ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಬಿಸಿಸಿಐ, ಬುಧವಾರ ಪ್ರಕಟಿಸಿದ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿತ್ತು. ರಣಜಿ ತಂಡಕ್ಕೆ ಲಭ್ಯರಿದ್ದರೂ ಆಡದೇ ಇದ್ದುದು ಈ ಕ್ರಮಕ್ಕೆ ಕಾರಣವಾಗಿತ್ತು. ಮಂಡಳಿಯ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೀರ್ತಿ ಆಜಾದ್ ಮತ್ತು ಇರ್ಫಾನ್ ಪಠಾನ್ ಅವರು ಇಬ್ಬರು ಆಟಗಾರರ ಪರ ನಿಂತಿದ್ದರು.