<p><strong>ಮುಂಬೈ:</strong> ಭಾರತದ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರು ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪಶ್ಚಿಮ ವಲಯ ತಂಡವನ್ನು ಮುನ್ನಡೆಸಲಿದ್ದಾರೆ. </p><p>ಶಾರ್ದೂಲ್ ಠಾಕೂರ್ ನಾಯಕತ್ವದ 15 ಆಟಗಾರರ ಪಟ್ಟಿಯನ್ನು ಪಶ್ಚಿಮ ವಲಯ ತಂಡವು ಬಿಡುಗಡೆಗೊಳಿಸಿದೆ. </p><p>ಭಾರತದ ಪ್ರಮುಖ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್, ಶ್ರೇಯಸ್ ಐಯ್ಯರ್, ಸರ್ಫರಾಜ್ ಖಾನ್ ಹಾಗೂ ಋತುರಾಜ್ ಗಾಯಕವಾಡ್ ಅವರು ತಂಡದಲ್ಲಿದ್ದಾರೆ. </p><p>ಬೌಲರ್ಗಳಾದ ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ ಸೇರಿದಂತೆ ಪಶ್ಚಿಮ ವಲಯ ತಂಡದ 15 ಆಟಗಾರರಲ್ಲಿ 7 ಆಟಗಾರರು ಮುಂಬೈ ಮೂಲದವರಾಗಿದ್ದಾರೆ. </p><p>2025–26ನೇ ಸಾಲಿನ ದೇಶಿ ಕ್ರಿಕೆಟ್ ಪಂದ್ಯಗಳು ದುಲೀಪ್ ಟ್ರೋಫಿ ಮೂಲಕ ಆರಂಭವಾಗಲಿವೆ. ಈ ಬಾರಿ ಅಂತರ ವಲಯ ಮಾದರಿಯಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಆರು ತಂಡಗಳು ಕಣಕ್ಕಿಳಿಯಲಿವೆ. ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳು ನೇರ ಸೆಮಿಫೈನಲ್ಗೆ ಪ್ರವೇಶ ಪಡೆದಿವೆ.</p>.<p><strong>ಪಶ್ಚಿಮ ವಲಯ ತಂಡ:</strong> ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ (ಎಲ್ಲರೂ ಮುಂಬೈನವರು), ಆರ್ಯ ದೇಸಾಯಿ, ಜಯಮೀತ್ ಪಟೇಲ್, ಮನನ್ ಹಿಂಗರಜಿಯಾ, ಅರ್ಜನ್ ನಾಗವಾಸ್ವಾಲಾ (ಎಲ್ಲರೂ ಗುಜರಾತ್), ಹಾರ್ವಿಕ್ ದೇಸಾಯಿ , ಧರ್ಮದರ್ಶಿನ್ ಜಡೇಜ (ವಿಕೆಟ್ಕೀಪರ್, ಸೌರಾಷ್ಟ್ರ), ಋತುರಾಜ್ ಗಾಯಕವಾಡ , ಸೌರಭ್ ನವಲೆ, (ಮಹಾರಾಷ್ಟ್ರ). ಮೀಸಲು ಆಟಗಾರರು: ಮಹೇಶ್ ಪಿತೀಯಾ, ಶಿವಾಲಿಕ್ ಶರ್ಮಾ (ಬರೋಡಾ), ಮುಕೇಶ್ ಚೌಧರಿ (ಮಹಾರಾಷ್ಟ್ರ), ಸಿದ್ಧಾರ್ಥ್ ದೇಸಾಯಿ, ಚಿಂತನ್ ಗಜ, ಊರ್ವಿಲ್ ಪಟೇಲ್ (ಗುಜರಾತ್ನವರು), ಮುಷೀರ್ ಖಾನ್ (ಮುಂಬೈ). </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಭಾರತದ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರು ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಪಶ್ಚಿಮ ವಲಯ ತಂಡವನ್ನು ಮುನ್ನಡೆಸಲಿದ್ದಾರೆ. </p><p>ಶಾರ್ದೂಲ್ ಠಾಕೂರ್ ನಾಯಕತ್ವದ 15 ಆಟಗಾರರ ಪಟ್ಟಿಯನ್ನು ಪಶ್ಚಿಮ ವಲಯ ತಂಡವು ಬಿಡುಗಡೆಗೊಳಿಸಿದೆ. </p><p>ಭಾರತದ ಪ್ರಮುಖ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್, ಶ್ರೇಯಸ್ ಐಯ್ಯರ್, ಸರ್ಫರಾಜ್ ಖಾನ್ ಹಾಗೂ ಋತುರಾಜ್ ಗಾಯಕವಾಡ್ ಅವರು ತಂಡದಲ್ಲಿದ್ದಾರೆ. </p><p>ಬೌಲರ್ಗಳಾದ ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ ಸೇರಿದಂತೆ ಪಶ್ಚಿಮ ವಲಯ ತಂಡದ 15 ಆಟಗಾರರಲ್ಲಿ 7 ಆಟಗಾರರು ಮುಂಬೈ ಮೂಲದವರಾಗಿದ್ದಾರೆ. </p><p>2025–26ನೇ ಸಾಲಿನ ದೇಶಿ ಕ್ರಿಕೆಟ್ ಪಂದ್ಯಗಳು ದುಲೀಪ್ ಟ್ರೋಫಿ ಮೂಲಕ ಆರಂಭವಾಗಲಿವೆ. ಈ ಬಾರಿ ಅಂತರ ವಲಯ ಮಾದರಿಯಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯಲ್ಲಿ ಆರು ತಂಡಗಳು ಕಣಕ್ಕಿಳಿಯಲಿವೆ. ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳು ನೇರ ಸೆಮಿಫೈನಲ್ಗೆ ಪ್ರವೇಶ ಪಡೆದಿವೆ.</p>.<p><strong>ಪಶ್ಚಿಮ ವಲಯ ತಂಡ:</strong> ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ತುಷಾರ್ ದೇಶಪಾಂಡೆ (ಎಲ್ಲರೂ ಮುಂಬೈನವರು), ಆರ್ಯ ದೇಸಾಯಿ, ಜಯಮೀತ್ ಪಟೇಲ್, ಮನನ್ ಹಿಂಗರಜಿಯಾ, ಅರ್ಜನ್ ನಾಗವಾಸ್ವಾಲಾ (ಎಲ್ಲರೂ ಗುಜರಾತ್), ಹಾರ್ವಿಕ್ ದೇಸಾಯಿ , ಧರ್ಮದರ್ಶಿನ್ ಜಡೇಜ (ವಿಕೆಟ್ಕೀಪರ್, ಸೌರಾಷ್ಟ್ರ), ಋತುರಾಜ್ ಗಾಯಕವಾಡ , ಸೌರಭ್ ನವಲೆ, (ಮಹಾರಾಷ್ಟ್ರ). ಮೀಸಲು ಆಟಗಾರರು: ಮಹೇಶ್ ಪಿತೀಯಾ, ಶಿವಾಲಿಕ್ ಶರ್ಮಾ (ಬರೋಡಾ), ಮುಕೇಶ್ ಚೌಧರಿ (ಮಹಾರಾಷ್ಟ್ರ), ಸಿದ್ಧಾರ್ಥ್ ದೇಸಾಯಿ, ಚಿಂತನ್ ಗಜ, ಊರ್ವಿಲ್ ಪಟೇಲ್ (ಗುಜರಾತ್ನವರು), ಮುಷೀರ್ ಖಾನ್ (ಮುಂಬೈ). </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>