ಕೃಷಿಗಾಗಿ ಟ್ರ್ಯಾಕ್ಟರ್ ಖರೀದಿ
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿ 36 ಎಕರೆ ಜಮೀನು ಹೊಂದಿರುವ ರೋಜರ್ ಬಿನ್ನಿ ನಗರದಲ್ಲಿ ಟ್ರ್ಯಾಕ್ಟರ್ ಖರೀದಿಸಿದರು. ನಂಜನಗೂಡು ರಸ್ತೆಯಲ್ಲಿರುವ ಈಶ್ವರಿ ಟ್ರ್ಯಾಕ್ಟರ್ಸ್ ಶೋರೂಂ ಗೆ ಭೇಟಿ ನೀಡಿದ ಅವರನ್ನು ಶೋ ರೂಂ ಮಾಲೀಕರಾದ ಅಶೋಕ್ ಮತ್ತು ಪ್ರಶಾಂತ್ ಸನ್ಮಾನಿಸಿ ಗೌರವಿಸಿದರು.
ನಂತರ ಹೊಸ ಟ್ರ್ಯಾಕ್ಟರ್ ಕೀಯನ್ನು ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಟ್ರ್ಯಾಕ್ಟರ್ ಖರೀದಿಸಿದ ಇತರೆ ಗ್ರಾಹಕರಿಗೆ ಬಿನ್ನಿಯವರು ಕೀಗಳನ್ನು ಹಸ್ತಾಂತರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ ‘ನಮ್ಮ ಪೂರ್ವಿಕರು ಕೃಷಿಕರಲ್ಲ. ಆದರೆ ನನಗೆ ಕೃಷಿ ಬಗ್ಗೆ ವಿಶೇಷ ಆಸಕ್ತಿ.
25 ವರ್ಷಗಳಿಂದ ಕೃಷಿ ಮಾಡುತ್ತಿದ್ದೇನೆ. ಸ್ಥಳೀಯ ಡೀಲರ್ ಬಳಿಯಲ್ಲೇ ಟ್ರ್ಯಾಕ್ಟರ್ ಖರೀದಿಸಬೇಕಾಗಿರುವುದರಿಂದ ಇಲ್ಲಿಗೆ ಬಂದಿದ್ದೇನೆ’ ಎಂದರು. ಅವರು ಬಂದ ಸುದ್ದಿ ತಿಳಿದು ಕ್ರಿಕೆಟ್ ಪ್ರೇಮಿಗಳು ಶೋರೂಂ ಮುಂದೆ ನೆರೆದಿದ್ದರು. ಹಲವರು ಹಸ್ತಾಕ್ಷರ ಪಡೆದರು. ಫೋಟೊ ತೆಗೆಸಿಕೊಂಡರು.