ನಿಜ, ಪ್ರಜಾಪ್ರಭುತ್ವದಲ್ಲಿ ಎಂತೆಂಥ ಅವಕಾಶಗಳು ನಾಗರಿಕರಿಗೆ ದೊರೆಯುತ್ತವೆ. ಅದರಲ್ಲೂ ರಾಜಕೀಯ ಪಕ್ಷವೊಂದರ ಕಾರ್ಯಕರ್ತರಾದರೆ ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಿ ಸ್ಥಾನದವರೆಗೆ ಏರಲು ಸಾಧ್ಯವಿದೆ. ಅಡ್ಡದಾರಿ ಹಿಡಿಯದೆ ಸಂಯಮದಿಂದ ಸೇವೆ ಮಾಡಿದರೆ ಉನ್ನತ ಸ್ಥಾನ ಒಲಿಯುವ ಸಾಧ್ಯತೆ ಇದೆ. ಹಾದಿ ತಪ್ಪಿದರೆಜೈಲು ಪಾಲಾಗುವ ಸಂದರ್ಭವೂ ಎದುರಾಗಬಹುದು. ಪ್ರಜೆಗಳೇ ಪ್ರಭುಗಳಾಗುವ ಆಶಯದ ಪ್ರಜಾಪ್ರಭುತ್ವದ ಅಂತರಂಗ ನಿಜಕ್ಕೂ ಸೌಂದರ್ಯವರ್ಧಿನಿಯಾಗಿದೆ.