<p><strong>ಮುಂಬೈ (ಪಿಟಿಐ):</strong> ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯು ಅಗ್ನಿಪರೀಕ್ಷೆಯ ಕಣವಾಗಲಿದೆ. </p>.<p>ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಅವರು ಹೋದ ಬಾರಿಯ ಐಪಿಎಲ್ನಲ್ಲಿ ಬ್ಯಾಟರ್ ಆಗಿ ಯಶಸ್ವಿಯಾಗಿದ್ದರು. ಆದರೆ ನಾಯಕ ತ್ವದ ಕೌಶಲದಲ್ಲಿ ಹಿಂದು ಳಿದಿದ್ದರು.</p>.<p>ಹೋದ ವರ್ಷ ಲಖನೌ ತಂಡಕ್ಕೆ ಬರುವ ಮುನ್ನ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ನಾಯಕರಾಗಿದ್ದರು. ಆ ತಂಡವೂ ಪ್ರಶಸ್ತಿ ಗೆದ್ದಿರಲಿಲ್ಲ. ಲಖನೌ ತಂಡವು ಹೋದಬಾರಿ ಲೀಗ್ ಹಂತದಲ್ಲಿ ಮೂರನೇ ಸ್ಥಾನ ಪಡೆದಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಸೋತಿತ್ತು. ಆ ಆವೃತ್ತಿಯಲ್ಲಿ ಅವರು 15 ಪಂದ್ಯಗಳಿಂದ 616 ರನ್ ಗಳಿಸಿ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. </p>.<p>ಅವರ ಬಳಗದಲ್ಲಿ ವೇಗಿ ಆವೇಶ್ ಖಾನ್ 13 ಪಂದ್ಯಗಳಲ್ಲಿ ಆಡಿ 18 ವಿಕೆಟ್ ಗಳಿಸಿದರು. ಮೊಹಸೀನ್ ಖಾನ್ 14 ವಿಕೆಟ್ ಪಡೆದಿದ್ದರು. ಆದರೆ ಭುಜದ ಗಾಯದಿಂದಾಗಿ ಮೊಹಸೀನ್ ಈ ಬಾರಿ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ವಿಕೆಟ್ಕೀಪರ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಕೂಡ ಮೊದಲ ಎರಡು ಪಂದ್ಯಗಳಲ್ಲಿ ಆಡುವುದಿಲ್ಲ. ಅವರು ಏಕದಿನ ವಿಶ್ವಕಪ್ ಕ್ವಾಲಿಫೈಯರ್ ನಲ್ಲಿ ತಮ್ಮ ದೇಶದ ತಂಡವನ್ನು<br />ಪ್ರತಿನಿಧಿಸಲಿದ್ದಾರೆ. </p>.<p>ನಿಕೋಲಸ್ ಪೂರನ್, ಆಲ್ರೌಂಡರ್ಗಳಾದ ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಕೆ.ಗೌತಮ್, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯಿನಿಸ್, ಕೈಲ್ ಮೇಯರ್ಸ್ ಮತ್ತು ರೊಮೆರಿಯೊ ಶೇಫರ್ಡ್, ಸ್ಪಿನ್ನರ್ ರವಿ ಬಿಷ್ಣೋಯಿ ಅವರೊಂದಿಗೆ ರಾಹುಲ್ ಟೂರ್ನಿಯಲ್ಲಿ ಜಯದ ಆರಂಭ ಮಾಡುವ ಭರವಸೆಯಲ್ಲಿದ್ದಾರೆ.</p>.<p class="Subhead">ಜನರ ನಿರೀಕ್ಷೆ ಸಹಜ: ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ನಾಯಕನೆಂಬ ಹೆಗ್ಗಳಿಕೆ ರೋಹಿತ್ ಶರ್ಮಾ ಅವರದ್ದು. ಅವರ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಐದು ಸಲ ಚಾಂಪಿಯನ್ ಆಗಿದೆ. ಆದರೂ ಪ್ರತಿವರ್ಷವೂ ಪ್ರಶಸ್ತಿ ಗೆಲ್ಲಬೇಕೆಂಬ ಅಭಿಮಾನಿಗಳ ಅಪಾರವಾದ ನಿರೀಕ್ಷೆಯು ಸಹಜ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.</p>.<p>‘ನಮ್ಮ ತಂಡವು ಕಣಕ್ಕಿಳಿಯುವಾಗ ಜನರಿಂದ ಅಪಾರವಾದ ನಿರೀಕ್ಷೆಯುವ ಸಹಜವಾಗಿಯೇ ಇರುತ್ತದೆ. ಹಲವು ವರ್ಷಗಳಿಂದ ಆಡುತ್ತಿರುವುದರಿಂದ ಫಲಿತಾಂಶದ ಕುರಿತು ಒತ್ತಡ ಹೆಚ್ಚಾಗಿ ಇಲ್ಲ. ಆದರೆ ಅಭಿಮಾನಿಗಳ ನಿರೀಕ್ಷೆ ಅರಿವು ಇದೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಹೇಳಿದರು. </p>.<p>‘ನಮ್ಮ ಉದ್ದೇಶವೂ ಚೆನ್ನಾಗಿ ಆಡಬೇಕು ಹಾಗೂ ಟ್ರೋಫಿ ಗೆಲ್ಲಬೇಕು ಎಂಬುದೇ ಇರುತ್ತದೆ. ಆದರೆ ಆ ಯೋಚನೆಯಿಂದಲೇ ಒತ್ತಡ ಹೆಚ್ಚು ವುದನ್ನು ತಪ್ಪಿಸಿಕೊಳ್ಳಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> ಕನ್ನಡಿಗ ಕೆ.ಎಲ್. ರಾಹುಲ್ ಅವರಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯು ಅಗ್ನಿಪರೀಕ್ಷೆಯ ಕಣವಾಗಲಿದೆ. </p>.<p>ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಅವರು ಹೋದ ಬಾರಿಯ ಐಪಿಎಲ್ನಲ್ಲಿ ಬ್ಯಾಟರ್ ಆಗಿ ಯಶಸ್ವಿಯಾಗಿದ್ದರು. ಆದರೆ ನಾಯಕ ತ್ವದ ಕೌಶಲದಲ್ಲಿ ಹಿಂದು ಳಿದಿದ್ದರು.</p>.<p>ಹೋದ ವರ್ಷ ಲಖನೌ ತಂಡಕ್ಕೆ ಬರುವ ಮುನ್ನ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ನಾಯಕರಾಗಿದ್ದರು. ಆ ತಂಡವೂ ಪ್ರಶಸ್ತಿ ಗೆದ್ದಿರಲಿಲ್ಲ. ಲಖನೌ ತಂಡವು ಹೋದಬಾರಿ ಲೀಗ್ ಹಂತದಲ್ಲಿ ಮೂರನೇ ಸ್ಥಾನ ಪಡೆದಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಸೋತಿತ್ತು. ಆ ಆವೃತ್ತಿಯಲ್ಲಿ ಅವರು 15 ಪಂದ್ಯಗಳಿಂದ 616 ರನ್ ಗಳಿಸಿ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. </p>.<p>ಅವರ ಬಳಗದಲ್ಲಿ ವೇಗಿ ಆವೇಶ್ ಖಾನ್ 13 ಪಂದ್ಯಗಳಲ್ಲಿ ಆಡಿ 18 ವಿಕೆಟ್ ಗಳಿಸಿದರು. ಮೊಹಸೀನ್ ಖಾನ್ 14 ವಿಕೆಟ್ ಪಡೆದಿದ್ದರು. ಆದರೆ ಭುಜದ ಗಾಯದಿಂದಾಗಿ ಮೊಹಸೀನ್ ಈ ಬಾರಿ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ವಿಕೆಟ್ಕೀಪರ್, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಕೂಡ ಮೊದಲ ಎರಡು ಪಂದ್ಯಗಳಲ್ಲಿ ಆಡುವುದಿಲ್ಲ. ಅವರು ಏಕದಿನ ವಿಶ್ವಕಪ್ ಕ್ವಾಲಿಫೈಯರ್ ನಲ್ಲಿ ತಮ್ಮ ದೇಶದ ತಂಡವನ್ನು<br />ಪ್ರತಿನಿಧಿಸಲಿದ್ದಾರೆ. </p>.<p>ನಿಕೋಲಸ್ ಪೂರನ್, ಆಲ್ರೌಂಡರ್ಗಳಾದ ದೀಪಕ್ ಹೂಡಾ, ಕೃಣಾಲ್ ಪಾಂಡ್ಯ, ಕೆ.ಗೌತಮ್, ಪ್ರೇರಕ್ ಮಂಕಡ್, ಮಾರ್ಕಸ್ ಸ್ಟೊಯಿನಿಸ್, ಕೈಲ್ ಮೇಯರ್ಸ್ ಮತ್ತು ರೊಮೆರಿಯೊ ಶೇಫರ್ಡ್, ಸ್ಪಿನ್ನರ್ ರವಿ ಬಿಷ್ಣೋಯಿ ಅವರೊಂದಿಗೆ ರಾಹುಲ್ ಟೂರ್ನಿಯಲ್ಲಿ ಜಯದ ಆರಂಭ ಮಾಡುವ ಭರವಸೆಯಲ್ಲಿದ್ದಾರೆ.</p>.<p class="Subhead">ಜನರ ನಿರೀಕ್ಷೆ ಸಹಜ: ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ನಾಯಕನೆಂಬ ಹೆಗ್ಗಳಿಕೆ ರೋಹಿತ್ ಶರ್ಮಾ ಅವರದ್ದು. ಅವರ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಐದು ಸಲ ಚಾಂಪಿಯನ್ ಆಗಿದೆ. ಆದರೂ ಪ್ರತಿವರ್ಷವೂ ಪ್ರಶಸ್ತಿ ಗೆಲ್ಲಬೇಕೆಂಬ ಅಭಿಮಾನಿಗಳ ಅಪಾರವಾದ ನಿರೀಕ್ಷೆಯು ಸಹಜ ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.</p>.<p>‘ನಮ್ಮ ತಂಡವು ಕಣಕ್ಕಿಳಿಯುವಾಗ ಜನರಿಂದ ಅಪಾರವಾದ ನಿರೀಕ್ಷೆಯುವ ಸಹಜವಾಗಿಯೇ ಇರುತ್ತದೆ. ಹಲವು ವರ್ಷಗಳಿಂದ ಆಡುತ್ತಿರುವುದರಿಂದ ಫಲಿತಾಂಶದ ಕುರಿತು ಒತ್ತಡ ಹೆಚ್ಚಾಗಿ ಇಲ್ಲ. ಆದರೆ ಅಭಿಮಾನಿಗಳ ನಿರೀಕ್ಷೆ ಅರಿವು ಇದೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಹೇಳಿದರು. </p>.<p>‘ನಮ್ಮ ಉದ್ದೇಶವೂ ಚೆನ್ನಾಗಿ ಆಡಬೇಕು ಹಾಗೂ ಟ್ರೋಫಿ ಗೆಲ್ಲಬೇಕು ಎಂಬುದೇ ಇರುತ್ತದೆ. ಆದರೆ ಆ ಯೋಚನೆಯಿಂದಲೇ ಒತ್ತಡ ಹೆಚ್ಚು ವುದನ್ನು ತಪ್ಪಿಸಿಕೊಳ್ಳಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>