ಗುಜರಾತ್ನಲ್ಲಿ ನಾಥೂರಾಂ ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಹಿಂದೂ ಸೇನಾ ನಿರ್ಧರಿಸಿರುವ ಸುದ್ದಿ (ಪ್ರ.ವಾ.,
ಸೆ. 13 ) ಓದಿ ತುಂಬಾ ಬೇಸರವಾಯಿತು. ಮಹಾತ್ಮ ಗಾಂಧಿಯವರ ಹಂತಕ ಗೋಡ್ಸೆಯ ಆರಾಧನೆಯೆಂದರೆ ಅದು ಪರೋಕ್ಷವಾಗಿ ಗಾಂಧೀಜಿಯನ್ನು ಹಾಗೂ ಅವರ ತತ್ವ, ಸಿದ್ಧಾಂತಗಳನ್ನು ವಿರೋಧಿಸುವುದೆಂದೇ ಅರ್ಥ! ಇದು ದೇಶದ್ರೋಹವಾಗುವುದಿಲ್ಲವೇ?