ಸಮಾಜದ ಹಿತವನ್ನೇ ಬಲಿ ಕೊಡುತ್ತಿರುವ ಇಂದಿನ ಸನ್ನಿವೇಶದಲ್ಲಿ ಮದ್ಯಪಾನ ನಿಷೇಧವಾಗ ಬೇಕೆಂದು ಎಲ್ಲ ಹೆಣ್ಣು ಮಕ್ಕಳ ಒಡಲ ದನಿಯು ಹೌದು. ಕಟ್ಟೆ ಮಳಲವಾಡಿ ಹಳ್ಳಿಯ ಘಟನೆಯು ಇದಕ್ಕೆ ಪುಷ್ಟಿನೀಡುತ್ತದೆ.ಮದ್ಯಪಾನ ನಿಯಂತ್ರಣ ದಿಂದ ಪೊಲೀಸ್ ನ್ಯಾಯಾಂಗ ವ್ಯವಸ್ಥೆಯ ಖರ್ಚನ್ನು ಕಡಿಮೆ ಮಾಡಬಹುದು ಎಂಬುದು ಹೊಸ ದೃಷ್ಟಿಕೋನವಾಗಿದೆ.