<p><strong>ಗಂಗಾವತಿ: </strong>‘ಕ್ರಿಯಾಶೀಲ ವೃತ್ತಿ ನೈಪುಣ್ಯದಿಂದ ಭಾರತೀಯ ಇತಿಹಾಸ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟ ಗುರುತು ಪಡೆದಿರುವ ವಿಶ್ವಕರ್ಮ ಸಮುದಾಯವು ಮುಖ್ಯವಾಹಿನಿಗೆ ಬರಬೇಕಿದೆ’ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.</p>.<p>ನಗರದ ಶ್ರೀಕಾಳಿಕಾದೇವಿ ದೇವಸ್ಥಾನದ ವಜ್ರಮಹೋತ್ಸವದ (75ನೇ ವಾರ್ಷಿಕೋತ್ಸವ) ಅಂಗವಾಗಿ ಬಸವಣ್ಣ ವೃತ್ತದಲ್ಲಿ ಶನಿವಾರ ಅಮರಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>‘ವೇದ, ಪುರಾಣಗಳ ಕಾಲದಿಂದಲೂ ವಿಶ್ವಕರ್ಮ ಸಮುದಾಯದವರು ತಮ್ಮದೇ ಆದ ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದು, ಒಂದೊಮ್ಮೆ ಇಡೀ ವಿಶ್ವದಲ್ಲಿ ವಿಶ್ವಕರ್ಮರು ಪೂಜ್ಯನೀಯರಾಗಿದ್ದರು. ಆದರೆ ಕಾಲಘಟ್ಟದಲ್ಲಿ ಬದಲಾವಣೆ ಪರ್ವದಲ್ಲಿ ಸಮುದಾಯ ನಿರ್ಲಕ್ಷ್ಯಕ್ಕೊಳಪಟ್ಟಿದೆ. ಈ ಹಿನ್ನೆಲೆ ಸಮುದಾಯದವರು ಮತ್ತೆ ಮುನ್ನೆಲೆಗೆ ಬರಲು ತಮ್ಮ ಯುವ ಪೀಳಿಗೆಗೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಕೊಡಿಸಬೇಕು. ಸಮುದಾಯಕ್ಕೆ ಅಗತ್ಯವಿರುವ ರಾಜಕೀಯ ಸ್ಥಾನಮಾನಕ್ಕೆ ನಾನು ಬೆಂಬಲಿಸುವೆ’ ಎಂದು ಹೇಳಿದರು.</p>.<p>ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ ಮಾತನಾಡಿ ದರು. ಗಿಣಿಗೇರದ ಸರಸ್ವತಿ ಪೀಠದ ದೇವೇಂದ್ರ ಸ್ವಾಮೀಜಿ, ಲೇಬಗಿರಿಯ ನಾಗಮೂರ್ತೇಂದ್ರ ಸ್ವಾಮೀಜಿ, ಶಾಡ್ಲಗೇರಿಯ ವಿರೂಪಾಕ್ಷಯ್ಯ ಸ್ವಾಮಿ, ಜವಳಗೇರಾದ ಸೂರ್ಯನಾರಾಯಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ನಗರಸಭೆಯ ಅಧ್ಯಕ್ಷ ಸಣ್ಣ ಹುಲಿಗೆಮ್ಮ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಮನೋಹರಸ್ವಾಮಿ ಮುದೇನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್, ಮುಖಂಡರಾದ ದೇವಪ್ಪ ಕಾಮದೊಡ್ಡಿ, ವೀರಭದ್ರಪ್ಪ ನಾಯಕ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>‘ಕ್ರಿಯಾಶೀಲ ವೃತ್ತಿ ನೈಪುಣ್ಯದಿಂದ ಭಾರತೀಯ ಇತಿಹಾಸ ಹಾಗೂ ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟ ಗುರುತು ಪಡೆದಿರುವ ವಿಶ್ವಕರ್ಮ ಸಮುದಾಯವು ಮುಖ್ಯವಾಹಿನಿಗೆ ಬರಬೇಕಿದೆ’ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದರು.</p>.<p>ನಗರದ ಶ್ರೀಕಾಳಿಕಾದೇವಿ ದೇವಸ್ಥಾನದ ವಜ್ರಮಹೋತ್ಸವದ (75ನೇ ವಾರ್ಷಿಕೋತ್ಸವ) ಅಂಗವಾಗಿ ಬಸವಣ್ಣ ವೃತ್ತದಲ್ಲಿ ಶನಿವಾರ ಅಮರಶಿಲ್ಪಿ ಜಕಣಾಚಾರಿ ವೇದಿಕೆಯಲ್ಲಿ ಆಯೋಜಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>‘ವೇದ, ಪುರಾಣಗಳ ಕಾಲದಿಂದಲೂ ವಿಶ್ವಕರ್ಮ ಸಮುದಾಯದವರು ತಮ್ಮದೇ ಆದ ಸಾಂಸ್ಕೃತಿಕ ಹಿನ್ನೆಲೆ ಹೊಂದಿದ್ದು, ಒಂದೊಮ್ಮೆ ಇಡೀ ವಿಶ್ವದಲ್ಲಿ ವಿಶ್ವಕರ್ಮರು ಪೂಜ್ಯನೀಯರಾಗಿದ್ದರು. ಆದರೆ ಕಾಲಘಟ್ಟದಲ್ಲಿ ಬದಲಾವಣೆ ಪರ್ವದಲ್ಲಿ ಸಮುದಾಯ ನಿರ್ಲಕ್ಷ್ಯಕ್ಕೊಳಪಟ್ಟಿದೆ. ಈ ಹಿನ್ನೆಲೆ ಸಮುದಾಯದವರು ಮತ್ತೆ ಮುನ್ನೆಲೆಗೆ ಬರಲು ತಮ್ಮ ಯುವ ಪೀಳಿಗೆಗೆ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಕೊಡಿಸಬೇಕು. ಸಮುದಾಯಕ್ಕೆ ಅಗತ್ಯವಿರುವ ರಾಜಕೀಯ ಸ್ಥಾನಮಾನಕ್ಕೆ ನಾನು ಬೆಂಬಲಿಸುವೆ’ ಎಂದು ಹೇಳಿದರು.</p>.<p>ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಜಿ.ವೀರಪ್ಪ ಮಾತನಾಡಿ ದರು. ಗಿಣಿಗೇರದ ಸರಸ್ವತಿ ಪೀಠದ ದೇವೇಂದ್ರ ಸ್ವಾಮೀಜಿ, ಲೇಬಗಿರಿಯ ನಾಗಮೂರ್ತೇಂದ್ರ ಸ್ವಾಮೀಜಿ, ಶಾಡ್ಲಗೇರಿಯ ವಿರೂಪಾಕ್ಷಯ್ಯ ಸ್ವಾಮಿ, ಜವಳಗೇರಾದ ಸೂರ್ಯನಾರಾಯಣ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ನಗರಸಭೆಯ ಅಧ್ಯಕ್ಷ ಸಣ್ಣ ಹುಲಿಗೆಮ್ಮ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಮನೋಹರಸ್ವಾಮಿ ಮುದೇನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ್, ಮುಖಂಡರಾದ ದೇವಪ್ಪ ಕಾಮದೊಡ್ಡಿ, ವೀರಭದ್ರಪ್ಪ ನಾಯಕ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>