ಹುಬ್ಬಳ್ಳಿಯ ಮೂರುಸಾವಿರಮಠ ತನ್ನ ಎಲ್ಲೆಗಳನ್ನು ಮೀರಿ ಸರ್ವಧರ್ಮ ಸಮನ್ವಯದ ಹಾದಿಯಲ್ಲಿ ಸಾಗಿ ಬಂದದ್ದಕ್ಕೆ ಅನೇಕ ನಿದರ್ಶನಗಳೇ ಇವೆ. ಜೊತೆಗೆ ವಿಶ್ವಶಾಂತಿ ಸಮ್ಮೇಳನದಲ್ಲಿ ಭಾಗವಹಿಸಿದ ಮಠವಿದು.
ಬರಗಾಲದಲ್ಲಿ ಲಕ್ಷಾಂತರ ಜನರಿಗಾಗಿ ಗಂಜಿ ಕೇಂದ್ರಗಳನ್ನು ತೆರೆದ ಮಠ. ಆದರೆ ಮಹಾನಗರದ ಹೃದಯ ಭಾಗದಲ್ಲೇ ಇರುವ ಈ ಮಠದ ಅಗಣಿತ ಆಸ್ತಿ–ಸಂಪತ್ತುಗಳ ಲವಲವಿಕೆಗಳೇ ಹೆಚ್ಚಾಗಿ ಅದರ ಮೂಲಭೂತ ಮೌಲ್ಯಗಳು ಬಿದ್ದುಹೋಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಈ ಸಂಪತ್ತಿನ ಗುರುತ್ವಾಕರ್ಷಣೆಗೆ ಸ್ವಾಮಿಗಳು ಮಾತ್ರವಲ್ಲದೇ, ಭಕ್ತರೂ ಒಳಗಾಗಿರುವುದು ದುರಂತ. ಮೂರುಸಾವಿರಮಠದ ಚಾರಿತ್ರಿಕ ಒಲವು–ನಿಲುವುಗಳು ಮುಂದುವರಿಯಬೇಕಾದರೆ ‘ಮಠದೊಳಗಣ ರಾಜಕಾರಣ’ವನ್ನು ಮೀರಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಗುಣಾತ್ಮಕ ಮೌಲ್ಯಗಳತ್ತ ದುಡಿಯಬಲ್ಲ ಸಮರ್ಥರನ್ನು ಆಯ್ಕೆ ಮಾಡುವುದೇ ಸೂಕ್ತ.
ಹಿಗ್ಗಾಮುಗ್ಗಾ ಕೈರಟ್ಟೆಯ ಬಲದ ಹಗ್ಗಜಗ್ಗಾಟವೇ ಮುಂದುವರಿದರೆ, ಅದರಲ್ಲಿ ಮಠದ ಹೆಸರೇ ಮುಗ್ಗುಸಾಗುವುದು ತಪ್ಪಲಾರದ ದುರಂತ. ಶರಣಸಿದ್ಧಾಂತದ ಅಡಿಗಲ್ಲಿನ ಮೇಲೆ ಮನುಕುಲದ ಸೇವೆ ಮಾಡಬಲ್ಲ ಸಮರ್ಥರು ಇದ್ದೇ ಇದ್ದಾರೆ!