ಚಲನಚಿತ್ರ ಸಾಹಿತಿ ಕೆ.ಕಲ್ಯಾಣ್ ಅವರ ಸಂಸಾರದಲ್ಲಿ ಬಿರುಕು ಮೂಡಿ, ಪೊಲೀಸ್ ಠಾಣೆಯ ಮೆಟ್ಟಿಲು ಏರಿರುವ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಈ ಕುರಿತ ಆರೋಪ, ಪ್ರತ್ಯಾರೋಪಗಳನ್ನು ಸಂಬಂಧಿಸಿದವರು ಪರಿಶೀಲಿಸಲಿ. ಆದರೆ ಮಾಟ ಮಂತ್ರ, ವಶೀಕರಣದಿಂದ ಸಂಸಾರದಲ್ಲಿ ಬಿರುಕು ಮೂಡಿತು ಎಂಬಂತಹ ಪರಸ್ಪರರ ಆರೋಪಗಳೇ ಹೆಚ್ಚಾಗಿ ಪ್ರಚಾರ ಪಡೆಯುತ್ತಿರುವುದನ್ನು ನೋಡಿದರೆ, ಮೂಢನಂಬಿಕೆಯ ವಿರುದ್ಧ ಕಾನೂನು ಮಾಡಿರುವುದು ಸುಳ್ಳೇ ಎಂಬ ಅನುಮಾನ ಮೂಡುತ್ತದೆ. ಮಾಟ, ಮಂತ್ರದಿಂದ ಬೇಕಾದವರನ್ನು ನಿಯಂತ್ರಿಸಬಹುದು ಎನ್ನುವಂತೆ ಬಿಂಬಿತವಾಗುತ್ತಿದೆ. ಮೂಢನಂಬಿಕೆಗಳಿಗೆ ಕುಮ್ಮಕ್ಕು ಕೊಡುವ ಇಂತಹ ಪ್ರಚಾರಗಳಿಗೆ ಮಹತ್ವ ಸಿಗುವುದು ಕೂಡಲೇ ನಿಲ್ಲಲಿ.