ಇಂದು ನಾವು ಉಸಿರು ನೀಡುವ ಹಸಿರನ್ನು ಹರಣ ಮಾಡಿ, ವಾಯು-ಜಲ-ಮಣ್ಣುಗಳ ಗುಣಮಟ್ಟವನ್ನು ನಾಶ ಮಾಡಿ ಕೇವಲ ಹಣದ ಹಿಂದೆ ಹೋಗುತ್ತಿದ್ದೇವೆ. ನಮ್ಮ ಎಲ್ಲ ಯೋಜನೆಗಳೂ ಪರಿಸರ ವ್ಯವಸ್ಥೆಗೆ ಕೊಡಲಿಪೆಟ್ಟು ಕೊಡುತ್ತಿವೆ. ಆದರೂ ಅದನ್ನು ಗಮನಿಸದೆ ಕೇವಲ ಅದರಿಂದ ಬರುವ ಆದಾಯದ ಮೇಲೆ ಕಣ್ಣು ನೆಟ್ಟಿದ್ದೇವೆ. ಈಗಾಗಲೇ ಪ್ರಕೃತಿ ಪ್ರತಿಕ್ರಿಯೆ ಕೊಡಲು ಆರಂಭಿಸಿದೆ. ಈಗಲೂ ಎಚ್ಚೆತ್ತುಕೊಳ್ಳದಿದ್ದರೆ, ಕಾರ್ಟೂನ್ನಲ್ಲಿರುವ ಬಾಲಕನ ಸ್ಥಿತಿ ನಿಜವಾಗುತ್ತಾ ಸಾಗುವುದರಲ್ಲಿ ಅನುಮಾನವಿಲ್ಲ.
-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ