<p>ಬೆಂಗಳೂರು ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಮಳೆ ಬಂದು ಸಾರ್ವಜನಿಕರಿಗೆ ತೊಂದರೆಯಾದಾಗ ಬಿ.ಬಿ.ಎಂ.ಪಿ.ಯ ಆಯುಕ್ತರಿಂದ ಹಿಡಿದು ಸಚಿವರು ‘ರಾಜಕಾಲುವೆಯನ್ನು ಎಷ್ಟೇ ಪ್ರಭಾವಶಾಲಿಗಳು ಒತ್ತುವರಿ ಮಾಡಿದ್ದರೂ ಅದನ್ನು ತೆರವುಗೊಳಿಸಿ ಚರಂಡಿಯ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುವುದಾಗಿ’ ಹೇಳುತ್ತಲೇ ಇರುತ್ತಾರೆ.<br /> <br /> ಈ ಮಾತುಗಳನ್ನು ಬೆಂಗಳೂರು ನಗರದ ನಾಗರಿಕರು ಕೇಳಿ ಕೇಳಿ ಕಿವಿಗಳು ತೂತಾಗಿರುತ್ತವೆ. ರಾಜ್ಯ ಸರ್ಕಾರಕ್ಕೆ ರಾಜಕಾಲುವೆ ಒತ್ತುವರಿ ಬಗ್ಗೆ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿರುವವರ ವಿವರಗಳು ಬೇಕಾದರೆ ಕೈಗನ್ನಡಿಯಂತಿರುವ ಎ. ಟಿ. ರಾಮಸ್ವಾಮಿರವರ ವರದಿಯನ್ನು ಸದನದಲ್ಲಿ ಮಂಡಿಸಿ ಆ ವರದಿ ಆಧಾರದ ಮೇಲೆ ಕ್ರಮ ಜರುಗಿಸಬಹುದು. ವಾಸ್ತವವಾಗಿ ನಗರದಲ್ಲಿ ನೂರಾರು ಕಿ.ಮೀ.ಗಳ ರಾಜಕಾಲುವೆ ಅನೇಕ ಕಡೆಗಳಲ್ಲಿ ಅತ್ಯಂತ ಗಣ್ಯರಿಂದ ಒತ್ತುವರಿಯಾಗಿರುತ್ತದೆ.<br /> <br /> ಮಳೆ ಬಂದು ಅಪಾಯವಾದಾಗ ಆವೇಶದ ಹೇಳಿಕೆಗಳನ್ನು ಕೊಡುವ ಸಂದರ್ಭದಲ್ಲಿ ಇವರ ಹಿಂದೆಯೇ ಇಂತಹ ಜನರು ಅಲ್ಲಿಯೇ ಇರುತ್ತಾರೆ. ಎ. ಟಿ. ರಾಮಸ್ವಾಮಿ ವರದಿಯನ್ನು ಸರ್ಕಾರ ಒಪ್ಪಿಕೊಂಡು ಅಗತ್ಯ ಕ್ರಮ ಕೈಗೊಂಡರೆ ಬೆಂಗಳೂರಿಗೆ ಆಗಬಹುದಾದ ಅಪಾಯಗಳನ್ನು ಶಾಶ್ವತವಾಗಿ ತಪ್ಪಿಸಬಹುದು.<br /> <br /> ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರೆದಿದ್ದರೂ ಬಿ.ಬಿ.ಎಂ.ಪಿ. ಕಚೇರಿಯಲ್ಲಿ ನಗರದ ರಾಜಕಾಲುವೆಯ ನೀಲನಕ್ಷೆ ಸಿದ್ಧವಿರುವುದಿಲ್ಲ. ಮಾತನಾಡುವ ಮೊದಲು ರಾಜಕಾಲುವೆಯ ನೀಲನಕ್ಷೆಯನ್ನು ಸಿದ್ಧಪಡಿಸಿ ಎಲ್ಲೆಲ್ಲಿ ಇದಕ್ಕೆ ತಡೆಗೋಡೆಗಳನ್ನು ನಿರ್ಮಿಸಬೇಕು. ಎಷ್ಟು ಕಡೆಗಳಲ್ಲಿ ಈ ಚರಂಡಿ ನೀರಿನಿಂದ ವಿದ್ಯುತ್ ಉತ್ಪಾದಿಸಬಹುದು. ಅಥವಾ ನೀರನ್ನು ಶುದ್ಧೀಕರಿಸಿ ಬೇರೆ ಬೇರೆ ಉದ್ದೇಶಗಳಿಗೆ ನೀಡಬಹುದು ಎನ್ನುವಂತಹ ಸಮಗ್ರವಾದ ಯೋಜನೆಯನ್ನು ಸಿದ್ಧಪಡಿಸಬೇಕು. ಇಲ್ಲದಿದ್ದರೆ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಪ್ರಯೋಜನಕ್ಕೆ ಬರದ ತೇಪೆ ಕೆಲಸಗಳು ನಡೆಯುತ್ತಲೇ ಇರುತ್ತವೆ.<br /> <br /> ಬಾಪೂಜಿ ನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದಿರುವ ದುಃಸ್ಥಿತಿಯನ್ನು ಕಂಡಾಗ ಮನಸ್ಸಿಗೆ ನೋವಾಗುತ್ತದೆ. ಅಲ್ಲಿನ ಹಿರಿಯ ನಾಗರಿಕರನ್ನು ಚುನಾಯಿತ ಪ್ರತಿನಿಧಿಗಳನ್ನು ಸಭೆ ಸೇರಿಸಿ ಅಗತ್ಯವಾದರೆ ಇಡೀ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿ ಪುನರ್ ನಿರ್ಮಾಣ ಮಾಡುವುದು ಅತ್ಯಂತ ಸೂಕ್ತವಾಗಿರುತ್ತದೆ.<br /> <br /> ಕಾಲಕಾಲಕ್ಕೆ ಅನೇಕ ದೇವಾಲಯಗಳು ಪರಿಸ್ಥಿತಿಯ ಹಿನ್ನಲೆಯಲ್ಲಿ ಪುನರ್ ನಿರ್ಮಾಣವಾಗಿರುತ್ತದೆ. ಈ ದೇವಾಲಯದ ವಿಚಾರದಲ್ಲಿ ಬಿ.ಬಿ.ಎಂ.ಪಿ. ನಡೆಸುತ್ತಿರುವ ತಡೆಗೋಡೆ ಕಾಮಗಾರಿಗಳು ತಿಪ್ಪೆ ಸಾರಿಸುವ ಕೆಲಸವಾಗುತ್ತದೇ ಹೊರತು ಯೋಜನಾ ಬದ್ಧವಾದಂತಹ ಕಾಮಗಾರಿಯಾಗುವುದಿಲ್ಲ.<br /> <br /> ಇದರಿಂದ ದೇವಸ್ಥಾನದ ಅಂದಕ್ಕೂ ಸ್ವಲ್ಪ ಮಟ್ಟಿಗೆ ಭಂಗವಾಗಿರುತ್ತದೆ. ಆದುದರಿಂದ ಬೆಂಗಳೂರು ನಗರದ ಅತ್ಯಂತ ಪುರಾತನವಾದ ಈ ದೇವಾಲಯದ ಪುನರ್ ನಿರ್ಮಾಣ ಕಾರ್ಯದ ಚಿಂತನೆ ನಡೆಸುವುದು ಈಗ ಸಕಾಲಿಕ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಮಳೆ ಬಂದು ಸಾರ್ವಜನಿಕರಿಗೆ ತೊಂದರೆಯಾದಾಗ ಬಿ.ಬಿ.ಎಂ.ಪಿ.ಯ ಆಯುಕ್ತರಿಂದ ಹಿಡಿದು ಸಚಿವರು ‘ರಾಜಕಾಲುವೆಯನ್ನು ಎಷ್ಟೇ ಪ್ರಭಾವಶಾಲಿಗಳು ಒತ್ತುವರಿ ಮಾಡಿದ್ದರೂ ಅದನ್ನು ತೆರವುಗೊಳಿಸಿ ಚರಂಡಿಯ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುವುದಾಗಿ’ ಹೇಳುತ್ತಲೇ ಇರುತ್ತಾರೆ.<br /> <br /> ಈ ಮಾತುಗಳನ್ನು ಬೆಂಗಳೂರು ನಗರದ ನಾಗರಿಕರು ಕೇಳಿ ಕೇಳಿ ಕಿವಿಗಳು ತೂತಾಗಿರುತ್ತವೆ. ರಾಜ್ಯ ಸರ್ಕಾರಕ್ಕೆ ರಾಜಕಾಲುವೆ ಒತ್ತುವರಿ ಬಗ್ಗೆ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿರುವವರ ವಿವರಗಳು ಬೇಕಾದರೆ ಕೈಗನ್ನಡಿಯಂತಿರುವ ಎ. ಟಿ. ರಾಮಸ್ವಾಮಿರವರ ವರದಿಯನ್ನು ಸದನದಲ್ಲಿ ಮಂಡಿಸಿ ಆ ವರದಿ ಆಧಾರದ ಮೇಲೆ ಕ್ರಮ ಜರುಗಿಸಬಹುದು. ವಾಸ್ತವವಾಗಿ ನಗರದಲ್ಲಿ ನೂರಾರು ಕಿ.ಮೀ.ಗಳ ರಾಜಕಾಲುವೆ ಅನೇಕ ಕಡೆಗಳಲ್ಲಿ ಅತ್ಯಂತ ಗಣ್ಯರಿಂದ ಒತ್ತುವರಿಯಾಗಿರುತ್ತದೆ.<br /> <br /> ಮಳೆ ಬಂದು ಅಪಾಯವಾದಾಗ ಆವೇಶದ ಹೇಳಿಕೆಗಳನ್ನು ಕೊಡುವ ಸಂದರ್ಭದಲ್ಲಿ ಇವರ ಹಿಂದೆಯೇ ಇಂತಹ ಜನರು ಅಲ್ಲಿಯೇ ಇರುತ್ತಾರೆ. ಎ. ಟಿ. ರಾಮಸ್ವಾಮಿ ವರದಿಯನ್ನು ಸರ್ಕಾರ ಒಪ್ಪಿಕೊಂಡು ಅಗತ್ಯ ಕ್ರಮ ಕೈಗೊಂಡರೆ ಬೆಂಗಳೂರಿಗೆ ಆಗಬಹುದಾದ ಅಪಾಯಗಳನ್ನು ಶಾಶ್ವತವಾಗಿ ತಪ್ಪಿಸಬಹುದು.<br /> <br /> ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರೆದಿದ್ದರೂ ಬಿ.ಬಿ.ಎಂ.ಪಿ. ಕಚೇರಿಯಲ್ಲಿ ನಗರದ ರಾಜಕಾಲುವೆಯ ನೀಲನಕ್ಷೆ ಸಿದ್ಧವಿರುವುದಿಲ್ಲ. ಮಾತನಾಡುವ ಮೊದಲು ರಾಜಕಾಲುವೆಯ ನೀಲನಕ್ಷೆಯನ್ನು ಸಿದ್ಧಪಡಿಸಿ ಎಲ್ಲೆಲ್ಲಿ ಇದಕ್ಕೆ ತಡೆಗೋಡೆಗಳನ್ನು ನಿರ್ಮಿಸಬೇಕು. ಎಷ್ಟು ಕಡೆಗಳಲ್ಲಿ ಈ ಚರಂಡಿ ನೀರಿನಿಂದ ವಿದ್ಯುತ್ ಉತ್ಪಾದಿಸಬಹುದು. ಅಥವಾ ನೀರನ್ನು ಶುದ್ಧೀಕರಿಸಿ ಬೇರೆ ಬೇರೆ ಉದ್ದೇಶಗಳಿಗೆ ನೀಡಬಹುದು ಎನ್ನುವಂತಹ ಸಮಗ್ರವಾದ ಯೋಜನೆಯನ್ನು ಸಿದ್ಧಪಡಿಸಬೇಕು. ಇಲ್ಲದಿದ್ದರೆ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಪ್ರಯೋಜನಕ್ಕೆ ಬರದ ತೇಪೆ ಕೆಲಸಗಳು ನಡೆಯುತ್ತಲೇ ಇರುತ್ತವೆ.<br /> <br /> ಬಾಪೂಜಿ ನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದಿರುವ ದುಃಸ್ಥಿತಿಯನ್ನು ಕಂಡಾಗ ಮನಸ್ಸಿಗೆ ನೋವಾಗುತ್ತದೆ. ಅಲ್ಲಿನ ಹಿರಿಯ ನಾಗರಿಕರನ್ನು ಚುನಾಯಿತ ಪ್ರತಿನಿಧಿಗಳನ್ನು ಸಭೆ ಸೇರಿಸಿ ಅಗತ್ಯವಾದರೆ ಇಡೀ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿ ಪುನರ್ ನಿರ್ಮಾಣ ಮಾಡುವುದು ಅತ್ಯಂತ ಸೂಕ್ತವಾಗಿರುತ್ತದೆ.<br /> <br /> ಕಾಲಕಾಲಕ್ಕೆ ಅನೇಕ ದೇವಾಲಯಗಳು ಪರಿಸ್ಥಿತಿಯ ಹಿನ್ನಲೆಯಲ್ಲಿ ಪುನರ್ ನಿರ್ಮಾಣವಾಗಿರುತ್ತದೆ. ಈ ದೇವಾಲಯದ ವಿಚಾರದಲ್ಲಿ ಬಿ.ಬಿ.ಎಂ.ಪಿ. ನಡೆಸುತ್ತಿರುವ ತಡೆಗೋಡೆ ಕಾಮಗಾರಿಗಳು ತಿಪ್ಪೆ ಸಾರಿಸುವ ಕೆಲಸವಾಗುತ್ತದೇ ಹೊರತು ಯೋಜನಾ ಬದ್ಧವಾದಂತಹ ಕಾಮಗಾರಿಯಾಗುವುದಿಲ್ಲ.<br /> <br /> ಇದರಿಂದ ದೇವಸ್ಥಾನದ ಅಂದಕ್ಕೂ ಸ್ವಲ್ಪ ಮಟ್ಟಿಗೆ ಭಂಗವಾಗಿರುತ್ತದೆ. ಆದುದರಿಂದ ಬೆಂಗಳೂರು ನಗರದ ಅತ್ಯಂತ ಪುರಾತನವಾದ ಈ ದೇವಾಲಯದ ಪುನರ್ ನಿರ್ಮಾಣ ಕಾರ್ಯದ ಚಿಂತನೆ ನಡೆಸುವುದು ಈಗ ಸಕಾಲಿಕ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>