ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲ್ಲದ ಉಂಡೆ ತಿಂದಂತಾಯಿತು!

Last Updated 8 ಜುಲೈ 2021, 19:30 IST
ಅಕ್ಷರ ಗಾತ್ರ

ಮಹಿಳಾ ಜಿಲ್ಲಾಧಿಕಾರಿಯನ್ನು ಉದ್ದೇಶಿಸಿ ‘ಮನೆಯಲ್ಲಿ ಅಡುಗೆ ಮಾಡಿಕೊಂಡಿರಲಿ’ ಎಂಬ ಹೇಳಿಕೆ, ಸಂಸತ್‌ ಸದಸ್ಯೆಯರ ವಿರುದ್ಧ ವೈಯಕ್ತಿಕ ವಿಷಯಗಳ ಬಗೆಗೆ ಅವಹೇಳನಕಾರಿ ನಿಂದನೆಗಳನ್ನು ಕೇಳುತ್ತಿದ್ದ ರಾಜ್ಯದ ನನ್ನಂತಹ ಅನೇಕ ಹೆಣ್ಣುಮಕ್ಕಳಿಗೆ, ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸಚಿವೆಯಾಗುವ ಅವಕಾಶ ಸಿಕ್ಕಿರುವ ವಿಷಯವು ಬಾಯಿಗೆ ಸಣ್ಣ ಬೆಲ್ಲದ ಉಂಡೆಯನ್ನು ಹಾಕಿದಂತಾಗಿದೆ.

ಈವರೆಗೆ ಮಹಿಳಾ ಮುಖ್ಯಮಂತ್ರಿಯನ್ನು ಕಾಣದ, ಮುಂದೆ ಹಲವು ವರ್ಷಗಳವರೆಗೆ ಕಾಣುವ ಯಾವುದೇ ಸೂಚನೆ ಇಲ್ಲದಿರುವಾಗ, ರಾಜಕೀಯದಲ್ಲಿ ಮಹಿಳಾ ರಾಜಕಾರಣಿಗೆ ದೊರೆತ ಈ ಅವಕಾಶವೇ ದೊಡ್ಡದೆಂದು ಆಚರಿಸಬೇಕಾಗಿದೆ. ಕರ್ನಾಟಕದಂತಹ ವಿದ್ಯಾವಂತರ ರಾಜ್ಯದಲ್ಲಿಯೂ ಮಹಿಳೆಯರು ರಾಜಕೀಯದಲ್ಲಿ ಭಾಗವಹಿಸುವ ಪ್ರಮಾಣ ಅತ್ಯಂತ ಕಡಿಮೆ ಇರುವುದು ವಿಷಾದದ ಸಂಗತಿ.

–ಸುಪ್ರೀತಾ, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT