<p><strong>ನವದೆಹಲಿ</strong>: ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಆಟದ ತಂತ್ರಗಳಿಗೆ ಸಂಬಂಧಿಸಿದಂತೆ ತಮ್ಮ ಅಚಲ ನಿಲುವುಗಳಿಗೆ ಅಂಟಿಕೊಂಡವರು. ಬ್ಯಾಟಿಂಗ್ ಆಳ ಬಲಪಡಿಸುವ ಉದ್ದೇಶದಿಂದ ಆಲ್ರೌಂಡರ್ಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿರುವುದೂ ಇವುಗಳಲ್ಲಿ ಒಂದು.</p>.<p>ಹೆಡ್ ಕೋಚ್ ಅವರ ಈ ನಿಲುವಿನಿಂದಾಗಿ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಪ್ರಸ್ತುತ ತಂಡದಲ್ಲಿ ಸ್ಥಾನ ಪಡೆಯುವುದು ಕಠಿಣವಾಗುತ್ತಿದೆ. ಈ ಎಡಗೈ ರಿಸ್ಟ್ ಸ್ಪಿನ್ನರ್ 113 ಪಂದ್ಯಗಳಿಂದ 181 ವಿಕೆಟ್ಗಳನ್ನು ಪಡೆದಿದ್ದಾರೆ.</p>.<p>ಈ ಸರಣಿಯಲ್ಲಿ ಮೂರೇ ಪಂದ್ಯಗಳು ಇರುವುದರಿಂದ, ಬೌನ್ಸ್ ಮತ್ತು ಸೀಮ್ ಚಲನೆಗೆ ಅವಕಾಶವಿರುವ ಆಸ್ಟ್ರೇಲಿಯಾದ ಅಂಗಣದಲ್ಲಿ ಗಂಭೀರ್ ಮುಂದೆಯೂ ಮೂವರು ಆಲ್ರೌಂಡರ್ಗಳನ್ನು ಆಡಿಸುತ್ತಾರೆಯೇ ಎಂದು ಹೇಳುವುದು ಕಷ್ಟ.</p>.<p>ಮಳೆಯಿಂದಾಗಿ ಪದೇ ಪದೇ ನಿಲುಗಡೆಯಾದ ಮೊದಲ ಪಂದ್ಯದಲ್ಲಿ ಭಾರತ ಕೇವಲ 136 ರನ್ ಗಳಿಸಿತ್ತು. ರಕ್ಷಿಸಲು ಅಲ್ಪಮೊತ್ತ ಮಾತ್ರ ಇದ್ದ ಕಾರಣ ಹಿನ್ನಡೆಗೆ ಬೌಲಿಂಗ್ ಘಟಕವನ್ನು ದೂರುವುದು ನ್ಯಾಯಸಮ್ಮತವೆನಿಸದು.</p>.<p>ಆದರೆ ಭಾರತ ಮೂವರು ಆಲ್ರೌಂಡರ್ಗಳನ್ನು– ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ (ಕೊನೆಯ ಇಬ್ಬರು ಪರಿಣತ ಸ್ಪಿನ್ನರ್ಗಳು)– ಅವರ ಮೇಲೆ ಉಳಿದ ಪಂದ್ಯಗಳಿಗೂ ವಿಶ್ವಾಸವಿಟ್ಟಲ್ಲಿ, ಕಾನ್ಪುರದ ಬೌಲರ್ಗೆ ತಂಡದಲ್ಲಿ ಸ್ಥಾನ ಕಲ್ಪಿಸುವುದು ಅಸಂಭವ ಎನಿಸಲಿದೆ. </p>.<p>ಇದೇ 23ರಂದು (ಗುರುವಾರ) ಅಡಿಲೇಡ್ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಇದೇ ಹನ್ನೊಂದರ ಬಳಗವನ್ನು ಉಳಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಆದರೆ ಪ್ರವಾಸಿ ತಂಡಕ್ಕೆ ಈ ಸಂಯೋಜನೆ ಸೂಕ್ತವಾಗಿದೆಯೇ ಎಂಬ ಪ್ರಶ್ನೆ ಉಳಿಯಲಿದೆ.</p>.<p>ಕುಲದೀಪ್ ಅವರನ್ನು ಹೊರಗಿಡುತ್ತಿರುವುದು ಗಂಭೀರ್ ಅವರ ಕಾಲಕ್ಕೆ ಸೀಮಿತವಾಗಿಲ್ಲ. ಈ ಹಿಂದೆ ರವಿ ಶಾಸ್ತ್ರಿ ಹೆಡ್ ಕೋಚ್ ಆಗಿದ್ದಾಗಲೂ ಹೀಗೇ ಆಗಿತ್ತು. ರಾಹುಲ್ ದ್ರಾವಿಡ್ ಅವರ ಅವಧಿಯಲ್ಲೂ ಇದು ಪುನರಾವರ್ತನೆಯಾಯಿತು.</p>.<p>ಈ ರೀತಿ ಮಾಡುವುದರಿಂದ ಕುಲದೀಪ್ ಅವರ ಮನೋಬಲದ ಮೇಲೆ ಪರಿಣಾಮವಾಗಲಿದೆ ಎಂದು ದಿಗ್ಗಜ ಸ್ಪಿನ್ನರ್ಗಳಲ್ಲಿ ಒಬ್ಬರದಾದ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಡುತ್ತಾರೆ. </p>.<p>‘ಸುರಕ್ಷಿತ ಬೌಲರ್ ಆಗಿ ವಾಷಿಂಗ್ಟನ್ ಅವರನ್ನು ಆಡಿಸಬೇಕೆ ಅಥವಾ ‘ಹೈ ರಿಸ್ಕ್, ಹೈ ರಿವಾರ್ಡ್’ ಆಟಗಾರ ಕುಲದೀಪ್ ಅವರನ್ನು ಆಯ್ಕೆ ಮಾಡಬೇಕೇ’ ಎಂಬುದು ಗಂಭೀರ್ ಮತ್ತು ಶುಭಮನ್ ಗಿಲ್ ಅವರ ಮುಂದಿರುವ ಪ್ರಶ್ನೆ. ಉತ್ತರ ಸುಲಭವಲ್ಲ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಆಟದ ತಂತ್ರಗಳಿಗೆ ಸಂಬಂಧಿಸಿದಂತೆ ತಮ್ಮ ಅಚಲ ನಿಲುವುಗಳಿಗೆ ಅಂಟಿಕೊಂಡವರು. ಬ್ಯಾಟಿಂಗ್ ಆಳ ಬಲಪಡಿಸುವ ಉದ್ದೇಶದಿಂದ ಆಲ್ರೌಂಡರ್ಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿರುವುದೂ ಇವುಗಳಲ್ಲಿ ಒಂದು.</p>.<p>ಹೆಡ್ ಕೋಚ್ ಅವರ ಈ ನಿಲುವಿನಿಂದಾಗಿ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ಪ್ರಸ್ತುತ ತಂಡದಲ್ಲಿ ಸ್ಥಾನ ಪಡೆಯುವುದು ಕಠಿಣವಾಗುತ್ತಿದೆ. ಈ ಎಡಗೈ ರಿಸ್ಟ್ ಸ್ಪಿನ್ನರ್ 113 ಪಂದ್ಯಗಳಿಂದ 181 ವಿಕೆಟ್ಗಳನ್ನು ಪಡೆದಿದ್ದಾರೆ.</p>.<p>ಈ ಸರಣಿಯಲ್ಲಿ ಮೂರೇ ಪಂದ್ಯಗಳು ಇರುವುದರಿಂದ, ಬೌನ್ಸ್ ಮತ್ತು ಸೀಮ್ ಚಲನೆಗೆ ಅವಕಾಶವಿರುವ ಆಸ್ಟ್ರೇಲಿಯಾದ ಅಂಗಣದಲ್ಲಿ ಗಂಭೀರ್ ಮುಂದೆಯೂ ಮೂವರು ಆಲ್ರೌಂಡರ್ಗಳನ್ನು ಆಡಿಸುತ್ತಾರೆಯೇ ಎಂದು ಹೇಳುವುದು ಕಷ್ಟ.</p>.<p>ಮಳೆಯಿಂದಾಗಿ ಪದೇ ಪದೇ ನಿಲುಗಡೆಯಾದ ಮೊದಲ ಪಂದ್ಯದಲ್ಲಿ ಭಾರತ ಕೇವಲ 136 ರನ್ ಗಳಿಸಿತ್ತು. ರಕ್ಷಿಸಲು ಅಲ್ಪಮೊತ್ತ ಮಾತ್ರ ಇದ್ದ ಕಾರಣ ಹಿನ್ನಡೆಗೆ ಬೌಲಿಂಗ್ ಘಟಕವನ್ನು ದೂರುವುದು ನ್ಯಾಯಸಮ್ಮತವೆನಿಸದು.</p>.<p>ಆದರೆ ಭಾರತ ಮೂವರು ಆಲ್ರೌಂಡರ್ಗಳನ್ನು– ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ (ಕೊನೆಯ ಇಬ್ಬರು ಪರಿಣತ ಸ್ಪಿನ್ನರ್ಗಳು)– ಅವರ ಮೇಲೆ ಉಳಿದ ಪಂದ್ಯಗಳಿಗೂ ವಿಶ್ವಾಸವಿಟ್ಟಲ್ಲಿ, ಕಾನ್ಪುರದ ಬೌಲರ್ಗೆ ತಂಡದಲ್ಲಿ ಸ್ಥಾನ ಕಲ್ಪಿಸುವುದು ಅಸಂಭವ ಎನಿಸಲಿದೆ. </p>.<p>ಇದೇ 23ರಂದು (ಗುರುವಾರ) ಅಡಿಲೇಡ್ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಇದೇ ಹನ್ನೊಂದರ ಬಳಗವನ್ನು ಉಳಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಆದರೆ ಪ್ರವಾಸಿ ತಂಡಕ್ಕೆ ಈ ಸಂಯೋಜನೆ ಸೂಕ್ತವಾಗಿದೆಯೇ ಎಂಬ ಪ್ರಶ್ನೆ ಉಳಿಯಲಿದೆ.</p>.<p>ಕುಲದೀಪ್ ಅವರನ್ನು ಹೊರಗಿಡುತ್ತಿರುವುದು ಗಂಭೀರ್ ಅವರ ಕಾಲಕ್ಕೆ ಸೀಮಿತವಾಗಿಲ್ಲ. ಈ ಹಿಂದೆ ರವಿ ಶಾಸ್ತ್ರಿ ಹೆಡ್ ಕೋಚ್ ಆಗಿದ್ದಾಗಲೂ ಹೀಗೇ ಆಗಿತ್ತು. ರಾಹುಲ್ ದ್ರಾವಿಡ್ ಅವರ ಅವಧಿಯಲ್ಲೂ ಇದು ಪುನರಾವರ್ತನೆಯಾಯಿತು.</p>.<p>ಈ ರೀತಿ ಮಾಡುವುದರಿಂದ ಕುಲದೀಪ್ ಅವರ ಮನೋಬಲದ ಮೇಲೆ ಪರಿಣಾಮವಾಗಲಿದೆ ಎಂದು ದಿಗ್ಗಜ ಸ್ಪಿನ್ನರ್ಗಳಲ್ಲಿ ಒಬ್ಬರದಾದ ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಡುತ್ತಾರೆ. </p>.<p>‘ಸುರಕ್ಷಿತ ಬೌಲರ್ ಆಗಿ ವಾಷಿಂಗ್ಟನ್ ಅವರನ್ನು ಆಡಿಸಬೇಕೆ ಅಥವಾ ‘ಹೈ ರಿಸ್ಕ್, ಹೈ ರಿವಾರ್ಡ್’ ಆಟಗಾರ ಕುಲದೀಪ್ ಅವರನ್ನು ಆಯ್ಕೆ ಮಾಡಬೇಕೇ’ ಎಂಬುದು ಗಂಭೀರ್ ಮತ್ತು ಶುಭಮನ್ ಗಿಲ್ ಅವರ ಮುಂದಿರುವ ಪ್ರಶ್ನೆ. ಉತ್ತರ ಸುಲಭವಲ್ಲ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>