‘ಉದ್ಘಾಟನಾ ಸಮಾರಂಭಗಳಿಂದ ಹಣ ವ್ಯರ್ಥ. ಅದರ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಆಸಕ್ತಿ ಹೊಂದಿದಂತಿಲ್ಲ. ಸಮಾರಂಭದಲ್ಲಿ ಪ್ರದರ್ಶನ ನೀಡುವವರಿಗೆ ಹೆಚ್ಚು ಹಣ ನೀಡಬೇಕಾಗುತ್ತದೆ’ ಎಂದುಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಉದ್ಘಾಟನಾ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗುತ್ತಿದ್ದು ಬಾಲಿವುಡ್ ತಾರೆಯರು, ವಿದೇಶಿ ಪಾಪ್ ಗಾಯಕರನ್ನು ಕರೆಸಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ವರ್ಷ ಫೆಬ್ರುವರಿಯಲ್ಲಿ ಪುಲ್ವಾಮಾದಲ್ಲಿ ಸೇನಾ ಪಡೆಗಳ ಮೇಲೆ ಉಗ್ರ ದಾಳಿ ನಡೆದ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಲಾಗಿತ್ತು. ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗುವ ಸಲುವಾಗಿ ಸಮಾರಂಭಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಸಶಸ್ತ್ರ ಪಡೆಗಳಿಗೆ ನೀಡಲಾಗಿತ್ತು.
ಉದ್ಘಾಟನಾ ಸಮಾರಂಭಕ್ಕೆಂದು ಮೀಸಲಿಟ್ಟಿದ್ದ ₹20 ಕೋಟಿ ಪೈಕಿ ಭಾರತೀಯ ಸೇನೆಗೆ₹11 ಕೋಟಿ, ಸಿಆರ್ಪಿಎಫ್ಗೆ ₹7 ಕೋಟಿ, ನೌಕಾಪಡೆ ಮತ್ತು ವಾಯುಪಡೆಗೆ ತಲಾ ₹1 ಕೋಟಿ ನೀಡಲಾಗಿತ್ತು.