<p><strong>ನವದೆಹಲಿ: </strong>‘ನಾವು ಮೊದಲು ನಮ್ಮ ದೇಶ ಮತ್ತು ಜಗತ್ತನ್ನು ಕೊರೊನಾವೈರಸ್ನಿಂದ ರಕ್ಷಿಸಿಕೊಳ್ಳಬೇಕಿದೆ.ಜಗತ್ತು ಕೋವಿಡ್–19 ಸೋಂಕು ಮುಕ್ತವಾದ ನಂತರವೇ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಲಿ’ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.</p>.<p>ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಇದನ್ನು (ಕೋವಿಡ್–19)ಸಂಪೂರ್ಣ ನಿರ್ಮೂಲನೆ ಮಾಡಬೇಕಿದೆ ಅಥವಾ ಸೋಂಕಿನ ಪ್ರಮಾಣ ಶೇ. 90–95 ರಷ್ಷು ಇಳಿಯಬೇಕಿದೆ. ಏಕೆಂದರೆ ಸೋಂಕು ಹೆಚ್ಚಾದರೆ, ಆಟಗಾರರು ಮೈದಾನಕ್ಕಿಳಿಯಲು, ಡ್ರೆಸ್ಸಿಂಗ್ ಕೊಠಡಿಗೆ ತೆರಳಲು ಹೆದರುತ್ತಾರೆ’</p>.<p>‘ಆಟಗಾರರು ದೇಶಕ್ಕಾಗಿ, ಕ್ಲಬ್ಗಾಗಿ ಆಡುವಾಗ ಸಾಕಷ್ಟು ಒತ್ತಡದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ಕೊರೊನಾವೈರಸ್ ಬಗೆಗಿನ ಆತಂಕವನ್ನು ಯಾವ ಆಟಗಾರನೂ ಬಯಸುವುದಿಲ್ಲ’ ಎಂದು 2011ರ ಏಕದಿನ ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಯುವಿ ಹೇಳಿದ್ದಾರೆ.</p>.<p>‘ನೀವು ಕೈಗವಸು ಹಾಕಿದ್ದಾಗ ಸಾಕಷ್ಟು ಬೆವರುತ್ತೀರಿ. ಬ್ಯಾಟಿಂಗ್ ಮಾಡುತ್ತಿದ್ದಾಗ ಬಾಳೆಹಣ್ಣು ತಿನ್ನಲು ಬಯಸುವಿರಿ ಎಂದಿಟ್ಟುಕೊಳ್ಳಿ. ಆದರೆ, ಬೇರೆ ಇನ್ಯಾರೋ ಬಾಳೆ ಹಣ್ಣು ಹಿಡಿದಿರುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ಬಾಳೆ ಹಣ್ಣು ತಿನ್ನುವ ನಿರ್ಧಾರದಿಂದಲೇ ಹಿಂದೆ ಸರಿಯಬೇಕಾಗುತ್ತದೆ’ ಎಂದು ಉದಾಹರಿಸಿದ್ದಾರೆ.</p>.<p>‘ಆಡುವಾಗತಲೆಯಲ್ಲಿ ಇಂತಹ ಗೊಂದಲಗಳು ಮೂಡುವುದನ್ನು ನೀವು ಬಯಸಲಾರಿರಿ. ನೀವು ಚೆಂಡಿನ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಇದು ನನ್ನ ಅಭಿಪ್ರಾಯ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಜಗತ್ತು ಮುಕ್ತವಾಗಿದೆ’ ಎಂದು ಹೇಳಿದ್ದಾರೆ.</p>.<p>ಜಗತ್ತಿನಾಂದ್ಯಂತ ಸೋಂಕು ಪ್ರಕರಣಗಳ ಪ್ರಮಾಣ ಹೆಚ್ಚಳವಾದ ಕಾರಣ ಇತರ ಕ್ರೀಡೆಗಳಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಸದ್ಯಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆಪ್ರವೇಶ ನಿರ್ಬಂಧಿಸಿ ಆಟ ಆರಂಭಿಸಲು ರಾಷ್ಟ್ರೀಯ ಮಂಡಳಿಗಳು ಆಲೋಚಿಸುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>‘ನಾವು ಮೊದಲು ನಮ್ಮ ದೇಶ ಮತ್ತು ಜಗತ್ತನ್ನು ಕೊರೊನಾವೈರಸ್ನಿಂದ ರಕ್ಷಿಸಿಕೊಳ್ಳಬೇಕಿದೆ.ಜಗತ್ತು ಕೋವಿಡ್–19 ಸೋಂಕು ಮುಕ್ತವಾದ ನಂತರವೇ ಕ್ರಿಕೆಟ್ ಚಟುವಟಿಕೆಗಳು ಆರಂಭವಾಗಲಿ’ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.</p>.<p>ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಇದನ್ನು (ಕೋವಿಡ್–19)ಸಂಪೂರ್ಣ ನಿರ್ಮೂಲನೆ ಮಾಡಬೇಕಿದೆ ಅಥವಾ ಸೋಂಕಿನ ಪ್ರಮಾಣ ಶೇ. 90–95 ರಷ್ಷು ಇಳಿಯಬೇಕಿದೆ. ಏಕೆಂದರೆ ಸೋಂಕು ಹೆಚ್ಚಾದರೆ, ಆಟಗಾರರು ಮೈದಾನಕ್ಕಿಳಿಯಲು, ಡ್ರೆಸ್ಸಿಂಗ್ ಕೊಠಡಿಗೆ ತೆರಳಲು ಹೆದರುತ್ತಾರೆ’</p>.<p>‘ಆಟಗಾರರು ದೇಶಕ್ಕಾಗಿ, ಕ್ಲಬ್ಗಾಗಿ ಆಡುವಾಗ ಸಾಕಷ್ಟು ಒತ್ತಡದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ಕೊರೊನಾವೈರಸ್ ಬಗೆಗಿನ ಆತಂಕವನ್ನು ಯಾವ ಆಟಗಾರನೂ ಬಯಸುವುದಿಲ್ಲ’ ಎಂದು 2011ರ ಏಕದಿನ ವಿಶ್ವಕಪ್ ಟೂರ್ನಿಯ ಸರಣಿ ಶ್ರೇಷ್ಠ ಯುವಿ ಹೇಳಿದ್ದಾರೆ.</p>.<p>‘ನೀವು ಕೈಗವಸು ಹಾಕಿದ್ದಾಗ ಸಾಕಷ್ಟು ಬೆವರುತ್ತೀರಿ. ಬ್ಯಾಟಿಂಗ್ ಮಾಡುತ್ತಿದ್ದಾಗ ಬಾಳೆಹಣ್ಣು ತಿನ್ನಲು ಬಯಸುವಿರಿ ಎಂದಿಟ್ಟುಕೊಳ್ಳಿ. ಆದರೆ, ಬೇರೆ ಇನ್ಯಾರೋ ಬಾಳೆ ಹಣ್ಣು ಹಿಡಿದಿರುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ಬಾಳೆ ಹಣ್ಣು ತಿನ್ನುವ ನಿರ್ಧಾರದಿಂದಲೇ ಹಿಂದೆ ಸರಿಯಬೇಕಾಗುತ್ತದೆ’ ಎಂದು ಉದಾಹರಿಸಿದ್ದಾರೆ.</p>.<p>‘ಆಡುವಾಗತಲೆಯಲ್ಲಿ ಇಂತಹ ಗೊಂದಲಗಳು ಮೂಡುವುದನ್ನು ನೀವು ಬಯಸಲಾರಿರಿ. ನೀವು ಚೆಂಡಿನ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಇದು ನನ್ನ ಅಭಿಪ್ರಾಯ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಜಗತ್ತು ಮುಕ್ತವಾಗಿದೆ’ ಎಂದು ಹೇಳಿದ್ದಾರೆ.</p>.<p>ಜಗತ್ತಿನಾಂದ್ಯಂತ ಸೋಂಕು ಪ್ರಕರಣಗಳ ಪ್ರಮಾಣ ಹೆಚ್ಚಳವಾದ ಕಾರಣ ಇತರ ಕ್ರೀಡೆಗಳಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಸದ್ಯಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆಪ್ರವೇಶ ನಿರ್ಬಂಧಿಸಿ ಆಟ ಆರಂಭಿಸಲು ರಾಷ್ಟ್ರೀಯ ಮಂಡಳಿಗಳು ಆಲೋಚಿಸುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>