ವಿಶ್ವಕಪ್ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಎಂದೂ ಗೆದ್ದಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಬಾಬರ್, 'ಪ್ರತಿಯೊಂದು ಪಂದ್ಯವೂ ಅದರಲ್ಲೂ ವಿಶೇಷವಾಗಿ ಮೊದಲನೇಯ ಪಂದ್ಯದ ಒತ್ತಡ ಹಾಗೂ ತೀವ್ರತೆಯ ಬಗ್ಗೆ ತಿಳಿದಿದೆ. ಮೊದಲ ಪಂದ್ಯ ಗೆದ್ದು ಮುಂದಿನ ಪಂದ್ಯಗಳಲ್ಲಿ ಅದೇ ಆವೇಗ ಕಾಪಾಡಿಕೊಳ್ಳುವ ಭರವಸೆಯಿದೆ. ಟೂರ್ನಿಗೂ ಮುನ್ನ ವಿಶ್ವಾಸವು ಅತಿ ಮುಖ್ಯವೆನಿಸುತ್ತದೆ. ನಮ್ಮ ಆತ್ಮವಿಶ್ವಾಸ ಹಾಗೂ ಮನೋಬಲ ಉನ್ನತ ಮಟ್ಟದಲ್ಲಿದೆ. ನಾವು ಕಳೆದು ಹೋಗಿರುವುದರ ಬಗ್ಗೆ ಯೋಚಿಸುವುದಿಲ್ಲ. ಭವಿಷ್ಯದ ಬಗ್ಗೆ ಯೋಚಿಸುತ್ತೇವೆ. ಅದಕ್ಕಾಗಿ ತಯಾರಿ ನಡೆಸುತ್ತೇವೆ' ಎಂದಿದ್ದಾರೆ.