ಲಿಂಗಾಯತ ಧರ್ಮದ ಬಗ್ಗೆ ಪುಂಖಾನುಪುಂಖ ಹೇಳಿಕೆಗಳು ಬರುತ್ತಿವೆ. ಅದಕ್ಕಾಗಿ ನಾನು ‘ಪ್ರಜಾವಾಣಿ’ಗೆ ಆಭಾರಿಯಾಗಿದ್ದೇನೆ. ‘ಧರ್ಮ ಒಡೆಯಬೇಡಿ!’ ಎಂದು ಅ.ಸಿ. ಹಿರೇಮಠ ಬರೆದಿದ್ದಾರೆ (ವಾ.ವಾ., ಆಗಸ್ಟ್ 30). ವೀರಶೈವದ ಬಗ್ಗೆ ಬರೆಯಲು ನಾನು ಅಶಕ್ತ. ಏಕೆಂದರೆ, ಆ ಧರ್ಮಕ್ಕೆ ಇತರ ಧರ್ಮೀಯರು ‘ಕಪ್ಪು’ ಬಳಿಯಬಾರದು. ಹೊರಗಿನವರು ಹೇಳಿಕೆ ನೀಡಬಾರದು.