ಶಿವಮೊಗ್ಗ: ಅಜೇಯ ಶತಕ ಗಳಿಸುವ ಮೂಲಕ ಶನಿವಾರ ಉತ್ತಮ ಆರಂಭ ಒದಗಿಸಿದ್ದ ಆರಂಭಿಕ ಆಟಗಾರ ಪ್ರಖರ್ ಚತುರ್ವೇದಿ (ಔಟಾಗದೇ 256:451 ಎಸೆತ, 4x20, 6x1) ಹಾಗೂ ಮೂರನೇ ಕ್ರಮಾಂಕದ ಬ್ಯಾಟರ್ ಹರ್ಷಿಲ್ ಧರ್ಮಾನಿ (169 , 228 ಎಸೆತ, 4x19, 6x5) ಇಲ್ಲಿ ಮುಂಬೈ ವಿರುದ್ಧ ನಡೆದಿರುವ ಕೂಚ್ ಬಿಹಾರ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಕರ್ನಾಟಕಕ್ಕೆ ಭಾರಿ ಮುನ್ನಡೆ ದೊರಕಿಸುವಲ್ಲಿ ನೆರವಾದರು.