<p>ಬಿಎಂಟಿಸಿಯ ಕೆಲವು ಬಸ್ಸುಗಳಲ್ಲಿ ಮುಂದಿನ ನಿಲ್ದಾಣ, ಇಳಿಯಬೇಕಾದ ನಿಲ್ದಾಣ ಕುರಿತು ಧ್ವನಿವರ್ಧಕದಲ್ಲಿ ಘೋಷಣೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಅದನ್ನು ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಶಿಸ್ತು, ಬದ್ಧತೆ, ಇಲ್ಲದಿದ್ದರೆ ಒಂದು ಉಪಯುಕ್ತ ವ್ಯವಸ್ಥೆಯು ಅನಾಹುತಕಾರಿಯಾಗಬಹುದು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.<br /> <br /> ಅಂಥವುಗಳಲ್ಲಿ ನಿಲುಗಡೆಗಳ ಹೆಸರುಗಳನ್ನು ತಪ್ಪುತಪ್ಪಾಗಿ ಘೋಷಿಸಿ, ಪ್ರಯಾಣಿಕರನ್ನು ಗೊಂದಲಕ್ಕೆ ಈಡುಮಾಡುವುದೂ ಒಂದು. ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊಸಕೆರೆಹಳ್ಳಿ ಕೆರೆಕೋಡಿಗೆ ಹೋಗುವ 43ಸಿ ಬಸ್ ಈ ಮಾರ್ಗದಲ್ಲಿ ಓಡಾಟ ಪ್ರಾರಂಭಿಸಿದಾಗಿನಿಂದಲೂ ಸರಿಯಾದ ಮಾರ್ಗಸೂಚಿ ಫಲಕವನ್ನು ಅಳವಡಿಸಿಕೊಂಡಿತ್ತು.<br /> <br /> ಆದರೆ ಇದೀಗ ಧ್ವನಿವರ್ಧಕದ ಘೋಷಣೆ ಹೊಸಕೆರೆಹಳ್ಳಿ ಕೆರೆಕೋಡಿಯ ನೂರಾರು ವರ್ಷಗಳ ಇತಿಹಾಸವನ್ನು ತಿರುಚಿ ಅದನ್ನು ‘ಮುನೇಶ್ವರನಗರ ಕೆರೆಕೋಡಿ’ ಎಂದು ಕಿರುಚುತ್ತಿದೆ. ಕೆರೆಕೋಡಿಗಿಂತ ಮುನೇಶ್ವರನಗರ ಎರಡು ನಿಲುಗಡೆ ಹಿಂದೆ ಇದೆ. ಸಂಬಂಧಪಟ್ಟವರು ಇದರತ್ತ ಗಮನಹರಿಸಬೇಕಾಗಿ ವಿನಂತಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಿಎಂಟಿಸಿಯ ಕೆಲವು ಬಸ್ಸುಗಳಲ್ಲಿ ಮುಂದಿನ ನಿಲ್ದಾಣ, ಇಳಿಯಬೇಕಾದ ನಿಲ್ದಾಣ ಕುರಿತು ಧ್ವನಿವರ್ಧಕದಲ್ಲಿ ಘೋಷಣೆ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಅದನ್ನು ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಶಿಸ್ತು, ಬದ್ಧತೆ, ಇಲ್ಲದಿದ್ದರೆ ಒಂದು ಉಪಯುಕ್ತ ವ್ಯವಸ್ಥೆಯು ಅನಾಹುತಕಾರಿಯಾಗಬಹುದು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ.<br /> <br /> ಅಂಥವುಗಳಲ್ಲಿ ನಿಲುಗಡೆಗಳ ಹೆಸರುಗಳನ್ನು ತಪ್ಪುತಪ್ಪಾಗಿ ಘೋಷಿಸಿ, ಪ್ರಯಾಣಿಕರನ್ನು ಗೊಂದಲಕ್ಕೆ ಈಡುಮಾಡುವುದೂ ಒಂದು. ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊಸಕೆರೆಹಳ್ಳಿ ಕೆರೆಕೋಡಿಗೆ ಹೋಗುವ 43ಸಿ ಬಸ್ ಈ ಮಾರ್ಗದಲ್ಲಿ ಓಡಾಟ ಪ್ರಾರಂಭಿಸಿದಾಗಿನಿಂದಲೂ ಸರಿಯಾದ ಮಾರ್ಗಸೂಚಿ ಫಲಕವನ್ನು ಅಳವಡಿಸಿಕೊಂಡಿತ್ತು.<br /> <br /> ಆದರೆ ಇದೀಗ ಧ್ವನಿವರ್ಧಕದ ಘೋಷಣೆ ಹೊಸಕೆರೆಹಳ್ಳಿ ಕೆರೆಕೋಡಿಯ ನೂರಾರು ವರ್ಷಗಳ ಇತಿಹಾಸವನ್ನು ತಿರುಚಿ ಅದನ್ನು ‘ಮುನೇಶ್ವರನಗರ ಕೆರೆಕೋಡಿ’ ಎಂದು ಕಿರುಚುತ್ತಿದೆ. ಕೆರೆಕೋಡಿಗಿಂತ ಮುನೇಶ್ವರನಗರ ಎರಡು ನಿಲುಗಡೆ ಹಿಂದೆ ಇದೆ. ಸಂಬಂಧಪಟ್ಟವರು ಇದರತ್ತ ಗಮನಹರಿಸಬೇಕಾಗಿ ವಿನಂತಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>