<p><strong>ಬೆಂಗಳೂರು:</strong> ಸಾಂಘಿಕ ಬೌಲಿಂಗ್ ಪ್ರದರ್ಶನ ನೀಡಿದ ಕರ್ನಾಟಕ ತಂಡವು, ರಾಮನಗರದ ಕೌಶಿಕಿ ಕ್ರಿಕೆಟ್ ಮೈದಾನದಲ್ಲಿ ನಡೆದ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಉತ್ತರಾಖಂಡ ತಂಡವನ್ನು 197 ರನ್ಗಳಿಂದ ಸೋಲಿಸಿತು.</p>.<p>ಈ ಗೆಲುವಿನೊಂದಿಗೆ ಕರ್ನಾಟಕ 51 ಅಂಕಗಳೊಡನೆ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಛತ್ತೀಸಗಢ (60 ಅಂಕ) ಮತ್ತು ಉತ್ತರ ಪ್ರದೇಶ (52) ಮೊದಲ ಎರಡು ಸ್ಥಾನದಲ್ಲಿವೆ.</p>.<p>ಭಾನುವಾರ 7 ವಿಕೆಟ್ಗಳೊಡನೆ 122 ರನ್ ಗಳಿಸಿದ್ದ ಉತ್ತರಾಖಂಡ ಪಂದ್ಯದ ಅಂತಿಮ ದಿನವಾದ ಸೋಮವಾರ ಬೇಗ ಶರಣಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಸೋಲುವ ಮೊದಲು ಹೋರಾಟ ತೋರಿತು. ಇಶಾಗ್ರ ಜಗೂರಿ (88) ಅವರು ದೇವಾಂಶ್ ಜೊತೆ ಎಂಟನೇ ವಿಕೆಟ್ಗೆ 103 ರನ್ ಸೇರಿಸಿದರು.</p>.<p>ಕರ್ನಾಟಕ ತಂಡವು ತನ್ನ ಮುಂದಿನ ಪಂದ್ಯವನ್ನು ಇದೇ 13 ರಿಂದ 16ರವರೆಗೆ ಹಿಮಾಚಲ ಪ್ರದೇಶ ವಿರುದ್ಧ ಆಡಲಿದೆ.</p>.<h2>ಸಂಕ್ಷಿಪ್ತ ಸ್ಕೋರು: </h2>.<p><strong>ಕರ್ನಾಟಕ</strong>: 244 ಮತ್ತು 8 ವಿಕೆಟ್ಗೆ 368 ಡಿ; </p>.<p><strong>ಉತ್ತರಾಖಂಡ:</strong> 160 ಮತ್ತು 61.3 ಓವರುಗಳಲ್ಲಿ 255 (ಆದಿತ್ಯ ನೈತಾನಿ 31, ಇಶಾಗ್ರ ಜಗೂರಿ 88, ಜಸ್ಕರನ್ 27, ದೇವಾಂಶ್ 45; ಮನ್ವಂತಕುಮಾರ್ ಎಲ್. 62ಕ್ಕೆ3, ಸಮಿತ್ ದ್ರಾವಿಡ್ 39ಕ್ಕೆ2, ಹಾರ್ದಿಕ್ ರಾಜ್ 66ಕ್ಕೆ3, ಶಶಿ ಕುಮಾರ್ ಕೆ. 24ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸಾಂಘಿಕ ಬೌಲಿಂಗ್ ಪ್ರದರ್ಶನ ನೀಡಿದ ಕರ್ನಾಟಕ ತಂಡವು, ರಾಮನಗರದ ಕೌಶಿಕಿ ಕ್ರಿಕೆಟ್ ಮೈದಾನದಲ್ಲಿ ನಡೆದ ಕರ್ನಲ್ ಸಿ.ಕೆ.ನಾಯ್ಡು ಟ್ರೋಫಿ ಎಲೀಟ್ ಡಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಉತ್ತರಾಖಂಡ ತಂಡವನ್ನು 197 ರನ್ಗಳಿಂದ ಸೋಲಿಸಿತು.</p>.<p>ಈ ಗೆಲುವಿನೊಂದಿಗೆ ಕರ್ನಾಟಕ 51 ಅಂಕಗಳೊಡನೆ ಗುಂಪಿನಲ್ಲಿ ಮೂರನೇ ಸ್ಥಾನದಲ್ಲಿದೆ. ಛತ್ತೀಸಗಢ (60 ಅಂಕ) ಮತ್ತು ಉತ್ತರ ಪ್ರದೇಶ (52) ಮೊದಲ ಎರಡು ಸ್ಥಾನದಲ್ಲಿವೆ.</p>.<p>ಭಾನುವಾರ 7 ವಿಕೆಟ್ಗಳೊಡನೆ 122 ರನ್ ಗಳಿಸಿದ್ದ ಉತ್ತರಾಖಂಡ ಪಂದ್ಯದ ಅಂತಿಮ ದಿನವಾದ ಸೋಮವಾರ ಬೇಗ ಶರಣಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಸೋಲುವ ಮೊದಲು ಹೋರಾಟ ತೋರಿತು. ಇಶಾಗ್ರ ಜಗೂರಿ (88) ಅವರು ದೇವಾಂಶ್ ಜೊತೆ ಎಂಟನೇ ವಿಕೆಟ್ಗೆ 103 ರನ್ ಸೇರಿಸಿದರು.</p>.<p>ಕರ್ನಾಟಕ ತಂಡವು ತನ್ನ ಮುಂದಿನ ಪಂದ್ಯವನ್ನು ಇದೇ 13 ರಿಂದ 16ರವರೆಗೆ ಹಿಮಾಚಲ ಪ್ರದೇಶ ವಿರುದ್ಧ ಆಡಲಿದೆ.</p>.<h2>ಸಂಕ್ಷಿಪ್ತ ಸ್ಕೋರು: </h2>.<p><strong>ಕರ್ನಾಟಕ</strong>: 244 ಮತ್ತು 8 ವಿಕೆಟ್ಗೆ 368 ಡಿ; </p>.<p><strong>ಉತ್ತರಾಖಂಡ:</strong> 160 ಮತ್ತು 61.3 ಓವರುಗಳಲ್ಲಿ 255 (ಆದಿತ್ಯ ನೈತಾನಿ 31, ಇಶಾಗ್ರ ಜಗೂರಿ 88, ಜಸ್ಕರನ್ 27, ದೇವಾಂಶ್ 45; ಮನ್ವಂತಕುಮಾರ್ ಎಲ್. 62ಕ್ಕೆ3, ಸಮಿತ್ ದ್ರಾವಿಡ್ 39ಕ್ಕೆ2, ಹಾರ್ದಿಕ್ ರಾಜ್ 66ಕ್ಕೆ3, ಶಶಿ ಕುಮಾರ್ ಕೆ. 24ಕ್ಕೆ2).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>