<p>ನವದೆಹಲಿ: ಕರ್ನೈಲ್ ಸಿಂಗ್ ಕ್ರೀಡಾಂಗಣದ ಪಿಚ್ ಅಪಾಯಕಾರಿ ಮತ್ತು ಆಟಕ್ಕೆ ಯೋಗ್ಯವಲ್ಲವೆಂದು ಇಲ್ಲಿ ನಡೆಯುತ್ತಿದ್ದ ರೈಲ್ವೆಸ್ ಹಾಗೂ ಪಂಜಾಬ್ ನಡುವಣ ರಣಜಿ ಪಂದ್ಯವನ್ನು ಬುಧವಾರ ಸ್ಥಗಿತಗೊಳಿಸಲಾಯಿತು.</p>.<p>ಮಂಗಳವಾರ ಪಂದ್ಯ ಆರಂಭವಾಗಿತ್ತು. ಈ ಪಿಚ್ನಲ್ಲಿ ಕೇವಲ 103 ಓವರ್ಗಳಲ್ಲಿ 24 ವಿಕೆಟ್ಗಳು ಪತನವಾಗಿದೆ. ಅದರಲ್ಲಿ 20 ವೇಗದ ಬೌಲರ್ಗಳ ಪಾಲಾಗಿವೆ. ಪಂದ್ಯದ ಮೊದಲ ದಿನ ಪಂಜಾಬ್ 162 ರನ್ ಗಳಿಸಿತು. ಅದಕ್ಕುತ್ತರವಾಗಿ ರೈಲ್ವೆಸ್ ತಂಡವು 150 ರನ್ಗಳಿಸಲಷ್ಟೇ ಶಕ್ತವಾಯಿತು.</p>.<p>12 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಂಜಾಬ್ 18 ರನ್ಗಳಿಗೆ 4 ವಿಕಟ್ ಕಳೆದುಕೊಂಡಿತು.</p>.<p>‘ಇದುವರೆಗೂ ಇಂತಹ ಪಿಚ್ ನೋಡಿಯೇ ಇರಲಿಲ್ಲ. ಇಲ್ಲಿ ಚೆಂಡು ಅಪಾಯಕಾರಿ ಮಟ್ಟದಲ್ಲಿ ಬೌನ್ಸ್ ಆಗುತ್ತಿದೆ. ಚೆಂಡಿನ ಪುಟಿತವನ್ನು ಅಂದಾಜು ಮಾಡುವುದು ಕಷ್ಟವಾಗುತ್ತಿದೆ. ಒಳ್ಳೆಯ ಪಿಚ್ನಲ್ಲಿ ಪಂದ್ಯ ಆಡಲು ನಾವು ಸಿದ್ಧವೆಂದು ತಿಳಿಸಿದ್ದೇವೆ’ ಎಂದು ಪಂಜಾಬ್ ಬ್ಯಾಟರ್ ಅಭಿಷೇಕ್ ಶರ್ಮಾ ಹೇಳಿದ್ದಾರೆ.</p>.<p>ಅಂಪೈರ್ಗಳಾದ ಮದನ ಗೋಪಾಲ್ ಕುಪ್ಪುರಾಜ್, ರಾಜೀವ್ ಗೋದರಾ ಮತ್ತು ಮ್ಯಾಚ್ ರೆಫರಿ ಯುವರಾಜ್ ಸಿಂಗ್ ಅವರು ಆಟ ಸ್ಥಗಿತಗೊಳಿಸುವ ನಿರ್ಧಾರ<br />ಕೈಗೊಂಡರು.</p>.<p>ಈ ಪಿಚ್ನಲ್ಲಿ ಸಮಸ್ಯೆ ಇದೇ ಮೊದಲಲ್ಲ. 2011ರಲ್ಲಿ ಕಳಪೆ ಪಿಚ್ ಎಂದು ಘೋಷಿಸಲಾಗಿತ್ತು. ಅದಾಗಿ ಒಂದು ವರ್ಷದ ನಂತರ ಸ್ಥಳೀಯ ಕ್ಯುರೇಟರ್ಗಳು ಉದ್ದೇಶಪೂರ್ವಕವಾಗಿಯೇ ಕೆಟ್ಟ ಪಿಚ್ಗಳನ್ನು ಮಾಡುತ್ತಿದ್ದದ್ದು ಗಮನಕ್ಕೆ ಬಂದಿತ್ತು. ಅದಕ್ಕಾಗಿ ಎರಡು ವರ್ಷ ಇಲ್ಲಿ ಯಾವುದೇ ಪಂದ್ಯ ಆಯೋಜಿಸದಂತೆ ನಿರ್ಬಂಧ ಹೇರಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ: ಕರ್ನೈಲ್ ಸಿಂಗ್ ಕ್ರೀಡಾಂಗಣದ ಪಿಚ್ ಅಪಾಯಕಾರಿ ಮತ್ತು ಆಟಕ್ಕೆ ಯೋಗ್ಯವಲ್ಲವೆಂದು ಇಲ್ಲಿ ನಡೆಯುತ್ತಿದ್ದ ರೈಲ್ವೆಸ್ ಹಾಗೂ ಪಂಜಾಬ್ ನಡುವಣ ರಣಜಿ ಪಂದ್ಯವನ್ನು ಬುಧವಾರ ಸ್ಥಗಿತಗೊಳಿಸಲಾಯಿತು.</p>.<p>ಮಂಗಳವಾರ ಪಂದ್ಯ ಆರಂಭವಾಗಿತ್ತು. ಈ ಪಿಚ್ನಲ್ಲಿ ಕೇವಲ 103 ಓವರ್ಗಳಲ್ಲಿ 24 ವಿಕೆಟ್ಗಳು ಪತನವಾಗಿದೆ. ಅದರಲ್ಲಿ 20 ವೇಗದ ಬೌಲರ್ಗಳ ಪಾಲಾಗಿವೆ. ಪಂದ್ಯದ ಮೊದಲ ದಿನ ಪಂಜಾಬ್ 162 ರನ್ ಗಳಿಸಿತು. ಅದಕ್ಕುತ್ತರವಾಗಿ ರೈಲ್ವೆಸ್ ತಂಡವು 150 ರನ್ಗಳಿಸಲಷ್ಟೇ ಶಕ್ತವಾಯಿತು.</p>.<p>12 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಂಜಾಬ್ 18 ರನ್ಗಳಿಗೆ 4 ವಿಕಟ್ ಕಳೆದುಕೊಂಡಿತು.</p>.<p>‘ಇದುವರೆಗೂ ಇಂತಹ ಪಿಚ್ ನೋಡಿಯೇ ಇರಲಿಲ್ಲ. ಇಲ್ಲಿ ಚೆಂಡು ಅಪಾಯಕಾರಿ ಮಟ್ಟದಲ್ಲಿ ಬೌನ್ಸ್ ಆಗುತ್ತಿದೆ. ಚೆಂಡಿನ ಪುಟಿತವನ್ನು ಅಂದಾಜು ಮಾಡುವುದು ಕಷ್ಟವಾಗುತ್ತಿದೆ. ಒಳ್ಳೆಯ ಪಿಚ್ನಲ್ಲಿ ಪಂದ್ಯ ಆಡಲು ನಾವು ಸಿದ್ಧವೆಂದು ತಿಳಿಸಿದ್ದೇವೆ’ ಎಂದು ಪಂಜಾಬ್ ಬ್ಯಾಟರ್ ಅಭಿಷೇಕ್ ಶರ್ಮಾ ಹೇಳಿದ್ದಾರೆ.</p>.<p>ಅಂಪೈರ್ಗಳಾದ ಮದನ ಗೋಪಾಲ್ ಕುಪ್ಪುರಾಜ್, ರಾಜೀವ್ ಗೋದರಾ ಮತ್ತು ಮ್ಯಾಚ್ ರೆಫರಿ ಯುವರಾಜ್ ಸಿಂಗ್ ಅವರು ಆಟ ಸ್ಥಗಿತಗೊಳಿಸುವ ನಿರ್ಧಾರ<br />ಕೈಗೊಂಡರು.</p>.<p>ಈ ಪಿಚ್ನಲ್ಲಿ ಸಮಸ್ಯೆ ಇದೇ ಮೊದಲಲ್ಲ. 2011ರಲ್ಲಿ ಕಳಪೆ ಪಿಚ್ ಎಂದು ಘೋಷಿಸಲಾಗಿತ್ತು. ಅದಾಗಿ ಒಂದು ವರ್ಷದ ನಂತರ ಸ್ಥಳೀಯ ಕ್ಯುರೇಟರ್ಗಳು ಉದ್ದೇಶಪೂರ್ವಕವಾಗಿಯೇ ಕೆಟ್ಟ ಪಿಚ್ಗಳನ್ನು ಮಾಡುತ್ತಿದ್ದದ್ದು ಗಮನಕ್ಕೆ ಬಂದಿತ್ತು. ಅದಕ್ಕಾಗಿ ಎರಡು ವರ್ಷ ಇಲ್ಲಿ ಯಾವುದೇ ಪಂದ್ಯ ಆಯೋಜಿಸದಂತೆ ನಿರ್ಬಂಧ ಹೇರಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>