<p>ಬುಡಕಟ್ಟು ಜನರಿಗೆ ನೀಡಲ್ಪಟ್ಟ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ಮತ್ತು ಯೋಜನೆಯ ವಿವಿಧ ಹಂತಗಳಲ್ಲಿ ಬುಡಕಟ್ಟು ಜನರಿಗೆ ವಿಶೇಷ ಒತ್ತು ನೀಡುವುದನ್ನು ಖಾತರಿಪಡಿಸುವುದು ಮುಖ್ಯ.</p>.<p>ಈ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನವು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವನ್ನು ರಚಿಸಿತು.</p>.<p>l ಪರಿಶಿಷ್ಟ ಪಂಗಡಗಳ ಹಿತ ರಕ್ಷಣೆಯ ಕಾವಲುಗಾರನಾಗಿ ಮತ್ತು ಬೌದ್ಧಿಕಕೇಂದ್ರವಾಗಿ ಕಾರ್ಯನಿರ್ವಹಿಸುವುದು ಆಯೋಗದ ಕರ್ತವ್ಯವಾಗಿದೆ.</p>.<p>l ಬುಡಕಟ್ಟು ಸಮುದಾಯದ ರಕ್ಷಣೆ ಹಾಗೂ ವಿವಿಧ ಸಂಸ್ಥೆಗಳಲ್ಲಿ ಬುಡಕಟ್ಟು ಸಮುದಾಯಗಳ ಕಲ್ಯಾಣದ ಜವಾಬ್ದಾರಿಯನ್ನು ಖಾತರಿಪಡಿಸಿಕೊಳ್ಳುವುದು ಆಯೋಗದ ಆದ್ಯತೆಯ ಕಾರ್ಯವಾಗಿದೆ.</p>.<p>l ಎನ್ಸಿಎಸ್ಟಿ ಭಾರತೀಯ ಸಂವಿಧಾನದ 338 ಎ ವಿಧಿ ಅಡಿಯಲ್ಲಿ ಸ್ಥಾಪನೆಯಾಗಿರುವ ಸಾಂವಿಧಾನಿಕ ಸಂಸ್ಥೆಯಾಗಿದೆ.</p>.<p>ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ರಚನೆ :</p>.<p>* ಭಾರತದ ರಾಷ್ಟ್ರಪತಿಗಳಿಂದ ನೇಮಕವಾದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮೂವರು ಸದಸ್ಯರು ಇರುತ್ತಾರೆ.</p>.<p>* ಅಧ್ಯಕ್ಷರು ಕೇಂದ್ರ ಸಚಿವರ ಸ್ಥಾನಮಾನವನ್ನು ಹೊಂದಿದ್ದರೆ, ಉಪಾಧ್ಯಕ್ಷರು ಸಹಾಯಕ ಸಚಿವರ ಸ್ಥಾನವನ್ನು ಪಡೆಯುತ್ತಾರೆ ಹಾಗೂ ಸದಸ್ಯರು ಭಾರತ ಸರ್ಕಾರ ಕಾರ್ಯದರ್ಶಿಯ ಸ್ಥಾನಮಾನವನ್ನು ಹೊಂದಿರುತ್ತಾರೆ.</p>.<p>* ಶಾಶ್ವತ ಕಾರ್ಯದರ್ಶಿ ಕಚೇರಿಯು ನವದೆಹಲಿಯಲ್ಲಿದೆ ಹಾಗೂ ದೇಶಾದ್ಯಂತ ಆರು ವಿಭಾಗೀಯ ಕಚೇರಿಗಳನ್ನು ಹೊಂದಿದ್ದು ಇದು ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ಹೊಂದಿದೆ.</p>.<p><strong>ಆಯೋಗದ ಕಾರ್ಯಗಳು :</strong></p>.<p>* ಪರಿಶಿಷ್ಟ ಪಂಗಡಗಳ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ತನಿಖೆ ನಡೆಸುವುದು ಮತ್ತು ನಿಗಾವಹಿಸುವುದು.</p>.<p>* ಪರಿಶಿಷ್ಟ ಪಂಗಡಗಳ ಹಕ್ಕುಗಳನ್ನು ಕಾಯ್ದುಕೊಳ್ಳಲು ಮತ್ತು ಹಿತರಕ್ಷಣೆ ಮಾಡಲು ನಿರ್ದಿಷ್ಟ ದೂರುಗಳ ವಿರುದ್ಧ ವಿಚಾರಣೆ ನಡೆಸುವುದು.</p>.<p>* ಪರಿಶಿಷ್ಟ ಪಂಗಡಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಯೋಜನಾ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವುದು, ಸಲಹೆ ನೀಡುವುದು ಮತ್ತು ಕೇಂದ್ರಾಡಳಿತ ಪ್ರದೇಶ ಹಾಗೂ ಯಾವುದೇ ರಾಜ್ಯದಲ್ಲಿ ಈ ಬಗೆಗಿನ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದು.</p>.<p>*ಪರಿಶಿಷ್ಟ ಪಂಗಡಗಳ ರಕ್ಷಣೆಗೆ, ಕಲ್ಯಾಣಕ್ಕೆ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಅವರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಪರಿಣಾಮಕಾರಿಯಾದ ಅನುಷ್ಠಾನಕ್ಕೆ ಕೇಂದ್ರಾಡಳಿತ ಪ್ರದೇಶ ಅಥವಾ ಯಾವುದೇ ರಾಜ್ಯವು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವುದು ಹಾಗೂ ಶಿಫಾರಸು ನೀಡುವುದು.</p>.<p>* ಪರಿಶಿಷ್ಟ ಪಂಗಡಗಳ ರಕ್ಷಣೆ, ಕಲ್ಯಾಣ, ಅಭಿವೃದ್ಧಿಗೆ ಸಂಬಂಧಿಸಿದಂತೆ ಇತರ ಕೆಲಸಗಳನ್ನು ನಿರ್ವಹಿಸುವುದರ ಜತೆಗೆ</p>.<p>* ಸಮುದಾಯಗಳ ಹಿತ ರಕ್ಷಣೆಗೆ ಸಂಬಂಧಿಸಿದಂತೆ ವಾರ್ಷಿಕವಾಗಿ ಅಥವಾ ಆಯೋಗಕ್ಕೆ ಯಾವುದೇ ಸಮಯದಲ್ಲಿ ಸೂಕ್ತ ಎನಿಸಿದರೆ ರಾಷ್ಟ್ರಪತಿಗಳಿಗೆ ವರದಿ ನೀಡುವುದು.</p>.<p>* ಪರಿಶಿಷ್ಟ ಪಂಗಡಗಳ ಮೇಲೆ ಪರಿಣಾಮ ಬೀರಬಲ್ಲ ನೀತಿ ನಿರೂಪಣೆಗಳ ವಿಚಾರದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಹಾಗೂ ಪ್ರತಿ ರಾಜ್ಯ ಸರ್ಕಾರಗಳು ಆಯೋಗದೊಂದಿಗೆ ಸಮಾಲೋಚನೆ ನಡೆಸಬೇಕು.</p>.<p><strong>ಎಸ್ಸಿ, ಎಸ್ಟಿಗೆ ಇರುವ ಅಧಿಕಾರ:<br></strong></p><p>* ದೂರುಗಳ ವಿಚಾರಣೆಯ ಸಂದರ್ಭದಲ್ಲಿ ಈ ಕೆಳಗಿನ ವಿಚಾರಗಳಲ್ಲಿ ಏನ್ ಸಿ ಎಸ್ ಟಿ ಗೆ ಸಿವಿಲ್ ನ್ಯಾಯಾಲಯಕ್ಕೆ ಇರುವ ಎಲ್ಲಾ ಅಧಿಕಾರವೂ ಇರುತ್ತದೆ</p>.<p>* ಭಾರತದ ಯಾವುದೇ ಭಾಗದಲ್ಲಿರುವ ವ್ಯಕ್ತಿಯನ್ನು ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವುದು ಹಾಗೂ ವ್ಯಕ್ತಿಯನ್ನು ಪರೀಕ್ಷಿಸುವುದು.</p>.<p>* ಯಾವುದೇ ದಾಖಲೆಗಳ ಅನ್ವೇಷಣೆ ಮತ್ತು ಸಲ್ಲಿಕೆಯ ಅಗತ್ಯಗಳ ಸಂದರ್ಭ ಬಂದಾಗ ಅಫಿದವಿತ್ ಆಧಾರದ ಮೇಲೆ ಸಾಕ್ಷಿ ಪಡೆಯಬಹುದು.</p>.<p>* ನ್ಯಾಯಾಲಯ ಅಥವಾ ಕಚೇರಿಯಿಂದ ದಾಖಲೆಗಳನ್ನು ಅಥವಾ ಅದರ ಪ್ರತಿಯನ್ನು ಪಡೆಯುವ ಕೋರಿಕೆ.</p>.<p>*ಸಮನ್ಸ್ ಜಾರಿ ಮಾಡುವುದು ಅಥವಾ ಸಾಕ್ಷಿಗಳ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆ ಸಂಬಂಧ ಸಂವಹನ ನಡೆಸುವುದು.</p>.<p>* ಸಂವಿಧಾನದ ವಿಧಿ 338 ರ ಪ್ರಕಾರ ಪರಿಶಿಷ್ಟ ಪಂಗಡಗಳ ಮೇಲೆ ಪರಿಣಾಮ ಬೀರಬಲ್ಲಂತಹ ಎಲ್ಲಾ ಪ್ರಮುಖ ನೀತಿ ನಿರೂಪಣೆ ವಿಚಾರಗಳ ಸಂಬಂಧ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಯೋಗದ ಸಲಹೆಯನ್ನು ಪಡೆಯಬೇಕು.</p>.<p>* ಬುಡಕಟ್ಟು ಸಮುದಾಯಗಳ ಮೂಲಭೂತ ವಿಚಾರಗಳಿಗೆ ಸಂಬಂಧಿಸಿದಂತೆ ನೀತಿ ಅನುಷ್ಠಾನ ಮತ್ತು ತನಿಖೆಗಾಗಿ ಏನ್ ಸಿ ಎಸ್ ಟಿ 10 ವಲಯಗಳನ್ನು ಗುರುತಿಸಿದ್ದು ಅವು ಹೀಗಿವೆ.</p>.<p>1. ಅರಣ್ಯ ಹಕ್ಕು</p>.<p>2.ಗಣಿ ಸಂಬಂಧಿತ ಸಮಸ್ಯೆಗಳು</p>.<p>3. ಹಣಕಾಸು ವಿಚಾರಗಳು ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನ</p>.<p>4. ದೌರ್ಜನ್ಯ</p>.<p>5. ಕುಂದುಕೊರತೆ</p>.<p>6. ಒಳಗೊಳ್ಳುವಿಕೆ ಮತ್ತು ಹೊರಹಾಕುವಿಕೆಯ ಅಂಶಗಳು</p>.<p>7. ಆರೋಗ್ಯ ಮತ್ತು ಪೌಷ್ಟಿಕಾಂಶ</p>.<p>8. ಶಿಕ್ಷಣ</p>.<p>9. ಕಾನೂನು ಮತ್ತು ಸಂವಿಧಾನಾತ್ಮಕ ವಿಚಾರ</p>.<p>10. ಕಲ್ಯಾಣ ಯೋಜನೆಗಳಲ್ಲಿ ಪರಿಶಿಷ್ಟ ಪಂಗಡಗಳ ಅಂಶ</p>.<p>ಈ 10 ಅಂಶಗಳಿಗೆ ಸಂಬಂಧಿಸಿದಂತೆ ಆಯೋಗವು 'ಕುಂದುಕೊರತೆ ನಿವಾರಣೆ ಮತ್ತು ಯೋಜನೆ' ಕಾರ್ಯವನ್ನು ಕೈಗೊಳ್ಳುತ್ತದೆ.</p>.<p><strong>ಕುಂದುಕೊರತೆ ಪರಿಹಾರ :</strong></p>.<p>* ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಮೇಲೆ ನಡೆಯುತ್ತಿರುವ <br>ಅನ್ಯಾಯಗಳ ಬಗ್ಗೆ ಜನರಿಂದ, ನಾಗರಿಕ ಸಂಸ್ಥೆಗಳಿಂದ <br>ಮತ್ತು ಸರ್ಕಾರಿ ಇತರ ಸಂಸ್ಥೆಗಳಿಂದ ಆಯೋಗವು ಅನೇಕ ಪತ್ರಗಳನ್ನು ಸ್ವೀಕರಿಸುತ್ತದೆ.</p>.<p>* ಈ ಪಂಗಡಗಳ ಜನರ ಮೇಲಾಗುತ್ತಿರುವ ದೌರ್ಜನ್ಯ, ಶೋಷಣೆ ಮತ್ತು ಸಾಮಾಜಿಕ ಅನ್ಯಾಯದ ಬಗ್ಗೆಗೂ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಬೆಳಕು ಚೆಲ್ಲುತ್ತವೆ.</p>.<p>l ಯಾವುದೇ ಅನ್ಯಾಯದ ಪ್ರಕರಣಗಳು ಗಮನಕ್ಕೆ ಬರುತ್ತಿದ್ದಂತೆಯೇ ಆಯೋಗವು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನ ಮಾಡುತ್ತದೆ. ಇದನ್ನು ಸಾಧಿಸಲು ಆಯೋಗಕ್ಕೆ ರಾಜ್ಯದ ಎಲ್ಲಾ ಅಂಗಗಳಿಂದ ಸಹಕಾರ ಮತ್ತು ನೆರವು ಸಿಗುತ್ತದೆ.</p>.<p>* ಆಯೋಗದ ಸದಸ್ಯರು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಾರೆ ಹಾಗೂ ಬುಡಕಟ್ಟು ಜನರಿಗೆ ತಮ್ಮ ಕುಂದುಕೊರತೆಗಳಿಗೆ ತಮ್ಮ ಸ್ಥಳದಲ್ಲಿ ಪರಿಹಾರವನ್ನು ಪಡೆಯಲು ಶ್ರಮಿಸುತ್ತಾರೆ.</p>.<p>* ಸಾರ್ವಜನಿಕರು ತಮ್ಮ ದೂರುಗಳನ್ನು ದಾಖಲಿಸಲು ಎನ್ ಸಿ ಎಸ್ ಟಿ ಯು ತನ್ನದೇ ಆದ ಪೋರ್ಟಲ್ ಅನ್ನು ಕೂಡ ಸ್ಥಾಪಿಸಿದೆ.</p>.<p><strong>ಭಾರತದಲ್ಲಿ ಬುಡಕಟ್ಟು ಸಮುದಾಯದ ನಿರ್ದಿಷ್ಟ ಅಗತ್ಯಗಳು</strong> </p> <p>ಭಾರತದಲ್ಲಿ ಬುಡಕಟ್ಟು ಸಮುದಾಯವು ಆಯಾ ಭೌಗೋಳಿಕ ಪ್ರದೇಶಗಳಿಗೆ ತಕ್ಕಂತೆ ವಿಶೇಷವಾದ ಸಾಂಸ್ಕೃತಿಕ ವಿನ್ಯಾಸಗಳನ್ನು ಹೊಂದಿರುವುದರಿಂದ ಅದರ ಸ್ವರೂಪ ವಿಶಿಷ್ಟವಾಗಿರುತ್ತದೆ ಮತ್ತು ಅವರ ಸಮಸ್ಯೆಗಳು ಭಿನ್ನವಾಗಿರುತ್ತದೆ. l ಅವರು ಸುಸ್ಥಿರ ಅಭಿವೃದ್ಧಿಯ ಹರಿಕಾರರಾಗಿದ್ದು ಬುಡಕಟ್ಟು ಜನಾಂಗದವರು ಎಲ್ಲಿಯೇ ವಾಸಿಸಲಿ ಅವರು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ ನಿಸರ್ಗದ ಶಿಶುಗಳಾಗಿದ್ದಾರೆ.ಇವರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಹಿತರಕ್ಷಣೆಗಾಗಿ ಎನ್ಸಿಎಸ್ಟಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬುಡಕಟ್ಟು ಜನರಿಗೆ ನೀಡಲ್ಪಟ್ಟ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ಮತ್ತು ಯೋಜನೆಯ ವಿವಿಧ ಹಂತಗಳಲ್ಲಿ ಬುಡಕಟ್ಟು ಜನರಿಗೆ ವಿಶೇಷ ಒತ್ತು ನೀಡುವುದನ್ನು ಖಾತರಿಪಡಿಸುವುದು ಮುಖ್ಯ.</p>.<p>ಈ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನವು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವನ್ನು ರಚಿಸಿತು.</p>.<p>l ಪರಿಶಿಷ್ಟ ಪಂಗಡಗಳ ಹಿತ ರಕ್ಷಣೆಯ ಕಾವಲುಗಾರನಾಗಿ ಮತ್ತು ಬೌದ್ಧಿಕಕೇಂದ್ರವಾಗಿ ಕಾರ್ಯನಿರ್ವಹಿಸುವುದು ಆಯೋಗದ ಕರ್ತವ್ಯವಾಗಿದೆ.</p>.<p>l ಬುಡಕಟ್ಟು ಸಮುದಾಯದ ರಕ್ಷಣೆ ಹಾಗೂ ವಿವಿಧ ಸಂಸ್ಥೆಗಳಲ್ಲಿ ಬುಡಕಟ್ಟು ಸಮುದಾಯಗಳ ಕಲ್ಯಾಣದ ಜವಾಬ್ದಾರಿಯನ್ನು ಖಾತರಿಪಡಿಸಿಕೊಳ್ಳುವುದು ಆಯೋಗದ ಆದ್ಯತೆಯ ಕಾರ್ಯವಾಗಿದೆ.</p>.<p>l ಎನ್ಸಿಎಸ್ಟಿ ಭಾರತೀಯ ಸಂವಿಧಾನದ 338 ಎ ವಿಧಿ ಅಡಿಯಲ್ಲಿ ಸ್ಥಾಪನೆಯಾಗಿರುವ ಸಾಂವಿಧಾನಿಕ ಸಂಸ್ಥೆಯಾಗಿದೆ.</p>.<p>ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ರಚನೆ :</p>.<p>* ಭಾರತದ ರಾಷ್ಟ್ರಪತಿಗಳಿಂದ ನೇಮಕವಾದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮೂವರು ಸದಸ್ಯರು ಇರುತ್ತಾರೆ.</p>.<p>* ಅಧ್ಯಕ್ಷರು ಕೇಂದ್ರ ಸಚಿವರ ಸ್ಥಾನಮಾನವನ್ನು ಹೊಂದಿದ್ದರೆ, ಉಪಾಧ್ಯಕ್ಷರು ಸಹಾಯಕ ಸಚಿವರ ಸ್ಥಾನವನ್ನು ಪಡೆಯುತ್ತಾರೆ ಹಾಗೂ ಸದಸ್ಯರು ಭಾರತ ಸರ್ಕಾರ ಕಾರ್ಯದರ್ಶಿಯ ಸ್ಥಾನಮಾನವನ್ನು ಹೊಂದಿರುತ್ತಾರೆ.</p>.<p>* ಶಾಶ್ವತ ಕಾರ್ಯದರ್ಶಿ ಕಚೇರಿಯು ನವದೆಹಲಿಯಲ್ಲಿದೆ ಹಾಗೂ ದೇಶಾದ್ಯಂತ ಆರು ವಿಭಾಗೀಯ ಕಚೇರಿಗಳನ್ನು ಹೊಂದಿದ್ದು ಇದು ಸಿವಿಲ್ ನ್ಯಾಯಾಲಯದ ಅಧಿಕಾರವನ್ನು ಹೊಂದಿದೆ.</p>.<p><strong>ಆಯೋಗದ ಕಾರ್ಯಗಳು :</strong></p>.<p>* ಪರಿಶಿಷ್ಟ ಪಂಗಡಗಳ ಸಂರಕ್ಷಣೆಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ತನಿಖೆ ನಡೆಸುವುದು ಮತ್ತು ನಿಗಾವಹಿಸುವುದು.</p>.<p>* ಪರಿಶಿಷ್ಟ ಪಂಗಡಗಳ ಹಕ್ಕುಗಳನ್ನು ಕಾಯ್ದುಕೊಳ್ಳಲು ಮತ್ತು ಹಿತರಕ್ಷಣೆ ಮಾಡಲು ನಿರ್ದಿಷ್ಟ ದೂರುಗಳ ವಿರುದ್ಧ ವಿಚಾರಣೆ ನಡೆಸುವುದು.</p>.<p>* ಪರಿಶಿಷ್ಟ ಪಂಗಡಗಳ ಸಾಮಾಜಿಕ ಆರ್ಥಿಕ ಅಭಿವೃದ್ಧಿಯ ಯೋಜನಾ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವುದು, ಸಲಹೆ ನೀಡುವುದು ಮತ್ತು ಕೇಂದ್ರಾಡಳಿತ ಪ್ರದೇಶ ಹಾಗೂ ಯಾವುದೇ ರಾಜ್ಯದಲ್ಲಿ ಈ ಬಗೆಗಿನ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದು.</p>.<p>*ಪರಿಶಿಷ್ಟ ಪಂಗಡಗಳ ರಕ್ಷಣೆಗೆ, ಕಲ್ಯಾಣಕ್ಕೆ ಮತ್ತು ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಅವರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಪರಿಣಾಮಕಾರಿಯಾದ ಅನುಷ್ಠಾನಕ್ಕೆ ಕೇಂದ್ರಾಡಳಿತ ಪ್ರದೇಶ ಅಥವಾ ಯಾವುದೇ ರಾಜ್ಯವು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವುದು ಹಾಗೂ ಶಿಫಾರಸು ನೀಡುವುದು.</p>.<p>* ಪರಿಶಿಷ್ಟ ಪಂಗಡಗಳ ರಕ್ಷಣೆ, ಕಲ್ಯಾಣ, ಅಭಿವೃದ್ಧಿಗೆ ಸಂಬಂಧಿಸಿದಂತೆ ಇತರ ಕೆಲಸಗಳನ್ನು ನಿರ್ವಹಿಸುವುದರ ಜತೆಗೆ</p>.<p>* ಸಮುದಾಯಗಳ ಹಿತ ರಕ್ಷಣೆಗೆ ಸಂಬಂಧಿಸಿದಂತೆ ವಾರ್ಷಿಕವಾಗಿ ಅಥವಾ ಆಯೋಗಕ್ಕೆ ಯಾವುದೇ ಸಮಯದಲ್ಲಿ ಸೂಕ್ತ ಎನಿಸಿದರೆ ರಾಷ್ಟ್ರಪತಿಗಳಿಗೆ ವರದಿ ನೀಡುವುದು.</p>.<p>* ಪರಿಶಿಷ್ಟ ಪಂಗಡಗಳ ಮೇಲೆ ಪರಿಣಾಮ ಬೀರಬಲ್ಲ ನೀತಿ ನಿರೂಪಣೆಗಳ ವಿಚಾರದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಹಾಗೂ ಪ್ರತಿ ರಾಜ್ಯ ಸರ್ಕಾರಗಳು ಆಯೋಗದೊಂದಿಗೆ ಸಮಾಲೋಚನೆ ನಡೆಸಬೇಕು.</p>.<p><strong>ಎಸ್ಸಿ, ಎಸ್ಟಿಗೆ ಇರುವ ಅಧಿಕಾರ:<br></strong></p><p>* ದೂರುಗಳ ವಿಚಾರಣೆಯ ಸಂದರ್ಭದಲ್ಲಿ ಈ ಕೆಳಗಿನ ವಿಚಾರಗಳಲ್ಲಿ ಏನ್ ಸಿ ಎಸ್ ಟಿ ಗೆ ಸಿವಿಲ್ ನ್ಯಾಯಾಲಯಕ್ಕೆ ಇರುವ ಎಲ್ಲಾ ಅಧಿಕಾರವೂ ಇರುತ್ತದೆ</p>.<p>* ಭಾರತದ ಯಾವುದೇ ಭಾಗದಲ್ಲಿರುವ ವ್ಯಕ್ತಿಯನ್ನು ಹಾಜರಾಗುವಂತೆ ಸಮನ್ಸ್ ಜಾರಿ ಮಾಡುವುದು ಹಾಗೂ ವ್ಯಕ್ತಿಯನ್ನು ಪರೀಕ್ಷಿಸುವುದು.</p>.<p>* ಯಾವುದೇ ದಾಖಲೆಗಳ ಅನ್ವೇಷಣೆ ಮತ್ತು ಸಲ್ಲಿಕೆಯ ಅಗತ್ಯಗಳ ಸಂದರ್ಭ ಬಂದಾಗ ಅಫಿದವಿತ್ ಆಧಾರದ ಮೇಲೆ ಸಾಕ್ಷಿ ಪಡೆಯಬಹುದು.</p>.<p>* ನ್ಯಾಯಾಲಯ ಅಥವಾ ಕಚೇರಿಯಿಂದ ದಾಖಲೆಗಳನ್ನು ಅಥವಾ ಅದರ ಪ್ರತಿಯನ್ನು ಪಡೆಯುವ ಕೋರಿಕೆ.</p>.<p>*ಸಮನ್ಸ್ ಜಾರಿ ಮಾಡುವುದು ಅಥವಾ ಸಾಕ್ಷಿಗಳ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆ ಸಂಬಂಧ ಸಂವಹನ ನಡೆಸುವುದು.</p>.<p>* ಸಂವಿಧಾನದ ವಿಧಿ 338 ರ ಪ್ರಕಾರ ಪರಿಶಿಷ್ಟ ಪಂಗಡಗಳ ಮೇಲೆ ಪರಿಣಾಮ ಬೀರಬಲ್ಲಂತಹ ಎಲ್ಲಾ ಪ್ರಮುಖ ನೀತಿ ನಿರೂಪಣೆ ವಿಚಾರಗಳ ಸಂಬಂಧ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಯೋಗದ ಸಲಹೆಯನ್ನು ಪಡೆಯಬೇಕು.</p>.<p>* ಬುಡಕಟ್ಟು ಸಮುದಾಯಗಳ ಮೂಲಭೂತ ವಿಚಾರಗಳಿಗೆ ಸಂಬಂಧಿಸಿದಂತೆ ನೀತಿ ಅನುಷ್ಠಾನ ಮತ್ತು ತನಿಖೆಗಾಗಿ ಏನ್ ಸಿ ಎಸ್ ಟಿ 10 ವಲಯಗಳನ್ನು ಗುರುತಿಸಿದ್ದು ಅವು ಹೀಗಿವೆ.</p>.<p>1. ಅರಣ್ಯ ಹಕ್ಕು</p>.<p>2.ಗಣಿ ಸಂಬಂಧಿತ ಸಮಸ್ಯೆಗಳು</p>.<p>3. ಹಣಕಾಸು ವಿಚಾರಗಳು ಮತ್ತು ಅಭಿವೃದ್ಧಿ ಯೋಜನೆಗಳ ಅನುಷ್ಠಾನ</p>.<p>4. ದೌರ್ಜನ್ಯ</p>.<p>5. ಕುಂದುಕೊರತೆ</p>.<p>6. ಒಳಗೊಳ್ಳುವಿಕೆ ಮತ್ತು ಹೊರಹಾಕುವಿಕೆಯ ಅಂಶಗಳು</p>.<p>7. ಆರೋಗ್ಯ ಮತ್ತು ಪೌಷ್ಟಿಕಾಂಶ</p>.<p>8. ಶಿಕ್ಷಣ</p>.<p>9. ಕಾನೂನು ಮತ್ತು ಸಂವಿಧಾನಾತ್ಮಕ ವಿಚಾರ</p>.<p>10. ಕಲ್ಯಾಣ ಯೋಜನೆಗಳಲ್ಲಿ ಪರಿಶಿಷ್ಟ ಪಂಗಡಗಳ ಅಂಶ</p>.<p>ಈ 10 ಅಂಶಗಳಿಗೆ ಸಂಬಂಧಿಸಿದಂತೆ ಆಯೋಗವು 'ಕುಂದುಕೊರತೆ ನಿವಾರಣೆ ಮತ್ತು ಯೋಜನೆ' ಕಾರ್ಯವನ್ನು ಕೈಗೊಳ್ಳುತ್ತದೆ.</p>.<p><strong>ಕುಂದುಕೊರತೆ ಪರಿಹಾರ :</strong></p>.<p>* ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ ಮೇಲೆ ನಡೆಯುತ್ತಿರುವ <br>ಅನ್ಯಾಯಗಳ ಬಗ್ಗೆ ಜನರಿಂದ, ನಾಗರಿಕ ಸಂಸ್ಥೆಗಳಿಂದ <br>ಮತ್ತು ಸರ್ಕಾರಿ ಇತರ ಸಂಸ್ಥೆಗಳಿಂದ ಆಯೋಗವು ಅನೇಕ ಪತ್ರಗಳನ್ನು ಸ್ವೀಕರಿಸುತ್ತದೆ.</p>.<p>* ಈ ಪಂಗಡಗಳ ಜನರ ಮೇಲಾಗುತ್ತಿರುವ ದೌರ್ಜನ್ಯ, ಶೋಷಣೆ ಮತ್ತು ಸಾಮಾಜಿಕ ಅನ್ಯಾಯದ ಬಗ್ಗೆಗೂ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಬೆಳಕು ಚೆಲ್ಲುತ್ತವೆ.</p>.<p>l ಯಾವುದೇ ಅನ್ಯಾಯದ ಪ್ರಕರಣಗಳು ಗಮನಕ್ಕೆ ಬರುತ್ತಿದ್ದಂತೆಯೇ ಆಯೋಗವು ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನ ಮಾಡುತ್ತದೆ. ಇದನ್ನು ಸಾಧಿಸಲು ಆಯೋಗಕ್ಕೆ ರಾಜ್ಯದ ಎಲ್ಲಾ ಅಂಗಗಳಿಂದ ಸಹಕಾರ ಮತ್ತು ನೆರವು ಸಿಗುತ್ತದೆ.</p>.<p>* ಆಯೋಗದ ಸದಸ್ಯರು ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಾರೆ ಹಾಗೂ ಬುಡಕಟ್ಟು ಜನರಿಗೆ ತಮ್ಮ ಕುಂದುಕೊರತೆಗಳಿಗೆ ತಮ್ಮ ಸ್ಥಳದಲ್ಲಿ ಪರಿಹಾರವನ್ನು ಪಡೆಯಲು ಶ್ರಮಿಸುತ್ತಾರೆ.</p>.<p>* ಸಾರ್ವಜನಿಕರು ತಮ್ಮ ದೂರುಗಳನ್ನು ದಾಖಲಿಸಲು ಎನ್ ಸಿ ಎಸ್ ಟಿ ಯು ತನ್ನದೇ ಆದ ಪೋರ್ಟಲ್ ಅನ್ನು ಕೂಡ ಸ್ಥಾಪಿಸಿದೆ.</p>.<p><strong>ಭಾರತದಲ್ಲಿ ಬುಡಕಟ್ಟು ಸಮುದಾಯದ ನಿರ್ದಿಷ್ಟ ಅಗತ್ಯಗಳು</strong> </p> <p>ಭಾರತದಲ್ಲಿ ಬುಡಕಟ್ಟು ಸಮುದಾಯವು ಆಯಾ ಭೌಗೋಳಿಕ ಪ್ರದೇಶಗಳಿಗೆ ತಕ್ಕಂತೆ ವಿಶೇಷವಾದ ಸಾಂಸ್ಕೃತಿಕ ವಿನ್ಯಾಸಗಳನ್ನು ಹೊಂದಿರುವುದರಿಂದ ಅದರ ಸ್ವರೂಪ ವಿಶಿಷ್ಟವಾಗಿರುತ್ತದೆ ಮತ್ತು ಅವರ ಸಮಸ್ಯೆಗಳು ಭಿನ್ನವಾಗಿರುತ್ತದೆ. l ಅವರು ಸುಸ್ಥಿರ ಅಭಿವೃದ್ಧಿಯ ಹರಿಕಾರರಾಗಿದ್ದು ಬುಡಕಟ್ಟು ಜನಾಂಗದವರು ಎಲ್ಲಿಯೇ ವಾಸಿಸಲಿ ಅವರು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವ ನಿಸರ್ಗದ ಶಿಶುಗಳಾಗಿದ್ದಾರೆ.ಇವರ ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಹಿತರಕ್ಷಣೆಗಾಗಿ ಎನ್ಸಿಎಸ್ಟಿಗೆ ವಿಶೇಷ ಸ್ಥಾನಮಾನವನ್ನು ನೀಡಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>