<p>‘ಪುಳಿಯೋಗರೆ’ ಎಂಬ ಪದವನ್ನು ಸರಿಯಾಗಿ ಉಚ್ಚರಿಸದ ವಿದ್ಯಾರ್ಥಿನಿಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಸಕಲೇಶಪುರ ತಾಲ್ಲೂಕಿನ ಶಿಕ್ಷಕರೊಬ್ಬರನ್ನು ಅಮಾನತು ಮಾಡಿರುವ ಸುದ್ದಿ ಓದಿ (ಪ್ರ.ವಾ., ಜ. 18) ಬೇಸರವಾಯಿತು.</p>.<p>ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯು ‘ಪಕ್ಕೆಲುಬು’ ಪದವನ್ನು ಉಚ್ಚರಿಸಲು ತಡವರಿಸುವುದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಹೂವಿನಹಡಗಲಿ ತಾಲ್ಲೂಕಿನ ಶಿಕ್ಷಕರೊಬ್ಬರು ಅಮಾನತಾಗಿರುವುದು ಗೊತ್ತಿದ್ದೂ ‘ಪುಳಿಯೋಗರೆ’ ವಿದ್ಯಮಾನ ನಡೆದಿದೆ!</p>.<p>ಹಾಗಾದರೆ, ಕನ್ನಡ ಪದಗಳ ಉಚ್ಚಾರಣೆ ಅಷ್ಟೊಂದು ಕಷ್ಟವೇ? ಹಿಂದೆ ನಾವೆಲ್ಲ ಕಲಿಯುವಾಗ ಕಾಗುಣಿತವನ್ನು ತಲೆಕಟ್ಟು, ಕೊಂಬು ಎಂದೆಲ್ಲ ವಿವರಿಸಿ ಕಲಿಸಲಾಗುತ್ತಿತ್ತು. ಈಗ ಬಹುತೇಕರು ಕ ಕಾ ಕಿ ಕೀ... ಎಂದಷ್ಟೇ ಹೇಳಿಕೊಡುತ್ತಿರುವುದರಿಂದ ಕೈ ಮೈ ಪರಚಿಕೊಂಡರೂ ಮಕ್ಕಳಿಗೆ ಪದಗಳ ಉಚ್ಚಾರಣೆ ಸ್ಪಷ್ಟವಾಗಿ ಬರುತ್ತಿಲ್ಲ. ಹೀಗಾಗಿ ಶಿಕ್ಷಕರು ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ.</p>.<p><em><strong>–ಅ.ಮೃತ್ಯುಂಜಯ,ಪಾಂಡವಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಪುಳಿಯೋಗರೆ’ ಎಂಬ ಪದವನ್ನು ಸರಿಯಾಗಿ ಉಚ್ಚರಿಸದ ವಿದ್ಯಾರ್ಥಿನಿಯ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ ಸಕಲೇಶಪುರ ತಾಲ್ಲೂಕಿನ ಶಿಕ್ಷಕರೊಬ್ಬರನ್ನು ಅಮಾನತು ಮಾಡಿರುವ ಸುದ್ದಿ ಓದಿ (ಪ್ರ.ವಾ., ಜ. 18) ಬೇಸರವಾಯಿತು.</p>.<p>ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯು ‘ಪಕ್ಕೆಲುಬು’ ಪದವನ್ನು ಉಚ್ಚರಿಸಲು ತಡವರಿಸುವುದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಹೂವಿನಹಡಗಲಿ ತಾಲ್ಲೂಕಿನ ಶಿಕ್ಷಕರೊಬ್ಬರು ಅಮಾನತಾಗಿರುವುದು ಗೊತ್ತಿದ್ದೂ ‘ಪುಳಿಯೋಗರೆ’ ವಿದ್ಯಮಾನ ನಡೆದಿದೆ!</p>.<p>ಹಾಗಾದರೆ, ಕನ್ನಡ ಪದಗಳ ಉಚ್ಚಾರಣೆ ಅಷ್ಟೊಂದು ಕಷ್ಟವೇ? ಹಿಂದೆ ನಾವೆಲ್ಲ ಕಲಿಯುವಾಗ ಕಾಗುಣಿತವನ್ನು ತಲೆಕಟ್ಟು, ಕೊಂಬು ಎಂದೆಲ್ಲ ವಿವರಿಸಿ ಕಲಿಸಲಾಗುತ್ತಿತ್ತು. ಈಗ ಬಹುತೇಕರು ಕ ಕಾ ಕಿ ಕೀ... ಎಂದಷ್ಟೇ ಹೇಳಿಕೊಡುತ್ತಿರುವುದರಿಂದ ಕೈ ಮೈ ಪರಚಿಕೊಂಡರೂ ಮಕ್ಕಳಿಗೆ ಪದಗಳ ಉಚ್ಚಾರಣೆ ಸ್ಪಷ್ಟವಾಗಿ ಬರುತ್ತಿಲ್ಲ. ಹೀಗಾಗಿ ಶಿಕ್ಷಕರು ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ.</p>.<p><em><strong>–ಅ.ಮೃತ್ಯುಂಜಯ,ಪಾಂಡವಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>