ಭಾರತದ ಎದುರು ಡಿಸೆಂಬರ್ನಲ್ಲಿ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದೆ. ಒಂದೊಮ್ಮೆ ಆ ಟೂರ್ನಿ ನಡೆದರೆ ಹೆಚ್ಚು ಆದಾಯ ಲಭಿಸುವ ನಿರೀಕ್ಷೆ ಇದೆ. ಆದರೆ, ಕೊರೊನಾ ವೈರಸ್ ಉಪಟಳವು ಹತೋಟಿಗೆ ಬರದಿದ್ದರೆ, ಈ ವರ್ಷದ ಎಲ್ಲ ಪ್ರಮುಖ ಟೂರ್ನಿಗಳನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಸಾಧ್ಯತೆಗಳು ಹೆಚ್ಚಿವೆ ಇದರಿಂದಾಗಿ ಹಾಗೊಮ್ಮೆ ನಷ್ಟವುಂಟಾದರೆ ತತ್ಕ್ಷಣಕ್ಕೆ ಭರಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ಕಾಮನ್ವೆಲ್ತ್ ಬ್ಯಾಂಕ್ನಿಂದ ಈ ಸಾಲವನ್ನು ಪಡೆಯಲಾಗಿದೆ ಎಂದು ‘ದ ಸಿಡ್ನಿ ಮಾರ್ನಿಂಗ್ ಹೆರಾಲ್ಡ್’ ವರದಿ ಮಾಡಿದೆ.