<p><strong>ಮುಂಬೈ</strong>: ಗಾಯಕ ಪಲಾಶ್ ಮುಚ್ಚಲ್ ಜೊತೆ ಮದುವೆ ಮುರಿದು ಬಿದ್ದ ನಂತರ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಕ್ರಿಕೆಟ್ ಅಭ್ಯಾಸಕ್ಕೆ ಮರಳಿದ್ದಾರೆ. ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಗೆ ಅವರು ತಯಾರಿ ನಡೆಸುತ್ತಿದ್ದಾರೆ.</p><p>ಇದೇ ವೇಳೆ ಅವರ ಹಳೆಯ ಸಂದರ್ಶನವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಮನಸ್ಸಿಗೆ ತುಂಬಾ ಬೇಸರವಾದಾಗ, ನಿರುತ್ಸಾಹಗೊಂಡಾಗ ಅದರಿಂದ ಹೊರಬರುವುದು ಹೇಗೆ ಎಂಬ ಬಗ್ಗೆ ಅವರು ಅದರಲ್ಲಿ ಮಾತನಾಡಿದ್ದಾರೆ. ಈ ಸಂದರ್ಶನವನ್ನು ‘<a href="https://www.youtube.com/watch?v=0ZOo26602l8">ಹ್ಯೂಮನ್ಸ್ ಆಫ್ ಬಾಂಬೆ</a>’ ಯೂಟ್ಯೂಬ್ ಚಾನೆಲ್ ನಡೆಸಿತ್ತು.</p><p>ಜೀವನದಲ್ಲಿ ಎದುರಾಗುವ ಕಠಿಣ ಸಂದರ್ಭಗಳ ಬಗ್ಗೆ ಮಾತನಾಡಿದ್ದ ಸ್ಮೃತಿ, ‘ಅಂತಹ ಸಂದರ್ಭಗಳಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಮಾತ್ರ ನಾನು ಯೋಚಿಸುತ್ತೇನೆ’ ಎಂದು ಹೇಳಿದ್ದಾರೆ.</p><p>‘ಇದೆಲ್ಲಾ ನನಗೆ ತುಂಬಾ ಸುಲಭ. ನಾನು ಯಾವಾಗಲೂ ಅಲ್ಪಾವಧಿಯ ಗುರಿಗಳನ್ನು ಇಟ್ಟುಕೊಳ್ಳುತ್ತೇನೆ. ಇಂದು ನಾನು ನಿರುತ್ಸಾಹಗೊಂಡರೆ, ಮುಂದಿನ ಆರೇಳು ದಿನಗಳವರೆಗೆ ನನ್ನ ಬ್ಯಾಟಿಂಗ್ನಲ್ಲಿ ಅಥವಾ ಫಿಟ್ನೆಸ್ನಲ್ಲಿ ಏನು ಬದಲಾವಣೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಬರೆದಿಟ್ಟುಕೊಳ್ಳುತ್ತೇನೆ’ ಎಂದು ಹೇಳಿದದ್ದಾರೆ.</p><p>‘ಯಾವಾಗ ಅದರ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇನೋ ಆಗ ಉಳಿದೆಲ್ಲವನ್ನು ಮರೆಯುತ್ತೇನೆ. ನಾನು ಏನು ಮಾಡಬೇಕೋ ಅದರ ಬಗ್ಗೆ ಮಾತ್ರ ನನ್ನ ಗಮನವಿರುತ್ತದೆ. ಆ ಸಂದರ್ಭದಲ್ಲಿಯೇ ನಾನು ಸಾಧಿಸಬೇಕಾಗಿರುವುದು ಎಷ್ಟೆಲ್ಲಾ ಇದೆ ಎಂಬುದು ನನ್ನ ಅರಿವಿಗೆ ಬರುತ್ತದೆ’ ಎಂದು ಹೇಳಿದ್ದಾರೆ.</p><p>‘ಪ್ರತಿ ದಿನವನ್ನು ನಾವು ಹೊಸದಾಗಿ ಪ್ರಾರಂಭಿಸಬೇಕು. ಕಳೆದ ಪಂದ್ಯದಲ್ಲಿ ನಾನು ಶತಕ ಗಳಿಸಿದರೂ ಹೊಸ ಪಂದ್ಯದಲ್ಲಿ ಇನಿಂಗ್ಸ್ ಅನ್ನು ಶೂನ್ಯದಿಂದಲೇ ಪ್ರಾರಂಭಿಸಬೇಕು’ ಎಂದು ಅವರು ಹೇಳಿದ್ದಾರೆ.</p><p>‘ನನ್ನ ಜೀವನಾನುಭವದಿಂದ ನಾನು ಕಲಿತ ದೊಡ್ಡ ಪಾಠವೆನೆಂದರೆ, ಜೀವನದಲ್ಲಿ ಏನೇ ನಡೆದರೂ, ಮರುದಿನ ನಮಗೆ ಹೊಸ ದಿನವಾಗಿರುತ್ತದೆ’ ಎಂದಿದ್ದಾರೆ.</p><p>ನವೆಂಬರ್ 23ರಂದು ಪಲಾಶ್ ಮುಚ್ಚಲ್ ಅವರೊಂದಿಗೆ ನಿಶ್ಚಯವಾಗಿದ್ದ ಮದುವೆಯು ಕಾರಣಾಂತರಗಳಿಂದ ರದ್ದಾಗಿತ್ತು. ಮದುವೆ ರದ್ದಾಗಿರುವ ಬಗ್ಗೆ ಸ್ವತಃ ಸ್ಮೃತಿ ಅವರೇ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಭವಿಷ್ಯದ ಸಾಧನೆಗಳ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದಾರೆ.</p><p>ಅದಾಗ್ಯೂ, ಮದುವೆ ರದ್ಧತಿಗೆ ನಿಖರ ಕಾರಣವನ್ನು ಎರಡು ಕುಟುಂಬಗಳು ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಗಾಯಕ ಪಲಾಶ್ ಮುಚ್ಚಲ್ ಜೊತೆ ಮದುವೆ ಮುರಿದು ಬಿದ್ದ ನಂತರ ಭಾರತ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ಕ್ರಿಕೆಟ್ ಅಭ್ಯಾಸಕ್ಕೆ ಮರಳಿದ್ದಾರೆ. ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧದ ಟಿ20ಐ ಸರಣಿಗೆ ಅವರು ತಯಾರಿ ನಡೆಸುತ್ತಿದ್ದಾರೆ.</p><p>ಇದೇ ವೇಳೆ ಅವರ ಹಳೆಯ ಸಂದರ್ಶನವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಮನಸ್ಸಿಗೆ ತುಂಬಾ ಬೇಸರವಾದಾಗ, ನಿರುತ್ಸಾಹಗೊಂಡಾಗ ಅದರಿಂದ ಹೊರಬರುವುದು ಹೇಗೆ ಎಂಬ ಬಗ್ಗೆ ಅವರು ಅದರಲ್ಲಿ ಮಾತನಾಡಿದ್ದಾರೆ. ಈ ಸಂದರ್ಶನವನ್ನು ‘<a href="https://www.youtube.com/watch?v=0ZOo26602l8">ಹ್ಯೂಮನ್ಸ್ ಆಫ್ ಬಾಂಬೆ</a>’ ಯೂಟ್ಯೂಬ್ ಚಾನೆಲ್ ನಡೆಸಿತ್ತು.</p><p>ಜೀವನದಲ್ಲಿ ಎದುರಾಗುವ ಕಠಿಣ ಸಂದರ್ಭಗಳ ಬಗ್ಗೆ ಮಾತನಾಡಿದ್ದ ಸ್ಮೃತಿ, ‘ಅಂತಹ ಸಂದರ್ಭಗಳಲ್ಲಿ ಮುಂದೇನು ಮಾಡಬೇಕು ಎಂಬ ಬಗ್ಗೆ ಮಾತ್ರ ನಾನು ಯೋಚಿಸುತ್ತೇನೆ’ ಎಂದು ಹೇಳಿದ್ದಾರೆ.</p><p>‘ಇದೆಲ್ಲಾ ನನಗೆ ತುಂಬಾ ಸುಲಭ. ನಾನು ಯಾವಾಗಲೂ ಅಲ್ಪಾವಧಿಯ ಗುರಿಗಳನ್ನು ಇಟ್ಟುಕೊಳ್ಳುತ್ತೇನೆ. ಇಂದು ನಾನು ನಿರುತ್ಸಾಹಗೊಂಡರೆ, ಮುಂದಿನ ಆರೇಳು ದಿನಗಳವರೆಗೆ ನನ್ನ ಬ್ಯಾಟಿಂಗ್ನಲ್ಲಿ ಅಥವಾ ಫಿಟ್ನೆಸ್ನಲ್ಲಿ ಏನು ಬದಲಾವಣೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಬರೆದಿಟ್ಟುಕೊಳ್ಳುತ್ತೇನೆ’ ಎಂದು ಹೇಳಿದದ್ದಾರೆ.</p><p>‘ಯಾವಾಗ ಅದರ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇನೋ ಆಗ ಉಳಿದೆಲ್ಲವನ್ನು ಮರೆಯುತ್ತೇನೆ. ನಾನು ಏನು ಮಾಡಬೇಕೋ ಅದರ ಬಗ್ಗೆ ಮಾತ್ರ ನನ್ನ ಗಮನವಿರುತ್ತದೆ. ಆ ಸಂದರ್ಭದಲ್ಲಿಯೇ ನಾನು ಸಾಧಿಸಬೇಕಾಗಿರುವುದು ಎಷ್ಟೆಲ್ಲಾ ಇದೆ ಎಂಬುದು ನನ್ನ ಅರಿವಿಗೆ ಬರುತ್ತದೆ’ ಎಂದು ಹೇಳಿದ್ದಾರೆ.</p><p>‘ಪ್ರತಿ ದಿನವನ್ನು ನಾವು ಹೊಸದಾಗಿ ಪ್ರಾರಂಭಿಸಬೇಕು. ಕಳೆದ ಪಂದ್ಯದಲ್ಲಿ ನಾನು ಶತಕ ಗಳಿಸಿದರೂ ಹೊಸ ಪಂದ್ಯದಲ್ಲಿ ಇನಿಂಗ್ಸ್ ಅನ್ನು ಶೂನ್ಯದಿಂದಲೇ ಪ್ರಾರಂಭಿಸಬೇಕು’ ಎಂದು ಅವರು ಹೇಳಿದ್ದಾರೆ.</p><p>‘ನನ್ನ ಜೀವನಾನುಭವದಿಂದ ನಾನು ಕಲಿತ ದೊಡ್ಡ ಪಾಠವೆನೆಂದರೆ, ಜೀವನದಲ್ಲಿ ಏನೇ ನಡೆದರೂ, ಮರುದಿನ ನಮಗೆ ಹೊಸ ದಿನವಾಗಿರುತ್ತದೆ’ ಎಂದಿದ್ದಾರೆ.</p><p>ನವೆಂಬರ್ 23ರಂದು ಪಲಾಶ್ ಮುಚ್ಚಲ್ ಅವರೊಂದಿಗೆ ನಿಶ್ಚಯವಾಗಿದ್ದ ಮದುವೆಯು ಕಾರಣಾಂತರಗಳಿಂದ ರದ್ದಾಗಿತ್ತು. ಮದುವೆ ರದ್ದಾಗಿರುವ ಬಗ್ಗೆ ಸ್ವತಃ ಸ್ಮೃತಿ ಅವರೇ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಭವಿಷ್ಯದ ಸಾಧನೆಗಳ ಬಗ್ಗೆ ಗಮನ ಹರಿಸುವುದಾಗಿ ಹೇಳಿದ್ದಾರೆ.</p><p>ಅದಾಗ್ಯೂ, ಮದುವೆ ರದ್ಧತಿಗೆ ನಿಖರ ಕಾರಣವನ್ನು ಎರಡು ಕುಟುಂಬಗಳು ನೀಡಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>