Photos - ತಮಿಳುನಾಡಿಗೆ ಶಶಿಕಲಾ, ಸಾವಿರಾರು ಬೆಂಬಲಿಗರಿಂದ ಭವ್ಯ ಸ್ವಾಗತ
ಉಚ್ಚಾಟಿತ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ, ಸೋಮವಾರ ತಮಿಳುನಾಡು ಪ್ರವೇಶಿಸಿದ್ದು ಕರ್ನಾಟಕ–ತಮಿಳುನಾಡು ಗಡಿಯಲ್ಲಿ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಸಾವಿರಾರು ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮದ ಸ್ವಾಗತ ಕೋರಿದರು. ಜನ ಹಾಗೂ ವಾಹನದಟ್ಟಣೆಯಿಂದಾಗಿ ಸಂಚಾರಕ್ಕೆ ಅಡ್ಡಿಯುಂಟಾಯಿತು. ಈ ಮಧ್ಯೆ, ಶಶಿಕಲಾ ಅವರು ಪಕ್ಷದ ಧ್ವಜ ಹಿಡಿದು ಕೈಬೀಸಿದ್ದಕ್ಕೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಶಶಿಕಲಾ, ಈ ವಿಚಾರವಾಗಿ ನೋಟಿಸ್ ಚುನಾವಣಾ ಆಯೋಗ ನೀಡಬೇಕೇ ವಿನಃ ಪೊಲೀಸರಲ್ಲ ಎಂದು ಹೇಳಿದ್ದಾರೆ.– ಚಿತ್ರಗಳು, ಅಖಿಲ್ ಕಡಿದಾಳ್, ಡೆಕ್ಕನ್ ಹೆರಾಲ್ಡ್