<p>ತನ್ನ ವಿಭಿನ್ನ ಶೈಲಿಯ ಪ್ರಯೋಗದ ಮೂಲಕ ಮತ್ತು ಕಲಾತ್ಮಕತೆಯ ಮೂಲಕ ದೇಶದಲ್ಲಿ ಮನೆ ಮಾತಾಗಿರುವ ಕಲಾವಿದ ಕಮಲ ಹಾಸನ್. ಇಂತಹ ನಟನ ಅಭಿನಯ, ನಿರ್ದೇಶನ, ನಿರ್ಮಾಣದ ಚಿತ್ರ `ವಿಶ್ವರೂಪಂ' ಅವರ ಬದುಕಿನ ಅಭೂತಪೂರ್ವ ವಿಭಿನ್ನ ಪ್ರಯತ್ನವೂ ಹೌದು.<br /> <br /> ಇಂತಹ ಚಿತ್ರದ ಬಿಡುಗಡೆಯ ಬಗ್ಗೆ ಎದ್ದಿರುವ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ನ ಏಕ ಸದಸ್ಯಪೀಠ ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ. ಆದರೂ ಈ ತೀರ್ಪನ್ನು ಪ್ರಶ್ನಿಸಿ ಮತ್ತೆ ಈ ವಿವಾದದ ಚೆಂಡು ಸುಪ್ರೀಂ ಕೋರ್ಟಿನ ಅಂಗಳದತ್ತ ಹೋಗುತ್ತಿರುವುದು ತುಂಬಾ ನೋವು ತರುವಂತಹ ಸಂಗತಿ.<br /> <br /> ಅಷ್ಟಕ್ಕೂ `ವಿಶ್ವರೂಪಂ' ಚಿತ್ರ, ತಾಂತ್ರಿಕತೆಯಲ್ಲಿ ವಿಶ್ವರೂಪವನ್ನೇ ಪ್ರೇಕ್ಷಕನ ಮುಂದೆ ತೆರೆದಿಡುವಂತಿರುವ ಚಿತ್ರ. ಚೇಸಿಂಗ್, ಆ್ಯಕ್ಷನ್ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ಹೀಗಿದ್ದರೂ ಇಂತಹ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವುದು ಅದ್ಯಾವ ನ್ಯಾಯ..?<br /> <br /> ಅಂದಹಾಗೇ ಚಿತ್ರದಲ್ಲಿ ಎಲ್ಲೂ ಮುಸ್ಲಿಮರನ್ನು ಭಯೋತ್ಪಾದಕರೆಂದು ಚಿತ್ರಿಸಿಲ್ಲ. ಚಿತ್ರವೇನಾದರೂ ಬಿಡುಗಡೆಗೊಳ್ಳದೇ ಹೋದಲ್ಲಿ `ಸಕಲಕಲಾವಲ್ಲಭ' ಬೀದಿಗೆ ಬಿದ್ದು, ದೇಶವನ್ನೇ ತೊರೆಯುವ ಸ್ಥಿತಿಗೆ ಬಂದು ನಿಂತಿದ್ದಾರೆಂದರೆ ಅವರ ಸ್ಥಿತಿ ಹೇಗಿರಬೇಕೆಂದು ಯೋಚಿಸಿ .<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತನ್ನ ವಿಭಿನ್ನ ಶೈಲಿಯ ಪ್ರಯೋಗದ ಮೂಲಕ ಮತ್ತು ಕಲಾತ್ಮಕತೆಯ ಮೂಲಕ ದೇಶದಲ್ಲಿ ಮನೆ ಮಾತಾಗಿರುವ ಕಲಾವಿದ ಕಮಲ ಹಾಸನ್. ಇಂತಹ ನಟನ ಅಭಿನಯ, ನಿರ್ದೇಶನ, ನಿರ್ಮಾಣದ ಚಿತ್ರ `ವಿಶ್ವರೂಪಂ' ಅವರ ಬದುಕಿನ ಅಭೂತಪೂರ್ವ ವಿಭಿನ್ನ ಪ್ರಯತ್ನವೂ ಹೌದು.<br /> <br /> ಇಂತಹ ಚಿತ್ರದ ಬಿಡುಗಡೆಯ ಬಗ್ಗೆ ಎದ್ದಿರುವ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ನ ಏಕ ಸದಸ್ಯಪೀಠ ಚಿತ್ರ ಬಿಡುಗಡೆಗೆ ಹಸಿರು ನಿಶಾನೆ ತೋರಿದೆ. ಆದರೂ ಈ ತೀರ್ಪನ್ನು ಪ್ರಶ್ನಿಸಿ ಮತ್ತೆ ಈ ವಿವಾದದ ಚೆಂಡು ಸುಪ್ರೀಂ ಕೋರ್ಟಿನ ಅಂಗಳದತ್ತ ಹೋಗುತ್ತಿರುವುದು ತುಂಬಾ ನೋವು ತರುವಂತಹ ಸಂಗತಿ.<br /> <br /> ಅಷ್ಟಕ್ಕೂ `ವಿಶ್ವರೂಪಂ' ಚಿತ್ರ, ತಾಂತ್ರಿಕತೆಯಲ್ಲಿ ವಿಶ್ವರೂಪವನ್ನೇ ಪ್ರೇಕ್ಷಕನ ಮುಂದೆ ತೆರೆದಿಡುವಂತಿರುವ ಚಿತ್ರ. ಚೇಸಿಂಗ್, ಆ್ಯಕ್ಷನ್ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ. ಹೀಗಿದ್ದರೂ ಇಂತಹ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವುದು ಅದ್ಯಾವ ನ್ಯಾಯ..?<br /> <br /> ಅಂದಹಾಗೇ ಚಿತ್ರದಲ್ಲಿ ಎಲ್ಲೂ ಮುಸ್ಲಿಮರನ್ನು ಭಯೋತ್ಪಾದಕರೆಂದು ಚಿತ್ರಿಸಿಲ್ಲ. ಚಿತ್ರವೇನಾದರೂ ಬಿಡುಗಡೆಗೊಳ್ಳದೇ ಹೋದಲ್ಲಿ `ಸಕಲಕಲಾವಲ್ಲಭ' ಬೀದಿಗೆ ಬಿದ್ದು, ದೇಶವನ್ನೇ ತೊರೆಯುವ ಸ್ಥಿತಿಗೆ ಬಂದು ನಿಂತಿದ್ದಾರೆಂದರೆ ಅವರ ಸ್ಥಿತಿ ಹೇಗಿರಬೇಕೆಂದು ಯೋಚಿಸಿ .<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>