Mysuru Dasara: ಚಿತ್ರಗಳಲ್ಲಿ– ಜಂಬೂ ಸವಾರಿ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳ ಮೆರುಗು
ಮೈಸೂರು: ದಸರಾ ಜ'ಬೂ ಸವಾರಿಯಲ್ಲಿ ಸ್ತಬ್ದಚಿತ್ರಗಳು ಎಲ್ಲ ಮನಸೂರೆಗೊಂಡವು.ಮುಡಾ ವತಿಯಿಂದ ಮೈಸೂರಿನಲ್ಲಿ ಸದ್ಯದಲ್ಲೇ ನಿರ್ಮಾಣವಾಗಲಿರುವ ಗುಂಪು ವಸತಿ ಯೋಜನೆಯನ್ನು ಈ ಬಾರಿ ಸ್ತಬ್ಧಚಿತ್ರದಲ್ಲಿ ಬಿಂಬಿಸಿ ಪ್ರಚಾರ ನೀಡಲಾಗಿದೆ.ಸ್ವಾತಂತ್ರ್ಯದ ಅಮೃತಮಹೋತ್ಸವ ಅಂಗವಾಗಿ ನಿರ್ಮಿಸಿರುವ ಸ್ತಬ್ಧಚಿತ್ರ ಆಕರ್ಷಕವಾಗಿದೆ.ಕೋವಿಡ್ ಮೂರನೇ ಅಲೆ ಕುರಿತು ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ಕೂಡ ಮೆರವಣಿಗೆಯಲ್ಲಿ ಹಾದು ಹೋಗುತ್ತಿದೆ. ಪರಿಸರ ಸಂರಕ್ಷಣೆ ಮತ್ತು ಅದರ ಪ್ರಾಮುಖ್ಯತೆ ಬಿಂಬಿಸುವ ಸ್ತಬ್ಧಚಿತ್ರ ಗಮನ ಸೆಳೆಯುತ್ತಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸ್ತಬ್ಧಚಿತ್ರ ಹಾಗೂ ಆನೆ ಗಾಡಿ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.