ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕೊಳಚೆಗೆ ಹೋಲಿಸಿದ್ದಾರೆ (ಪ್ರ.ವಾ., ಜೂನ್ 16). ಇದು ಸಚಿವ ಸ್ಥಾನಕ್ಕೆ ಗೌರವ ತರುವಂತಹ ಮಾತಲ್ಲ. ವೈಯಕ್ತಿಕ ರಾಜಕೀಯ ಏನೇ ಇರಲಿ, ಅದನ್ನು ಕೀಳು ಮಟ್ಟದ ಭಾಷೆಯ ಮೂಲಕ ತೋರ್ಪಡಿಸುವುದು ನಾಯಕತ್ವದ ಲಕ್ಷಣ ಅಲ್ಲ.
ಲಕ್ಷ್ಮಿ ಅವರು ಸಾವಿರಾರು ಮತದಾರರ ಮನಗೆದ್ದು ಶಾಸಕಿಯಾದವರು ಎಂಬುದನ್ನು ಜಾರಕಿಹೊಳಿಯವರು ನೆನಪಿಡಬೇಕು. ಅವರು ಹೀಗೆ ಕೀಳುಮಟ್ಟದ ಭಾಷೆಯ ಮೂಲಕ ಹೆಣ್ಣು ಮಕ್ಕಳನ್ನು ನಿಂದಿಸಿದರೆ, ಅವರ ನಾಯಕ ನರೇಂದ್ರ ಮೋದಿಯವರ ‘ಬೇಟಿ ಬಚಾವೋ ಬೇಟಿ ಪಢಾವೋ’ ಘೋಷಣೆಗೆ ಮಹತ್ವ ಬರುವುದಾದರೂ ಹೇಗೆ?