<p>ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಪರಿಸರ ನಾಶದಿಂದಾಗುವ ಪರಿಣಾಮಗಳ ಕುರಿತು ವಿಜ್ಞಾನ ಶಿಕ್ಷಕರು ವಿವರಿಸುತ್ತಾ, ‘ಭಾರತದ ಪ್ರಮುಖ ನಗರಗಳಲ್ಲಿ ಇಂದು ನೀರನ್ನು ಕೊಳ್ಳುವ ವ್ಯವಸ್ಥೆ ಇದೆ. ಪರಿಸರ ರಕ್ಷಣೆ ಮಾಡದಿದ್ದಲ್ಲಿ ಮುಂದೊಂದು ದಿನ ಈ ವ್ಯವಸ್ಥೆ ನಮ್ಮ ಊರಿಗೂ ಬರಬಹುದು’ ಎಂದಿದ್ದರು. ಆಗ, ನೀರನ್ನು ಕೊಳ್ಳುವ ವ್ಯವಸ್ಥೆಯೇ ನಮಗೆಲ್ಲ ಅಚ್ಚರಿ ತಂದಿತ್ತು. ಆದರೆ, ನಾವು ಪದವಿ ಹಂತಕ್ಕೆ ಬರುವಷ್ಟರಲ್ಲೇ ನಮ್ಮ ಗ್ರಾಮಗಳಲ್ಲಿ ಕುಡಿಯುವ ನೀರನ್ನು ಕೊಳ್ಳುವ ವ್ಯವಸ್ಥೆ ಬಂದಿತ್ತು.</p>.<p>ಈಗ ದೇಶದ ರಾಜಧಾನಿಯಲ್ಲಿ ಉಸಿರಾಟಕ್ಕೆ ಉತ್ತಮ ವಾಯು ಲಭ್ಯವಿಲ್ಲದೆ ತಾತ್ಕಾಲಿಕವಾಗಿ ಆಮ್ಲಜನಕ<br />ವನ್ನು ಮಾರಾಟ ಮಾಡಲಾಗುತ್ತಿದೆ. ಈಗಲೂ ನಾವೆಲ್ಲಾ ಒಟ್ಟಾಗಿ ಪರಿಸರ ರಕ್ಷಣೆಗೆ ಮುಂದಾಗದಿದ್ದರೆ, ಆಮ್ಲಜನಕ<br />ವನ್ನು ಕೊಳ್ಳುವ ವ್ಯವಸ್ಥೆ ದೇಶದ ಪ್ರತಿ ಹಳ್ಳಿಗೂ ಕಾಲಿಡುವ ದಿನಗಳು ದೂರವಿಲ್ಲ. ನಮ್ಮ ನಂತರದ ಪೀಳಿಗೆಗೆ, ಸಕಲ ಜೀವರಾಶಿಗೆ ಆರೋಗ್ಯಕರ ಪರಿಸರ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದೂ ಹೌದಲ್ಲವೇ? ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ, ‘ಮಗುವಿಗೊಂದು ಮರ’ ಎಂಬ ಪರಿಕಲ್ಪನೆ ಜೀವ ಪಡೆಯಲಿ. ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು, ಬೆಳೆಸಿ, ಆಮ್ಲಜನಕ ಕೊಳ್ಳುವ ದಿನ ಬಾರದಂತೆ ನೋಡಿಕೊಳ್ಳೋಣ.</p>.<p><em><strong>–ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾವು ಪ್ರಾಥಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಪರಿಸರ ನಾಶದಿಂದಾಗುವ ಪರಿಣಾಮಗಳ ಕುರಿತು ವಿಜ್ಞಾನ ಶಿಕ್ಷಕರು ವಿವರಿಸುತ್ತಾ, ‘ಭಾರತದ ಪ್ರಮುಖ ನಗರಗಳಲ್ಲಿ ಇಂದು ನೀರನ್ನು ಕೊಳ್ಳುವ ವ್ಯವಸ್ಥೆ ಇದೆ. ಪರಿಸರ ರಕ್ಷಣೆ ಮಾಡದಿದ್ದಲ್ಲಿ ಮುಂದೊಂದು ದಿನ ಈ ವ್ಯವಸ್ಥೆ ನಮ್ಮ ಊರಿಗೂ ಬರಬಹುದು’ ಎಂದಿದ್ದರು. ಆಗ, ನೀರನ್ನು ಕೊಳ್ಳುವ ವ್ಯವಸ್ಥೆಯೇ ನಮಗೆಲ್ಲ ಅಚ್ಚರಿ ತಂದಿತ್ತು. ಆದರೆ, ನಾವು ಪದವಿ ಹಂತಕ್ಕೆ ಬರುವಷ್ಟರಲ್ಲೇ ನಮ್ಮ ಗ್ರಾಮಗಳಲ್ಲಿ ಕುಡಿಯುವ ನೀರನ್ನು ಕೊಳ್ಳುವ ವ್ಯವಸ್ಥೆ ಬಂದಿತ್ತು.</p>.<p>ಈಗ ದೇಶದ ರಾಜಧಾನಿಯಲ್ಲಿ ಉಸಿರಾಟಕ್ಕೆ ಉತ್ತಮ ವಾಯು ಲಭ್ಯವಿಲ್ಲದೆ ತಾತ್ಕಾಲಿಕವಾಗಿ ಆಮ್ಲಜನಕ<br />ವನ್ನು ಮಾರಾಟ ಮಾಡಲಾಗುತ್ತಿದೆ. ಈಗಲೂ ನಾವೆಲ್ಲಾ ಒಟ್ಟಾಗಿ ಪರಿಸರ ರಕ್ಷಣೆಗೆ ಮುಂದಾಗದಿದ್ದರೆ, ಆಮ್ಲಜನಕ<br />ವನ್ನು ಕೊಳ್ಳುವ ವ್ಯವಸ್ಥೆ ದೇಶದ ಪ್ರತಿ ಹಳ್ಳಿಗೂ ಕಾಲಿಡುವ ದಿನಗಳು ದೂರವಿಲ್ಲ. ನಮ್ಮ ನಂತರದ ಪೀಳಿಗೆಗೆ, ಸಕಲ ಜೀವರಾಶಿಗೆ ಆರೋಗ್ಯಕರ ಪರಿಸರ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದೂ ಹೌದಲ್ಲವೇ? ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ, ‘ಮಗುವಿಗೊಂದು ಮರ’ ಎಂಬ ಪರಿಕಲ್ಪನೆ ಜೀವ ಪಡೆಯಲಿ. ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು, ಬೆಳೆಸಿ, ಆಮ್ಲಜನಕ ಕೊಳ್ಳುವ ದಿನ ಬಾರದಂತೆ ನೋಡಿಕೊಳ್ಳೋಣ.</p>.<p><em><strong>–ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>