ನವದೆಹಲಿ: ಸಂದರ್ಶನದಲ್ಲಿ ತಮ್ಮ ಪತ್ನಿ, ಗುಜರಾತ್ನ ಜಾಮ್ನಗರದ ಬಿಜೆಪಿ ಶಾಸಕಿ ರಿವಾಬಾ ವಿರುದ್ಧ ತಂದೆ ಅನಿರುದ್ಧ ಸಿನ್ಹಾ ಜಡೇಜ ಮಾಡಿರುವ ಆರೋಪಗಳ ಬಗ್ಗೆ ಭಾರತ ಕ್ರಿಕೆಟ್ ತಂಡದ ಆಟಗಾರ ರವೀಂದ್ರ ಜಡೇಜ ಕಿಡಿಕಾರಿದ್ದಾರೆ.
2016ರ ಏಪ್ರಿಲ್ನಲ್ಲಿ ರಿವಾಬಾಳನ್ನು ಮದುವೆಯಾದ ಬಳಿಕ ನನ್ನ ಮಗನಿಗೆ ಸಮಸ್ಯೆಗಳು ಪ್ರಾರಂಭವಾದವು.‘ನಿಮಗೆ ನಾನು ಒಂದು ಸತ್ಯವನ್ನು ಹೇಳಲು ಬಯಸುತ್ತೇನೆ. ಅದೇನೆಂದರೆ, ನನಗೂ ಮತ್ತು ಜಡೇಜ ಹಾಗೂ ಆತನ ಪತ್ನಿ ರಿವಾಬಾ ನಡುವೆ ಯಾವುದೇ ಸಂಬಂಧ ಉಳಿದಿಲ್ಲ’ ಎಂದು ಗುಜರಾತ್ನ ದಿನಪತ್ರಿಕೆ ದಿವ್ಯ ಭಾಸ್ಕರ್ಗೆ ನೀಡಿರುವ ಸಂದರ್ಶನದಲ್ಲಿ ಜಡೇಜ ತಂದೆ ಅನಿರುದ್ಧ ಸಿನ್ಹಾ ಹೇಳಿದ್ದರು.
ತಮ್ಮ ತಂದೆ ಆರೋಪಗಳಿಗೆ ಪ್ರತಿಕ್ರಿಯಿಸಿರುವ ರವೀಂದ್ರ ಜಡೇಜ, ಪೂರ್ವಯೋಜಿತ ಸಂದರ್ಶನವನ್ನು ನಂಬಬೇಡಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
‘ಪೂರ್ವ ಯೋಜಿತ ಸಂದರ್ಶನದಲ್ಲಿ ಅವರು ಹೇಳಿರುವ ವಿಷಯಗಳನ್ನು ನಿರ್ಲಕ್ಷಿಸಿ’ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ.