ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಎರಡು ಸೆಮಿಫೈನಲ್ಗಳ ಕಾಮೆಂಟ್ರಿ ನೀಡಲಿರುವ ಆಕಾಶವಾಣಿಯ ತಂಡದಲ್ಲಿ ನಗರದ ಕ್ರಿಕೆಟ್ ಅಂಕಿ ಅಂಶ ತಜ್ಞ ಎಚ್.ಆರ್. ಗೋಪಾಲಕೃಷ್ಣ ಕಾರ್ಯನಿರ್ವಹಿಸಲಿದ್ದಾರೆ. ಅವರು ವೀಕ್ಷಕ ವಿವರಣೆಗಾರರ ತಂಡಕ್ಕೆ ಅಂಕಿ ಅಂಶದ ನೆರವು ಒದಗಿಸುವರು.
ಗೋಪಾಲಕೃಷ್ಣ ಅವರು ನೂರು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಅಂಕಿ ಅಂಶ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಹೋದ ಐವತ್ತು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.