<p><strong>ನವದೆಹಲಿ:</strong> ಆಟಗಾರರು ವಿಶೇಷವಾದದ್ದನ್ನು ಸಾಧಿಸಲು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರೋತ್ಸಾಹ ನೀಡುತ್ತಿದ್ದರು. ಆದರೆ, ವೈಫಲ್ಯಗಳ ಬಗ್ಗೆ ಅವರು ಕಡಿಮೆ ಸಹನೆ ಹೊಂದಿದ್ದರು ಎಂದು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.</p>.<p>ಶಾಸ್ತ್ರಿ ಅವರು ಕೋಚ್ ಆಗಿದ್ದಾಗ, ವಿಶೇಷವಾಗಿ 2019ರ ವಿಶ್ವಕಪ್ ಟೂರ್ನಿಯ ಕೆಲವು ಪಂದ್ಯಗಳಲ್ಲಿ ಕಾರ್ತಿಕ್ ಆಡಿದ್ದರು.</p>.<p><a href="https://www.prajavani.net/sports/cricket/maharaja-trophy-ksca-t20-2022-mysore-warriors-vs-mangalore-united-963880.html" itemprop="url">ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್: ಮಂಗಳೂರು ಯುನೈಟೆಡ್ಗೆ ಮೈಸೂರು ಸವಾಲು </a></p>.<p>ಶಾಸ್ತ್ರಿ ಅವರು ಕೋಚ್ ಆಗಿದ್ದು, ವಿರಾಟ್ ಕೊಹ್ಲಿ ನಾಯಕನಾಗಿದ್ದ ಅವಧಿಯು ಭಾರತ ತಂಡಕ್ಕೆ ಬಹಳ ಉತ್ತಮವಾಗಿತ್ತು. ಆದಾಗ್ಯೂ, ಕೆಲವು ಆಟಗಾರರ ಬಗ್ಗೆ ಕಠಿಣ ನಿಲುವು ತಳೆದ ಬಗ್ಗೆ ಶಾಸ್ತ್ರಿ–ಕೊಹ್ಲಿ ಜೋಡಿ ಟೀಕೆಗೆ ಒಳಗಾಗಿತ್ತು.</p>.<p>‘ನಿರ್ದಿಷ್ಟ ವೇಗದಲ್ಲಿ ಬ್ಯಾಟ್ ಮಾಡದವರನ್ನು, ನೆಟ್ಸ್ನಲ್ಲಿ ಮತ್ತು ಪಂದ್ಯಗಳಲ್ಲಿ ಭಿನ್ನವಾಗಿ ಪ್ರದರ್ಶನ ನೀಡುವವರನ್ನು ಅವರು (ಶಾಸ್ತ್ರಿ) ಇಷ್ಟಪಡುತ್ತಿರಲಿಲ್ಲ’ ಎಂದು ‘ಕ್ರಿಕ್ಬಜ್’ನ ಡಾಕ್ಯೂ ಸೀರೀಸ್ ‘ಸಮ್ಮರ್ ಸ್ಟೇಲ್ಮೇಟ್’ನಲ್ಲಿ ಕಾರ್ತಿಕ್ ಹೇಳಿದ್ದಾರೆ.</p>.<p><a href="https://www.prajavani.net/sports/cricket/shahbaz-ahmed-gets-maiden-india-call-up-replaces-injured-washington-963783.html" itemprop="url">ಭಾರತ ತಂಡದಲ್ಲಿ ಶಹಬಾಜ್ಗೆ ಸ್ಥಾನ </a></p>.<p>‘ತಂಡಕ್ಕೆ ಏನು ಬೇಕು, ತಂಡ ಹೇಗೆ ಆಡಬೇಕು ಎಂಬುದು ಅವರಿಗೆ ನಿಖರವಾಗಿ ತಿಳಿದಿತ್ತು. ಆದರೆ, ವೈಫಲ್ಯಗಳ ಬಗ್ಗೆ ಕಡಿಮೆ ಸಹನೆ ಹೊಂದಿದ್ದರು. ಆಟಗಾರರು ಉತ್ತಮ ಪ್ರದರ್ಶನ ನೀಡುವಂತೆ ಹುರಿದುಂಬಿಸುತ್ತಿದ್ದರು’ ಎಂದು ಕಾರ್ತಿಕ್ ತಿಳಿಸಿದ್ದಾರೆ.</p>.<p>ರೋಹಿತ್ ಶರ್ಮಾ (ಟೀಮ್ ಇಂಡಿಯಾ ನಾಯಕ) – ರಾಹುಲ್ ದ್ರಾವಿಡ್ (ಮುಖ್ಯ ಕೋಚ್) ನೇತೃತ್ವದ ತಂಡದಲ್ಲಿ ಹೆಚ್ಚು ಸುರಕ್ಷಿತ ಹಾಗೂ ನಿರಾಳ ಭಾವದಿಂದ ಇರುವುದಾಗಿಯೂ ಅವರು ಹೇಳಿದ್ದಾರೆ.</p>.<p>ದಿನೇಶ್ ಕಾರ್ತಿಕ್ ಅವರು ಕಳೆದ ಹಲವು ಟಿ20 ಪಂದ್ಯಗಳಲ್ಲಿ ಭಾರತ ತಂಡದ ಅತ್ಯುತ್ತಮ ಫಿನಿಷರ್ ಆಗಿ ಕಾಣಿಸಿಕೊಂಡಿದ್ದಾರೆ.</p>.<p><a href="https://www.prajavani.net/sports/cricket/team-indias-squad-for-asia-cup-rohit-sharma-named-captain-bumrah-ruled-out-961588.html" itemprop="url">Asia Cup – ಏಷ್ಯಾ ಕಪ್ಗೆ ಟೀಂ ಇಂಡಿಯಾ ಪ್ರಕಟ, ರೋಹಿತ್ ನಾಯಕ, ಬೂಮ್ರಾ ಔಟ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಆಟಗಾರರು ವಿಶೇಷವಾದದ್ದನ್ನು ಸಾಧಿಸಲು ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಪ್ರೋತ್ಸಾಹ ನೀಡುತ್ತಿದ್ದರು. ಆದರೆ, ವೈಫಲ್ಯಗಳ ಬಗ್ಗೆ ಅವರು ಕಡಿಮೆ ಸಹನೆ ಹೊಂದಿದ್ದರು ಎಂದು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಹೇಳಿದ್ದಾರೆ.</p>.<p>ಶಾಸ್ತ್ರಿ ಅವರು ಕೋಚ್ ಆಗಿದ್ದಾಗ, ವಿಶೇಷವಾಗಿ 2019ರ ವಿಶ್ವಕಪ್ ಟೂರ್ನಿಯ ಕೆಲವು ಪಂದ್ಯಗಳಲ್ಲಿ ಕಾರ್ತಿಕ್ ಆಡಿದ್ದರು.</p>.<p><a href="https://www.prajavani.net/sports/cricket/maharaja-trophy-ksca-t20-2022-mysore-warriors-vs-mangalore-united-963880.html" itemprop="url">ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್: ಮಂಗಳೂರು ಯುನೈಟೆಡ್ಗೆ ಮೈಸೂರು ಸವಾಲು </a></p>.<p>ಶಾಸ್ತ್ರಿ ಅವರು ಕೋಚ್ ಆಗಿದ್ದು, ವಿರಾಟ್ ಕೊಹ್ಲಿ ನಾಯಕನಾಗಿದ್ದ ಅವಧಿಯು ಭಾರತ ತಂಡಕ್ಕೆ ಬಹಳ ಉತ್ತಮವಾಗಿತ್ತು. ಆದಾಗ್ಯೂ, ಕೆಲವು ಆಟಗಾರರ ಬಗ್ಗೆ ಕಠಿಣ ನಿಲುವು ತಳೆದ ಬಗ್ಗೆ ಶಾಸ್ತ್ರಿ–ಕೊಹ್ಲಿ ಜೋಡಿ ಟೀಕೆಗೆ ಒಳಗಾಗಿತ್ತು.</p>.<p>‘ನಿರ್ದಿಷ್ಟ ವೇಗದಲ್ಲಿ ಬ್ಯಾಟ್ ಮಾಡದವರನ್ನು, ನೆಟ್ಸ್ನಲ್ಲಿ ಮತ್ತು ಪಂದ್ಯಗಳಲ್ಲಿ ಭಿನ್ನವಾಗಿ ಪ್ರದರ್ಶನ ನೀಡುವವರನ್ನು ಅವರು (ಶಾಸ್ತ್ರಿ) ಇಷ್ಟಪಡುತ್ತಿರಲಿಲ್ಲ’ ಎಂದು ‘ಕ್ರಿಕ್ಬಜ್’ನ ಡಾಕ್ಯೂ ಸೀರೀಸ್ ‘ಸಮ್ಮರ್ ಸ್ಟೇಲ್ಮೇಟ್’ನಲ್ಲಿ ಕಾರ್ತಿಕ್ ಹೇಳಿದ್ದಾರೆ.</p>.<p><a href="https://www.prajavani.net/sports/cricket/shahbaz-ahmed-gets-maiden-india-call-up-replaces-injured-washington-963783.html" itemprop="url">ಭಾರತ ತಂಡದಲ್ಲಿ ಶಹಬಾಜ್ಗೆ ಸ್ಥಾನ </a></p>.<p>‘ತಂಡಕ್ಕೆ ಏನು ಬೇಕು, ತಂಡ ಹೇಗೆ ಆಡಬೇಕು ಎಂಬುದು ಅವರಿಗೆ ನಿಖರವಾಗಿ ತಿಳಿದಿತ್ತು. ಆದರೆ, ವೈಫಲ್ಯಗಳ ಬಗ್ಗೆ ಕಡಿಮೆ ಸಹನೆ ಹೊಂದಿದ್ದರು. ಆಟಗಾರರು ಉತ್ತಮ ಪ್ರದರ್ಶನ ನೀಡುವಂತೆ ಹುರಿದುಂಬಿಸುತ್ತಿದ್ದರು’ ಎಂದು ಕಾರ್ತಿಕ್ ತಿಳಿಸಿದ್ದಾರೆ.</p>.<p>ರೋಹಿತ್ ಶರ್ಮಾ (ಟೀಮ್ ಇಂಡಿಯಾ ನಾಯಕ) – ರಾಹುಲ್ ದ್ರಾವಿಡ್ (ಮುಖ್ಯ ಕೋಚ್) ನೇತೃತ್ವದ ತಂಡದಲ್ಲಿ ಹೆಚ್ಚು ಸುರಕ್ಷಿತ ಹಾಗೂ ನಿರಾಳ ಭಾವದಿಂದ ಇರುವುದಾಗಿಯೂ ಅವರು ಹೇಳಿದ್ದಾರೆ.</p>.<p>ದಿನೇಶ್ ಕಾರ್ತಿಕ್ ಅವರು ಕಳೆದ ಹಲವು ಟಿ20 ಪಂದ್ಯಗಳಲ್ಲಿ ಭಾರತ ತಂಡದ ಅತ್ಯುತ್ತಮ ಫಿನಿಷರ್ ಆಗಿ ಕಾಣಿಸಿಕೊಂಡಿದ್ದಾರೆ.</p>.<p><a href="https://www.prajavani.net/sports/cricket/team-indias-squad-for-asia-cup-rohit-sharma-named-captain-bumrah-ruled-out-961588.html" itemprop="url">Asia Cup – ಏಷ್ಯಾ ಕಪ್ಗೆ ಟೀಂ ಇಂಡಿಯಾ ಪ್ರಕಟ, ರೋಹಿತ್ ನಾಯಕ, ಬೂಮ್ರಾ ಔಟ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>