ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡ್ಸೆ ಆರಾಧಕರ ಬಗ್ಗೆ ಮೌನವೇಕೆ?

Last Updated 13 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಗುಜರಾತ್‌ನಲ್ಲಿ ನಾಥೂರಾಂ ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಹಿಂದೂ ಸೇನಾ ನಿರ್ಧರಿಸಿರುವ ಸುದ್ದಿ (ಪ್ರ.ವಾ.,
ಸೆ. 13 ) ಓದಿ ತುಂಬಾ ಬೇಸರವಾಯಿತು. ಮಹಾತ್ಮ ಗಾಂಧಿಯವರ ಹಂತಕ ಗೋಡ್ಸೆಯ ಆರಾಧನೆಯೆಂದರೆ ಅದು ಪರೋಕ್ಷವಾಗಿ ಗಾಂಧೀಜಿಯನ್ನು ಹಾಗೂ ಅವರ ತತ್ವ, ಸಿದ್ಧಾಂತಗಳನ್ನು ವಿರೋಧಿಸುವುದೆಂದೇ ಅರ್ಥ! ಇದು ದೇಶದ್ರೋಹವಾಗುವುದಿಲ್ಲವೇ?

ಅಷ್ಟಕ್ಕೂ ಗಾಂಧೀಜಿ ಈ ದೇಶಕ್ಕೆ ಮಾಡಿದ ದ್ರೋಹವಾದರೂ ಏನು? ತಮ್ಮೆಲ್ಲಾ ವೈಯಕ್ತಿಕ ಜೀವನವನ್ನು ದೇಶಕ್ಕಾಗಿ ಧಾರೆಯೆರೆದು ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಅವರ ತಪ್ಪೇ? ಇಂದಿನ ಯುವಕರಿಗೆ ಗಾಂಧೀಜಿ ಆದರ್ಶವಾಗಬೇಕೇ ವಿನಾ ಗೋಡ್ಸೆಯಲ್ಲ. ಗೋಡ್ಸೆ ಆರಾಧಕರ ಬಗ್ಗೆ ಜಾಣಮೌನ ವಹಿಸುತ್ತಿರುವ ಸರ್ಕಾರಗಳು ಸಮಾಜಕ್ಕೆ ಏನು ಸಂದೇಶ ಕೊಡಲು ಹೊರಟಿವೆ ಎಂಬುದು ಬಹಿರಂಗವಾಗಬೇಕಾಗಿದೆ.

ಚಾವಲ್ಮನೆ ಸುರೇಶ್ ನಾಯಕ್, ಹಾಲ್ಮತ್ತೂರು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT