ಇಡೀ ಜಗತ್ತಿಗೆ ಕೊರೊನಾ ವೈರಾಣು ಹರಡಲು ಕಾರಣವಾದ ಚೀನಾ, ಇದೀಗ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದೆ. ದೇಶದ ಭದ್ರತೆಯ ವಿಚಾರ ಬಂದಾಗ ನಾವೆಲ್ಲರೂ ರಾಜಕೀಯ ಬಿಟ್ಟು ಒಂದಾಗಿ, ಪ್ರಧಾನಿ ಹಾಗೂ ಸೈನಿಕರ ಜೊತೆ ನಿಲ್ಲಬೇಕು. ಆದಷ್ಟು ಸ್ವದೇಶಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಆರ್ಥಿಕವಾಗಿ ಚೀನಾಗೆ ಲಾಭವಾಗದಂತೆ ಮಾಡಬೇಕು.