<p>ರಾಜ್ಯ ಸರ್ಕಾರದ ಪ್ರಮುಖ ಅಭಿವೃದ್ಧಿ ಯೋಜನೆಗಳ ಪೈಕಿ ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ ಒಂದು. ಈ ಯೋಜನೆಯನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಜಾರಿ ಮಾಡಿದ್ದು, ಅರ್ಹರು ಸಾಲ ಸೌಲಭ್ಯವನ್ನು ಪಡೆಯಬಹುದು. </p><p>ಈ ಯೋಜನೆಯಲ್ಲಿ ಸಿಗುವ ಸಾಲದಿಂದ ಹೋಟೆಲ್ ಉದ್ಯಮ, ಗುಡಿ ಕೈಗಾರಿಕೆ, ಹಸು ಸಾಕಾಣಿಕೆ, ಸಣ್ಣ ಕೈಗಾರಿಕೆ ಹಾಗೂ ಟ್ಯಾಕ್ಸಿಯನ್ನು ಖರೀದಿ ಮಾಡಬಹುದಾಗಿದೆ. ಈ ಯೋಜನೆಯಡಿ ಸಿಗುವ ಸಾಲ ಎಷ್ಟು? ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದನ್ನ ತಿಳಿಯೋಣ ಬನ್ನಿ.</p><p>ಫಲಾನುಭವಿಗಳ ಸ್ವ–ಉದ್ಯಮಕ್ಕೆ ಕನಿಷ್ಟ ₹1 ಲಕ್ಷದಿಂದ ಗರಿಷ್ಟ ₹2 ಲಕ್ಷದ ವರೆಗೂ ಸಾಲವನ್ನು ನೀಡಲಾಗುತ್ತದೆ. ಈ ಮೊತ್ತದಲ್ಲಿ ಶೇ 20ರಷ್ಟು ಸಹಾಯಧನ ಇರಲಿದೆ. ಉಳಿದ ಶೇ 80ರಷ್ಟು ಮೊತ್ತಕ್ಕೆ ವಾರ್ಷಿಕ ಶೇ 4ರ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಮಹಿಳೆಯರಿಗೆ ಶೇ 33ರಷ್ಟು ಹಾಗೂ ದಿವ್ಯಾಂಗರಿಗೆ ಶೇ 5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. </p>.ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: ಪ್ರಯೋಜನ ಪಡೆಯುವುದು ಹೇಗೆ? .<p><strong>ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವಾಗ? </strong></p><p>ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 31 ಆಗಿರುತ್ತದೆ. ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.</p><p><strong>ಫಲಾನುಭವಿಗೆ ಇರಬೇಕಾದ ಅರ್ಹತೆಗಳೇನು?</strong></p><ul><li><p>ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿರಬೇಕು. </p></li><li><p>ಇಡಬ್ಲ್ಯೂಎಸ್ ಪ್ರಮಾಣ ಪತ್ರ ಇರಬೇಕು.</p></li><li><p>ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.</p></li><li><p>ವಯೋಮಿತಿಯು 18 ರಿಂದ 65 ವರ್ಷದೊಳಗೆ ಇರಬೇಕು. </p></li><li><p>ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.</p></li><li><p>ತೃತೀಯ ಲಿಂಗಿಗಳಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.</p></li><li><p>ಆಧಾರ್ ಹಾಗೂ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು.</p></li></ul><p><strong>ಸಾಲ ಹಾಗೂ ಮರು ಪಾವತಿಗಳು: </strong></p><ul><li><p>ಸಾಲ ಪಡೆದ 2 ತಿಂಗಳ ನಂತರ 3 ವರ್ಷ ಪ್ರತಿ ತಿಂಗಳು ಕಂತುಗಳಲ್ಲಿ ಮೂಲಧನ ಮತ್ತು ಬಡ್ಡಿಯನ್ನು ಆನ್ ಲೈನ್ ಮೂಲಕ ಪಾವತಿಸಬೇಕು.</p></li><li><p>ಸ್ವ ಉದ್ಯೋಗಕ್ಕಾಗಿ ₹1 ಲಕ್ಷ ಸಾಲ ಪಡೆದರೆ, ಆ ಪೈಕಿ ₹20 ಸಾವಿರ ಸಹಾಯಧನವಾಗಿರುತ್ತದೆ. ಉಳಿದ ₹80 ಸಾವಿರಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಮಾಸಿಕ ₹2,511 ಅನ್ನು ಕಂತುಗಳಲ್ಲಿ ಮರುಪಾವತಿ ಮಾಡಬೇಕು.</p></li><li><p>₹2 ಲಕ್ಷ ಸಾಲ ಪಡೆದರೆ, ಆ ಪೈಕಿ ₹40 ಸಾವಿರ ಸಹಾಯಧನವಾಗಿರುತ್ತದೆ. ಉಳಿದ ₹1.60 ಲಕ್ಷಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಮಾಸಿಕ ₹5,022 ಅನ್ನು ಕಂತುಗಳಲ್ಲಿ ಮರುಪಾವತಿ ಮಾಡಬೇಕು.</p></li><li><p>ಸಾಲ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ತಮ್ಮ ಯೋಜನೆಯ ಬಗ್ಗೆ ಕನಿಷ್ಟ 10 ಪದಗಳಲ್ಲಿ ನಮೂದಿಸಬೇಕು.</p></li><li><p>ಇ-ಸ್ಟ್ಯಾಂಪ್ ಶುಲ್ಕದೊಂದಿಗೆ ಅರ್ಜಿ ಪ್ರಕ್ರಿಯೆ ಶುಲ್ಕವನ್ನು ಅರ್ಜಿದಾರರು ಭರಿಸಬೇಕು. ಜಾಮೀನುದಾರರ ವಿವರ ಅಗತ್ಯ.</p></li></ul>.ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹಧನ: ಹೀಗೆ ಅರ್ಜಿ ಸಲ್ಲಿಸಿ .<p><strong>ಅಗತ್ಯ ದಾಖಲೆಗಳು?</strong></p><ul><li><p>ಆದಾಯ ಪ್ರಮಾಣ ಪತ್ರ</p></li><li><p>ಜಾತಿ ಪ್ರಮಾಣ ಪತ್ರ</p></li><li><p>ಆಧಾರ್ ಕಾರ್ಡ್ ಪ್ರತಿ</p></li><li><p>ವೋಟರ್ ಐಡಿ ಅಥವಾ ಬ್ಯಾಂಕ್ ಪಾಸ್ಬುಕ್ ಪ್ರತಿ</p></li><li><p>ಇತ್ತೀಚಿನ ಭಾವಚಿತ್ರ</p></li><li><p>ವ್ಯಾಪಾರ ಅಥವಾ ಮಳಿಗೆಗೆ ಸಂಬಂಧಿಸಿದ ದಾಖಲೆ</p></li></ul><p><strong>ಅಗತ್ಯ ಮಾಹಿತಿಗೆ ಸಂಪರ್ಕಿಸಬಹುದು:</strong></p><p>ಕಚೇರಿ ವಿಳಾಸ: ನಂ. 14/3, ಆನೆಕ್ಸ್ ಕಟ್ಟಡ, 3ನೇ ಮಹಡಿ, ಶ್ರೀ ಅರವಿಂದ ಭವನ, ಮಿಥಿಕ್ ಸೋಸೈಟಿ ಆವರಣ, ನೃಪತುಂಗ ರಸ್ತೆ, ಬೆಂಗಳೊರು – 560001</p><p>ಸಹಾಯವಾಣಿ: +91 80 2960 5888 ಅಥವಾ +91 87 6224 9230 </p><p><strong>ಅರ್ಜಿ ಸಲ್ಲಿಸುವುದು ಹೇಗೆ?</strong></p><p>ಅರ್ಜಿಯನ್ನು ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ www.ksbdb.karnataka.gov.in ಭೇಟಿ ನೀಡಿ. ಅರ್ಜಿ ಸಲ್ಲಿಕೆ ಹಾಗೂ ಇತರೆ ಮಾಹಿತಿಗೆ ಸಹಾಯವಾಣಿಯನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯ ಸರ್ಕಾರದ ಪ್ರಮುಖ ಅಭಿವೃದ್ಧಿ ಯೋಜನೆಗಳ ಪೈಕಿ ವಿಪ್ರ ಸ್ವ-ಉದ್ಯಮ ನೇರ ಸಾಲ ಯೋಜನೆ ಒಂದು. ಈ ಯೋಜನೆಯನ್ನು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಜಾರಿ ಮಾಡಿದ್ದು, ಅರ್ಹರು ಸಾಲ ಸೌಲಭ್ಯವನ್ನು ಪಡೆಯಬಹುದು. </p><p>ಈ ಯೋಜನೆಯಲ್ಲಿ ಸಿಗುವ ಸಾಲದಿಂದ ಹೋಟೆಲ್ ಉದ್ಯಮ, ಗುಡಿ ಕೈಗಾರಿಕೆ, ಹಸು ಸಾಕಾಣಿಕೆ, ಸಣ್ಣ ಕೈಗಾರಿಕೆ ಹಾಗೂ ಟ್ಯಾಕ್ಸಿಯನ್ನು ಖರೀದಿ ಮಾಡಬಹುದಾಗಿದೆ. ಈ ಯೋಜನೆಯಡಿ ಸಿಗುವ ಸಾಲ ಎಷ್ಟು? ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂಬುದನ್ನ ತಿಳಿಯೋಣ ಬನ್ನಿ.</p><p>ಫಲಾನುಭವಿಗಳ ಸ್ವ–ಉದ್ಯಮಕ್ಕೆ ಕನಿಷ್ಟ ₹1 ಲಕ್ಷದಿಂದ ಗರಿಷ್ಟ ₹2 ಲಕ್ಷದ ವರೆಗೂ ಸಾಲವನ್ನು ನೀಡಲಾಗುತ್ತದೆ. ಈ ಮೊತ್ತದಲ್ಲಿ ಶೇ 20ರಷ್ಟು ಸಹಾಯಧನ ಇರಲಿದೆ. ಉಳಿದ ಶೇ 80ರಷ್ಟು ಮೊತ್ತಕ್ಕೆ ವಾರ್ಷಿಕ ಶೇ 4ರ ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಮಹಿಳೆಯರಿಗೆ ಶೇ 33ರಷ್ಟು ಹಾಗೂ ದಿವ್ಯಾಂಗರಿಗೆ ಶೇ 5ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. </p>.ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: ಪ್ರಯೋಜನ ಪಡೆಯುವುದು ಹೇಗೆ? .<p><strong>ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವಾಗ? </strong></p><p>ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಅಕ್ಟೋಬರ್ 31 ಆಗಿರುತ್ತದೆ. ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು.</p><p><strong>ಫಲಾನುಭವಿಗೆ ಇರಬೇಕಾದ ಅರ್ಹತೆಗಳೇನು?</strong></p><ul><li><p>ಬ್ರಾಹ್ಮಣ ಸಮುದಾಯದ ಸಾಮಾನ್ಯ ವರ್ಗಕ್ಕೆ ಸೇರಿರಬೇಕು. </p></li><li><p>ಇಡಬ್ಲ್ಯೂಎಸ್ ಪ್ರಮಾಣ ಪತ್ರ ಇರಬೇಕು.</p></li><li><p>ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.</p></li><li><p>ವಯೋಮಿತಿಯು 18 ರಿಂದ 65 ವರ್ಷದೊಳಗೆ ಇರಬೇಕು. </p></li><li><p>ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.</p></li><li><p>ತೃತೀಯ ಲಿಂಗಿಗಳಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.</p></li><li><p>ಆಧಾರ್ ಹಾಗೂ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರಬೇಕು.</p></li></ul><p><strong>ಸಾಲ ಹಾಗೂ ಮರು ಪಾವತಿಗಳು: </strong></p><ul><li><p>ಸಾಲ ಪಡೆದ 2 ತಿಂಗಳ ನಂತರ 3 ವರ್ಷ ಪ್ರತಿ ತಿಂಗಳು ಕಂತುಗಳಲ್ಲಿ ಮೂಲಧನ ಮತ್ತು ಬಡ್ಡಿಯನ್ನು ಆನ್ ಲೈನ್ ಮೂಲಕ ಪಾವತಿಸಬೇಕು.</p></li><li><p>ಸ್ವ ಉದ್ಯೋಗಕ್ಕಾಗಿ ₹1 ಲಕ್ಷ ಸಾಲ ಪಡೆದರೆ, ಆ ಪೈಕಿ ₹20 ಸಾವಿರ ಸಹಾಯಧನವಾಗಿರುತ್ತದೆ. ಉಳಿದ ₹80 ಸಾವಿರಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಮಾಸಿಕ ₹2,511 ಅನ್ನು ಕಂತುಗಳಲ್ಲಿ ಮರುಪಾವತಿ ಮಾಡಬೇಕು.</p></li><li><p>₹2 ಲಕ್ಷ ಸಾಲ ಪಡೆದರೆ, ಆ ಪೈಕಿ ₹40 ಸಾವಿರ ಸಹಾಯಧನವಾಗಿರುತ್ತದೆ. ಉಳಿದ ₹1.60 ಲಕ್ಷಕ್ಕೆ ಶೇ 4ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಮಾಸಿಕ ₹5,022 ಅನ್ನು ಕಂತುಗಳಲ್ಲಿ ಮರುಪಾವತಿ ಮಾಡಬೇಕು.</p></li><li><p>ಸಾಲ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ತಮ್ಮ ಯೋಜನೆಯ ಬಗ್ಗೆ ಕನಿಷ್ಟ 10 ಪದಗಳಲ್ಲಿ ನಮೂದಿಸಬೇಕು.</p></li><li><p>ಇ-ಸ್ಟ್ಯಾಂಪ್ ಶುಲ್ಕದೊಂದಿಗೆ ಅರ್ಜಿ ಪ್ರಕ್ರಿಯೆ ಶುಲ್ಕವನ್ನು ಅರ್ಜಿದಾರರು ಭರಿಸಬೇಕು. ಜಾಮೀನುದಾರರ ವಿವರ ಅಗತ್ಯ.</p></li></ul>.ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹಧನ: ಹೀಗೆ ಅರ್ಜಿ ಸಲ್ಲಿಸಿ .<p><strong>ಅಗತ್ಯ ದಾಖಲೆಗಳು?</strong></p><ul><li><p>ಆದಾಯ ಪ್ರಮಾಣ ಪತ್ರ</p></li><li><p>ಜಾತಿ ಪ್ರಮಾಣ ಪತ್ರ</p></li><li><p>ಆಧಾರ್ ಕಾರ್ಡ್ ಪ್ರತಿ</p></li><li><p>ವೋಟರ್ ಐಡಿ ಅಥವಾ ಬ್ಯಾಂಕ್ ಪಾಸ್ಬುಕ್ ಪ್ರತಿ</p></li><li><p>ಇತ್ತೀಚಿನ ಭಾವಚಿತ್ರ</p></li><li><p>ವ್ಯಾಪಾರ ಅಥವಾ ಮಳಿಗೆಗೆ ಸಂಬಂಧಿಸಿದ ದಾಖಲೆ</p></li></ul><p><strong>ಅಗತ್ಯ ಮಾಹಿತಿಗೆ ಸಂಪರ್ಕಿಸಬಹುದು:</strong></p><p>ಕಚೇರಿ ವಿಳಾಸ: ನಂ. 14/3, ಆನೆಕ್ಸ್ ಕಟ್ಟಡ, 3ನೇ ಮಹಡಿ, ಶ್ರೀ ಅರವಿಂದ ಭವನ, ಮಿಥಿಕ್ ಸೋಸೈಟಿ ಆವರಣ, ನೃಪತುಂಗ ರಸ್ತೆ, ಬೆಂಗಳೊರು – 560001</p><p>ಸಹಾಯವಾಣಿ: +91 80 2960 5888 ಅಥವಾ +91 87 6224 9230 </p><p><strong>ಅರ್ಜಿ ಸಲ್ಲಿಸುವುದು ಹೇಗೆ?</strong></p><p>ಅರ್ಜಿಯನ್ನು ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ www.ksbdb.karnataka.gov.in ಭೇಟಿ ನೀಡಿ. ಅರ್ಜಿ ಸಲ್ಲಿಕೆ ಹಾಗೂ ಇತರೆ ಮಾಹಿತಿಗೆ ಸಹಾಯವಾಣಿಯನ್ನು ಸಂಪರ್ಕಿಸಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>