ಈಗ ದೇಶದ ರಾಜಧಾನಿಯಲ್ಲಿ ಉಸಿರಾಟಕ್ಕೆ ಉತ್ತಮ ವಾಯು ಲಭ್ಯವಿಲ್ಲದೆ ತಾತ್ಕಾಲಿಕವಾಗಿ ಆಮ್ಲಜನಕ
ವನ್ನು ಮಾರಾಟ ಮಾಡಲಾಗುತ್ತಿದೆ. ಈಗಲೂ ನಾವೆಲ್ಲಾ ಒಟ್ಟಾಗಿ ಪರಿಸರ ರಕ್ಷಣೆಗೆ ಮುಂದಾಗದಿದ್ದರೆ, ಆಮ್ಲಜನಕ
ವನ್ನು ಕೊಳ್ಳುವ ವ್ಯವಸ್ಥೆ ದೇಶದ ಪ್ರತಿ ಹಳ್ಳಿಗೂ ಕಾಲಿಡುವ ದಿನಗಳು ದೂರವಿಲ್ಲ. ನಮ್ಮ ನಂತರದ ಪೀಳಿಗೆಗೆ, ಸಕಲ ಜೀವರಾಶಿಗೆ ಆರೋಗ್ಯಕರ ಪರಿಸರ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದೂ ಹೌದಲ್ಲವೇ? ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ, ‘ಮಗುವಿಗೊಂದು ಮರ’ ಎಂಬ ಪರಿಕಲ್ಪನೆ ಜೀವ ಪಡೆಯಲಿ. ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು, ಬೆಳೆಸಿ, ಆಮ್ಲಜನಕ ಕೊಳ್ಳುವ ದಿನ ಬಾರದಂತೆ ನೋಡಿಕೊಳ್ಳೋಣ.