<p>ಹುಬ್ಬಳ್ಳಿಯ ಮೂರುಸಾವಿರಮಠ ತನ್ನ ಎಲ್ಲೆಗಳನ್ನು ಮೀರಿ ಸರ್ವಧರ್ಮ ಸಮನ್ವಯದ ಹಾದಿಯಲ್ಲಿ ಸಾಗಿ ಬಂದದ್ದಕ್ಕೆ ಅನೇಕ ನಿದರ್ಶನಗಳೇ ಇವೆ. ಜೊತೆಗೆ ವಿಶ್ವಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ ಮಠವಿದು.<br /> <br /> ಬರಗಾಲದಲ್ಲಿ ಲಕ್ಷಾಂತರ ಜನರಿಗಾಗಿ ಗಂಜಿ ಕೇಂದ್ರಗಳನ್ನು ತೆರೆದ ಮಠ. ಆದರೆ ಮಹಾನಗರದ ಹೃದಯ ಭಾಗದಲ್ಲೇ ಇರುವ ಈ ಮಠದ ಅಗಣಿತ ಆಸ್ತಿ–ಸಂಪತ್ತುಗಳ ಲವಲವಿಕೆಗಳೇ ಹೆಚ್ಚಾಗಿ ಅದರ ಮೂಲಭೂತ ಮೌಲ್ಯಗಳು ಬಿದ್ದುಹೋಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.<br /> <br /> ಈ ಸಂಪತ್ತಿನ ಗುರುತ್ವಾಕರ್ಷಣೆಗೆ ಸ್ವಾಮಿಗಳು ಮಾತ್ರವಲ್ಲದೇ, ಭಕ್ತರೂ ಒಳಗಾಗಿರುವುದು ದುರಂತ. ಮೂರುಸಾವಿರಮಠದ ಚಾರಿತ್ರಿಕ ಒಲವು–ನಿಲುವುಗಳು ಮುಂದುವರಿಯಬೇಕಾದರೆ ‘ಮಠದೊಳಗಣ ರಾಜಕಾರಣ’ವನ್ನು ಮೀರಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಗುಣಾತ್ಮಕ ಮೌಲ್ಯಗಳತ್ತ ದುಡಿಯಬಲ್ಲ ಸಮರ್ಥರನ್ನು ಆಯ್ಕೆ ಮಾಡುವುದೇ ಸೂಕ್ತ.<br /> <br /> ಹಿಗ್ಗಾಮುಗ್ಗಾ ಕೈರಟ್ಟೆಯ ಬಲದ ಹಗ್ಗಜಗ್ಗಾಟವೇ ಮುಂದುವರಿದರೆ, ಅದರಲ್ಲಿ ಮಠದ ಹೆಸರೇ ಮುಗ್ಗುಸಾಗುವುದು ತಪ್ಪಲಾರದ ದುರಂತ. ಶರಣಸಿದ್ಧಾಂತದ ಅಡಿಗಲ್ಲಿನ ಮೇಲೆ ಮನುಕುಲದ ಸೇವೆ ಮಾಡಬಲ್ಲ ಸಮರ್ಥರು ಇದ್ದೇ ಇದ್ದಾರೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿಯ ಮೂರುಸಾವಿರಮಠ ತನ್ನ ಎಲ್ಲೆಗಳನ್ನು ಮೀರಿ ಸರ್ವಧರ್ಮ ಸಮನ್ವಯದ ಹಾದಿಯಲ್ಲಿ ಸಾಗಿ ಬಂದದ್ದಕ್ಕೆ ಅನೇಕ ನಿದರ್ಶನಗಳೇ ಇವೆ. ಜೊತೆಗೆ ವಿಶ್ವಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ ಮಠವಿದು.<br /> <br /> ಬರಗಾಲದಲ್ಲಿ ಲಕ್ಷಾಂತರ ಜನರಿಗಾಗಿ ಗಂಜಿ ಕೇಂದ್ರಗಳನ್ನು ತೆರೆದ ಮಠ. ಆದರೆ ಮಹಾನಗರದ ಹೃದಯ ಭಾಗದಲ್ಲೇ ಇರುವ ಈ ಮಠದ ಅಗಣಿತ ಆಸ್ತಿ–ಸಂಪತ್ತುಗಳ ಲವಲವಿಕೆಗಳೇ ಹೆಚ್ಚಾಗಿ ಅದರ ಮೂಲಭೂತ ಮೌಲ್ಯಗಳು ಬಿದ್ದುಹೋಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.<br /> <br /> ಈ ಸಂಪತ್ತಿನ ಗುರುತ್ವಾಕರ್ಷಣೆಗೆ ಸ್ವಾಮಿಗಳು ಮಾತ್ರವಲ್ಲದೇ, ಭಕ್ತರೂ ಒಳಗಾಗಿರುವುದು ದುರಂತ. ಮೂರುಸಾವಿರಮಠದ ಚಾರಿತ್ರಿಕ ಒಲವು–ನಿಲುವುಗಳು ಮುಂದುವರಿಯಬೇಕಾದರೆ ‘ಮಠದೊಳಗಣ ರಾಜಕಾರಣ’ವನ್ನು ಮೀರಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಗುಣಾತ್ಮಕ ಮೌಲ್ಯಗಳತ್ತ ದುಡಿಯಬಲ್ಲ ಸಮರ್ಥರನ್ನು ಆಯ್ಕೆ ಮಾಡುವುದೇ ಸೂಕ್ತ.<br /> <br /> ಹಿಗ್ಗಾಮುಗ್ಗಾ ಕೈರಟ್ಟೆಯ ಬಲದ ಹಗ್ಗಜಗ್ಗಾಟವೇ ಮುಂದುವರಿದರೆ, ಅದರಲ್ಲಿ ಮಠದ ಹೆಸರೇ ಮುಗ್ಗುಸಾಗುವುದು ತಪ್ಪಲಾರದ ದುರಂತ. ಶರಣಸಿದ್ಧಾಂತದ ಅಡಿಗಲ್ಲಿನ ಮೇಲೆ ಮನುಕುಲದ ಸೇವೆ ಮಾಡಬಲ್ಲ ಸಮರ್ಥರು ಇದ್ದೇ ಇದ್ದಾರೆ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>