಖ್ಯಮಂತ್ರಿಯನ್ನೂ ಕಂಡಿದ್ದೇವೆ. ಪತ್ನಿಯ ಆಸೆ ಈಡೇರಿಸಲು ಆತ ಮಾಡಿದ ಖರ್ಚು ಗಂಡಂದಿರಿಗೆಲ್ಲಾ ಮಾದರಿ ಎನ್ನಬಹುದು. ಅಷ್ಟಕ್ಕೂ ಆತ ವ್ಯಯಿಸಿದ್ದು ಆತನ ಸ್ವಯಾರ್ಜಿತ ಅಲ್ಲವೇ?</p>.<p><strong>ಪತ್ತಂಗಿ ಎಸ್. ಮುರಳಿ,</strong>ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪತ್ನಿಯ ಆಸೆ ಪೂರೈಸಲು ಶಿಕ್ಷಕರೊಬ್ಬರು ಬಾಡಿಗೆ ಹೆಲಿಕಾಪ್ಟರ್ ಬಳಸಿ ಆಗಸಯಾನ ಮಾಡಿರುವುದನ್ನು ಪ್ರಶ್ನಿಸುತ್ತಾ, ಶಿಕ್ಷಕರು ಸರಳ ಜೀವನದ ಕ್ರಮದಲ್ಲಿ ಸಮಾಜಕ್ಕೆ ಮಾದರಿಯಾಗಿ ಇರಬೇಕೆಂದು ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ ಹೇಳಿದ್ದಾರೆ (ವಾ.ವಾ., ಸೆ. 6). ಸಂಗಾತಿಯ ಬಹುದಿನಗಳ ಬಯಕೆಯನ್ನು ತನ್ನ ಜೀವಮಾನದ ಗಳಿಕೆಯ ಅತಿದೊಡ್ಡ ಮೊತ್ತವನ್ನು ಬಳಸಿ ಈಡೇರಿಸಿರುವುದು ಪತ್ನಿಯ ಮೇಲಿನ ಪ್ರೀತಿಯನ್ನು ತೋರುತ್ತದೆ. ಅದನ್ನು ದುಂದುವೆಚ್ಚ ಎನ್ನಲಾಗದು. ಹಣ ಸಂಪಾದನೆ ಮಾಡುವ ಮೂಲ ಉದ್ದೇಶವೇ ದಿನನಿತ್ಯದ ಖರ್ಚುಗಳೂ ಸೇರಿದಂತೆ ತಮ್ಮತಮ್ಮ ಬಯಕೆಗಳನ್ನು ಈಡೇರಿಸಿಕೊಳ್ಳುವುದು ಆಗಿರುತ್ತದೆ. ಇಲ್ಲವಾದಲ್ಲಿ ಹಣ ಸಂಪಾದನೆಯ ಅವಶ್ಯಕತೆಯೇ ಇರುವುದಿಲ್ಲ.</p>.<p>ಕೇವಲ ಕಾಫಿ, ತಿಂಡಿ ಸೇವನೆಗೆ, ಮರೆತುಹೋದ ಕನ್ನಡಕ ತರಲು ಹೆಲಿಕಾಪ್ಟರುಗಳನ್ನು ಬಳಸಿದ ಮಂತ್ರಿಯನ್ನೂ ಮುಖ್ಯಮಂತ್ರಿಯನ್ನೂ ಕಂಡಿದ್ದೇವೆ. ಪತ್ನಿಯ ಆಸೆ ಈಡೇರಿಸಲು ಆತ ಮಾಡಿದ ಖರ್ಚು ಗಂಡಂದಿರಿಗೆಲ್ಲಾ ಮಾದರಿ ಎನ್ನಬಹುದು. ಅಷ್ಟಕ್ಕೂ ಆತ ವ್ಯಯಿಸಿದ್ದು ಆತನ ಸ್ವಯಾರ್ಜಿತ ಅಲ್ಲವೇ?</p>.<p><strong>ಪತ್ತಂಗಿ ಎಸ್. ಮುರಳಿ,</strong>ಬೆಂಗಳೂರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>