<p><strong>ಬೆಂಗಳೂರು:</strong> ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಸೀನಿಯರ್ ಹಾಗೂ ಜೂನಿಯರ್ ಕ್ರಿಕೆಟ್ ತಂಡಗಳ ತರಬೇತುದಾರರು ಮತ್ತು ಆಯ್ಕೆಗಾರರ ನೇಮಕವನ್ನು ಗುರುವಾರ ಪ್ರಕಟಿಸಿದೆ. </p>.<p>ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕೆ. ಯರೇಗೌಡ ನೇಮಕವಾಗಿದ್ದಾರೆ. ಕಳೆದ ಋತುವಿನಲ್ಲಿ ಅವರು ರಾಜ್ಯ 23 ವರ್ಷದೊಳಗಿನವರ ತಂಡದ ಕೋಚ್ ಆಗಿದ್ದರು. ಅವರ ಅವಧಿಯಲ್ಲಿ ತಂಡವು ಉತ್ತಮ ಫಲಿತಾಂಶ ಸಾಧನೆ ಮಾಡಿತ್ತು. </p>.<p>ಯರೇಗೌಡ ಅವರು 2022ರವರೆಗೆ ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿದ್ದರು. ಇದೀಗ ಮತ್ತೆ ಅವರು ತಂಡಕ್ಕೆ ಮರಳಿದ್ದಾರೆ. ಮನ್ಸೂರ್ ಅಲಿ ಖಾನ್ ಬೌಲಿಂಗ್ ಕೋಚ್ ಆಗಿದ್ದಾರೆ. ಶಬರೀಶ್ ಮೋಹನ್ ಫೀಲ್ಡಿಂಗ್ ಕೋಚ್ ಆಗಿದ್ಧಾರೆ. </p>.<p>23 ವರ್ಷದೊಳಗಿನವರ ತಂಡಕ್ಕೆ ಸೋಮಶೇಖರ್ ಎನ್. ಶಿರಗುಪ್ಪಿ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಸೀನಿಯರ್ ಮತ್ತು ಜೂನಿಯರ್ ತಂಡಗಳ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಜೆ. ಅಭಿರಾಮ್ ಮುಂದುವರಿದಿದ್ದಾರೆ. </p>.<p>ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಕರುಣಾ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೆಎಸ್ಸಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ಸಮಿತಿಗಳು ಇಂತಿವೆ: ರಾಜ್ಯ ಸೀನಿಯರ್ ಕ್ರಿಕೆಟ್ ತಂಡ: ಕೆ.ಯರೇಗೌಡ (ಮುಖ್ಯ ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶಬರೀಶ್ ಪಿ ಮೋಹನ್ (ಫೀಲ್ಡಿಂಗ್ ಕೋಚ್)</p>.<p>23 ವರ್ಷದೊಳಗಿನವರು: ಸೋಮಶೇಖರ ಎನ್. ಶಿರಗುಪ್ಪಿ (ಮುಖ್ಯ ಕೋಚ್), ರೋಹಿತ್ ಸಬರವಾಲ್ (ಫೀಲ್ಡಿಂಗ್ ಕೋಚ್)</p>.<p>19 ವರ್ಷದೊಳಗಿನವರು: ಕೆ.ಬಿ. ಪವನ್ (ಮುಖ್ಯ ಕೋಚ್), ಎಸ್.ಎಲ್. ಅಕ್ಷಯ್ (ಬೌಲಿಂಗ್ ಕೋಚ್)</p>.<p>16 ಮತ್ತು 14 ವರ್ಷದೊಳಗಿನವರು: ಕುನಾಲ್ ಕಪೂರ್ (ಮುಖ್ಯ ಕೋಚ್), ಆದಿತ್ಯ ಬಿ ಸಾಗರ್ (ಸಹಾಯಕ ಕೋಚ್). </p>.<p><strong>ಆಯ್ಕೆ ಸಮಿತಿ:</strong> ಸೀನಿಯರ್ ತಂಡ: ಜಿ. ಅಭಿರಾಮ್ (ಮುಖ್ಯಸ್ಥ), ಕೆ.ಎಲ್. ಅಶ್ವಥ್, ಸಿ. ರಘು, ಎನ್.ಸಿ. ಅಯ್ಯಪ್ಪ (ಆಯ್ಕೆಗಾರರು). </p>.<p><strong>ಜೂನಿಯರ್ ತಂಡಗಳು:</strong> ಜೆ. ಅಭಿರಾಮ್ (ಮುಖ್ಯಸ್ಥ), ಎಂ.ವಿ. ಪ್ರಶಾಂತ್, ಕೆ.ಎಂ. ಅಯ್ಯಪ್ಪ, ಉದಿತ್ ಪಟೆಲ್, ರಘೋತ್ತಮ ನವಲಿ (ಆಯ್ಕೆಗಾರರು)</p>.<p><strong>ಮಹಿಳೆಯರ ವಿಭಾಗ:</strong> ಸೀನಿಯರ್ ಮತ್ತು 23 ವರ್ಷದೊಳಗಿನವರು: ಕರುಣಾ ಜೈನ್ (ಮುಖ್ಯ ಕೋಚ್).</p>.<p>19 ವರ್ಷದೊಳಗಿವನರು: ರಕ್ಷಿತಾ ಕೃಷ್ಣಪ್ಪ (ಮುಖ್ಯ ಕೋಚ್)</p>.<p>15 ವರ್ಷದೊಳಗಿನವರು: ರಾಖಿ ಗಂಗಲ್ (ಮುಖ್ಯ ಕೋಚ್)</p>.<p><strong>ಆಯ್ಕೆ ಸಮಿತಿ:</strong> ಸೀನಿಯರ್ ಸಮಿತಿ: ಸುನಿತಾ ಅನಂತಕೃಷ್ಣನ್ (ಮುಖ್ಯಸ್ಥರು), ಮುಕ್ತಾ ಆರ್ ಅಳಗೇರಿ, ಅರುಣಾ ರೆಡ್ಡಿ, ಡಾ. ನಿವೇದಿತಾ ರೇಶ್ಮೆ (ಆಯ್ಕೆಗಾರರು.</p>.<p><strong>ಜೂನಿಯರ್ ಸಮಿತಿ:</strong> ಶರ್ಮಿಳಾ ಸಿದ್ಧೋಧನನ್ (ಮುಖ್ಯಸ್ಥರು), ರಂಜಿನಿ ಕುಮಾರ್, ಸಬಾ ಸಿದ್ಧಿಕಿ, ಮೀನಾ ಕುಮಾರಿ (ಆಯ್ಕೆಗಾರರು). </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಸೀನಿಯರ್ ಹಾಗೂ ಜೂನಿಯರ್ ಕ್ರಿಕೆಟ್ ತಂಡಗಳ ತರಬೇತುದಾರರು ಮತ್ತು ಆಯ್ಕೆಗಾರರ ನೇಮಕವನ್ನು ಗುರುವಾರ ಪ್ರಕಟಿಸಿದೆ. </p>.<p>ಕರ್ನಾಟಕ ರಣಜಿ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕೆ. ಯರೇಗೌಡ ನೇಮಕವಾಗಿದ್ದಾರೆ. ಕಳೆದ ಋತುವಿನಲ್ಲಿ ಅವರು ರಾಜ್ಯ 23 ವರ್ಷದೊಳಗಿನವರ ತಂಡದ ಕೋಚ್ ಆಗಿದ್ದರು. ಅವರ ಅವಧಿಯಲ್ಲಿ ತಂಡವು ಉತ್ತಮ ಫಲಿತಾಂಶ ಸಾಧನೆ ಮಾಡಿತ್ತು. </p>.<p>ಯರೇಗೌಡ ಅವರು 2022ರವರೆಗೆ ಕರ್ನಾಟಕ ತಂಡದ ಮುಖ್ಯ ಕೋಚ್ ಆಗಿದ್ದರು. ಇದೀಗ ಮತ್ತೆ ಅವರು ತಂಡಕ್ಕೆ ಮರಳಿದ್ದಾರೆ. ಮನ್ಸೂರ್ ಅಲಿ ಖಾನ್ ಬೌಲಿಂಗ್ ಕೋಚ್ ಆಗಿದ್ದಾರೆ. ಶಬರೀಶ್ ಮೋಹನ್ ಫೀಲ್ಡಿಂಗ್ ಕೋಚ್ ಆಗಿದ್ಧಾರೆ. </p>.<p>23 ವರ್ಷದೊಳಗಿನವರ ತಂಡಕ್ಕೆ ಸೋಮಶೇಖರ್ ಎನ್. ಶಿರಗುಪ್ಪಿ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ಸೀನಿಯರ್ ಮತ್ತು ಜೂನಿಯರ್ ತಂಡಗಳ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಜೆ. ಅಭಿರಾಮ್ ಮುಂದುವರಿದಿದ್ದಾರೆ. </p>.<p>ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಕರುಣಾ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೆಎಸ್ಸಿಎ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ಸಮಿತಿಗಳು ಇಂತಿವೆ: ರಾಜ್ಯ ಸೀನಿಯರ್ ಕ್ರಿಕೆಟ್ ತಂಡ: ಕೆ.ಯರೇಗೌಡ (ಮುಖ್ಯ ಕೋಚ್), ಮನ್ಸೂರ್ ಅಲಿ ಖಾನ್ (ಬೌಲಿಂಗ್ ಕೋಚ್), ಶಬರೀಶ್ ಪಿ ಮೋಹನ್ (ಫೀಲ್ಡಿಂಗ್ ಕೋಚ್)</p>.<p>23 ವರ್ಷದೊಳಗಿನವರು: ಸೋಮಶೇಖರ ಎನ್. ಶಿರಗುಪ್ಪಿ (ಮುಖ್ಯ ಕೋಚ್), ರೋಹಿತ್ ಸಬರವಾಲ್ (ಫೀಲ್ಡಿಂಗ್ ಕೋಚ್)</p>.<p>19 ವರ್ಷದೊಳಗಿನವರು: ಕೆ.ಬಿ. ಪವನ್ (ಮುಖ್ಯ ಕೋಚ್), ಎಸ್.ಎಲ್. ಅಕ್ಷಯ್ (ಬೌಲಿಂಗ್ ಕೋಚ್)</p>.<p>16 ಮತ್ತು 14 ವರ್ಷದೊಳಗಿನವರು: ಕುನಾಲ್ ಕಪೂರ್ (ಮುಖ್ಯ ಕೋಚ್), ಆದಿತ್ಯ ಬಿ ಸಾಗರ್ (ಸಹಾಯಕ ಕೋಚ್). </p>.<p><strong>ಆಯ್ಕೆ ಸಮಿತಿ:</strong> ಸೀನಿಯರ್ ತಂಡ: ಜಿ. ಅಭಿರಾಮ್ (ಮುಖ್ಯಸ್ಥ), ಕೆ.ಎಲ್. ಅಶ್ವಥ್, ಸಿ. ರಘು, ಎನ್.ಸಿ. ಅಯ್ಯಪ್ಪ (ಆಯ್ಕೆಗಾರರು). </p>.<p><strong>ಜೂನಿಯರ್ ತಂಡಗಳು:</strong> ಜೆ. ಅಭಿರಾಮ್ (ಮುಖ್ಯಸ್ಥ), ಎಂ.ವಿ. ಪ್ರಶಾಂತ್, ಕೆ.ಎಂ. ಅಯ್ಯಪ್ಪ, ಉದಿತ್ ಪಟೆಲ್, ರಘೋತ್ತಮ ನವಲಿ (ಆಯ್ಕೆಗಾರರು)</p>.<p><strong>ಮಹಿಳೆಯರ ವಿಭಾಗ:</strong> ಸೀನಿಯರ್ ಮತ್ತು 23 ವರ್ಷದೊಳಗಿನವರು: ಕರುಣಾ ಜೈನ್ (ಮುಖ್ಯ ಕೋಚ್).</p>.<p>19 ವರ್ಷದೊಳಗಿವನರು: ರಕ್ಷಿತಾ ಕೃಷ್ಣಪ್ಪ (ಮುಖ್ಯ ಕೋಚ್)</p>.<p>15 ವರ್ಷದೊಳಗಿನವರು: ರಾಖಿ ಗಂಗಲ್ (ಮುಖ್ಯ ಕೋಚ್)</p>.<p><strong>ಆಯ್ಕೆ ಸಮಿತಿ:</strong> ಸೀನಿಯರ್ ಸಮಿತಿ: ಸುನಿತಾ ಅನಂತಕೃಷ್ಣನ್ (ಮುಖ್ಯಸ್ಥರು), ಮುಕ್ತಾ ಆರ್ ಅಳಗೇರಿ, ಅರುಣಾ ರೆಡ್ಡಿ, ಡಾ. ನಿವೇದಿತಾ ರೇಶ್ಮೆ (ಆಯ್ಕೆಗಾರರು.</p>.<p><strong>ಜೂನಿಯರ್ ಸಮಿತಿ:</strong> ಶರ್ಮಿಳಾ ಸಿದ್ಧೋಧನನ್ (ಮುಖ್ಯಸ್ಥರು), ರಂಜಿನಿ ಕುಮಾರ್, ಸಬಾ ಸಿದ್ಧಿಕಿ, ಮೀನಾ ಕುಮಾರಿ (ಆಯ್ಕೆಗಾರರು). </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>