ಕ್ಯಾನ್ಸರ್ಪೀಡಿತರು ಈಶಾನ್ಯ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚಾಗಿದ್ದು, ರೋಗಿಗಳು ಶಿವಮೊಗ್ಗ ಅಥವಾ ಮೈಸೂರಿಗೆ ಬರಲು ಚಿಕಿತ್ಸಾ ವೆಚ್ಚಕ್ಕಿಂತ ಸಾರಿಗೆ ವೆಚ್ಚವನ್ನೇ ಹೆಚ್ಚಾಗಿ ಭರಿಸಬೇಕಾಗುತ್ತದೆ. ಆದ್ದರಿಂದ ಎರಡರಲ್ಲಿ ಒಂದು ಕೇಂದ್ರವನ್ನಾದರೂ ಈ ಭಾಗದಲ್ಲಿ ಸ್ಥಾಪಿಸಿದರೆ ಕೇಂದ್ರ ಸ್ಥಾಪನೆಯ ನಿಜವಾದ ಉದ್ದೇಶ ಈಡೇರಿದಂತಾಗುತ್ತದೆ.