<p><strong>ಬ್ರಿಸ್ಪೇನ್:</strong> ಭಾರತ ತಂಡವನ್ನು ಯಾವತ್ತೂ ಹಗುರವಾಗಿ ಪರಿಗಣಿಸಬಾರದುಎಂಬ ಪಾಠವನ್ನು ಈ ಸರಣಿಯು ಕಲಿಸಿದೆ ಎಂದು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಎದುರಾದ ಸೋಲಿನ ಬಳಿಕ ಆಸ್ಟ್ರೇಲಿಯಾ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಗಾಬಾದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೂರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನೆಲದಲ್ಲಿ ಮಗದೊಂದು ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸಿದೆ.</p>.<p>ಭಾರತದ ಯುವ ಪಡೆಯ ಗೆಲುವನ್ನು ಕೊಂಡಾಡಿರುವ ಕ್ರಿಕೆಟ್ ಪಂಡಿತರು, 'ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಸರಣಿ ಗೆಲುವು' ಎಂದು ಉಲ್ಲೇಖ ಮಾಡಿದ್ದಾರೆ. ಇದುವೇ ಭಾರತೀಯ ತಂಡದ ಸಾಧನೆಗೆ ಕೈಗನ್ನಡಿಯಾಗಿದೆ.</p>.<p>ತವರಿನಲ್ಲಿ ಎದುರಾದ ಸೋಲಿನಿಂದ ಮರ್ಮಾಘಾತ ಎದುರಿಸಿರುವ ಆಸ್ಟ್ರೇಲಿಯಾ ತಂಡದ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್, ಭಾರತ ತಂಡವನ್ನು ಯಾವತ್ತೂ ಹಗರುವಾಗಿ ಪರಿಗಣಿಸಬಾರದು ಎಂಬ ಪಾಠವನ್ನು ಈ ಸರಣಿಯು ಕಲಿಸಿದೆ ಎಂದು ಹೇಳಿದರು.</p>.<p>ಇದನ್ನೂ ಓದಿ:<a href="https://www.prajavani.net/sports/cricket/extra-players-won-the-test-series-for-india-against-australia-797892.html" itemprop="url">ಬೆಂಚ್ ಹುಡುಗರ ಗಾಂಧಿಗಿರಿಯ ಜಯಭೇರಿ </a></p>.<p>'ಇದು ನಂಬಲಾಗದ ಟೆಸ್ಟ್ ಸರಣಿ. ಕ್ರಿಕೆಟ್ ಅಂತ್ಯದಲ್ಲಿ ಒಬ್ಬರು ಗೆಲ್ಲುವುದು, ಸೋಲುವುದು ಸಹಜ. ಇಂದು ಟೆಸ್ಟ್ ಕ್ರಿಕೆಟ್ ಜಯಿಸಿದೆ. ಈ ನೋವು ದೀರ್ಘ ಕಾಲದ ವರೆಗೆ ನಮ್ಮಲ್ಲಿ ಉಳಿಯಲಿದೆ. ಸಂಪೂರ್ಣ ಶ್ರೇಯಕ್ಕೆ ಭಾರತ ಅರ್ಹವಾಗಿದೆ. ಈ ಸರಣಿಯಲ್ಲಿ ಭಾರತ ತಂಡ ಅದ್ಭುತವಾಗಿದ್ದು, ನಾವು ಅವರಿಂದ ಪಾಠವನ್ನು ಕಲಿತ್ತಿದ್ದೇವೆ' ಎಂದು ಹೇಳಿದರು.</p>.<p>ಮೊದಲನೆಯದಾಗಿ ನೀವು ಯಾವತ್ತೂ ಯಾವುದನ್ನು ಹಗುರವಾಗಿ ಪರಿಗಣಿಸಬಾರದು. ಎರಡನೇಯದಾಗಿ ಭಾರತವನ್ನು ಎಂದಿಗೂ ಕಡೆಗಣಿಸಬಾರದು. ಅಲ್ಲಿ 130 ಕೋಟಿ ಭಾರತೀಯರಿದ್ದಾರೆ. ಅವರಲ್ಲಿ ನೀವು ಆ ಮೊದಲ ಹನ್ನೊಂದರಲ್ಲಿ ಆಡಿದರೆ ನಿಜಕ್ಕೂ ನೀವು ಕಠಿಣವಲ್ಲವೇ ? ಎಂದು ಸೋಲಿನ ನಡುವೆಯೂ ಟೀಮ್ ಇಂಡಿಯಾ ಸಾಧನೆಯನ್ನು ಮೆಚ್ಚಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ರಿಸ್ಪೇನ್:</strong> ಭಾರತ ತಂಡವನ್ನು ಯಾವತ್ತೂ ಹಗುರವಾಗಿ ಪರಿಗಣಿಸಬಾರದುಎಂಬ ಪಾಠವನ್ನು ಈ ಸರಣಿಯು ಕಲಿಸಿದೆ ಎಂದು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಎದುರಾದ ಸೋಲಿನ ಬಳಿಕ ಆಸ್ಟ್ರೇಲಿಯಾ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ.</p>.<p>ಗಾಬಾದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೂರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನೆಲದಲ್ಲಿ ಮಗದೊಂದು ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸಿದೆ.</p>.<p>ಭಾರತದ ಯುವ ಪಡೆಯ ಗೆಲುವನ್ನು ಕೊಂಡಾಡಿರುವ ಕ್ರಿಕೆಟ್ ಪಂಡಿತರು, 'ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಸರಣಿ ಗೆಲುವು' ಎಂದು ಉಲ್ಲೇಖ ಮಾಡಿದ್ದಾರೆ. ಇದುವೇ ಭಾರತೀಯ ತಂಡದ ಸಾಧನೆಗೆ ಕೈಗನ್ನಡಿಯಾಗಿದೆ.</p>.<p>ತವರಿನಲ್ಲಿ ಎದುರಾದ ಸೋಲಿನಿಂದ ಮರ್ಮಾಘಾತ ಎದುರಿಸಿರುವ ಆಸ್ಟ್ರೇಲಿಯಾ ತಂಡದ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್, ಭಾರತ ತಂಡವನ್ನು ಯಾವತ್ತೂ ಹಗರುವಾಗಿ ಪರಿಗಣಿಸಬಾರದು ಎಂಬ ಪಾಠವನ್ನು ಈ ಸರಣಿಯು ಕಲಿಸಿದೆ ಎಂದು ಹೇಳಿದರು.</p>.<p>ಇದನ್ನೂ ಓದಿ:<a href="https://www.prajavani.net/sports/cricket/extra-players-won-the-test-series-for-india-against-australia-797892.html" itemprop="url">ಬೆಂಚ್ ಹುಡುಗರ ಗಾಂಧಿಗಿರಿಯ ಜಯಭೇರಿ </a></p>.<p>'ಇದು ನಂಬಲಾಗದ ಟೆಸ್ಟ್ ಸರಣಿ. ಕ್ರಿಕೆಟ್ ಅಂತ್ಯದಲ್ಲಿ ಒಬ್ಬರು ಗೆಲ್ಲುವುದು, ಸೋಲುವುದು ಸಹಜ. ಇಂದು ಟೆಸ್ಟ್ ಕ್ರಿಕೆಟ್ ಜಯಿಸಿದೆ. ಈ ನೋವು ದೀರ್ಘ ಕಾಲದ ವರೆಗೆ ನಮ್ಮಲ್ಲಿ ಉಳಿಯಲಿದೆ. ಸಂಪೂರ್ಣ ಶ್ರೇಯಕ್ಕೆ ಭಾರತ ಅರ್ಹವಾಗಿದೆ. ಈ ಸರಣಿಯಲ್ಲಿ ಭಾರತ ತಂಡ ಅದ್ಭುತವಾಗಿದ್ದು, ನಾವು ಅವರಿಂದ ಪಾಠವನ್ನು ಕಲಿತ್ತಿದ್ದೇವೆ' ಎಂದು ಹೇಳಿದರು.</p>.<p>ಮೊದಲನೆಯದಾಗಿ ನೀವು ಯಾವತ್ತೂ ಯಾವುದನ್ನು ಹಗುರವಾಗಿ ಪರಿಗಣಿಸಬಾರದು. ಎರಡನೇಯದಾಗಿ ಭಾರತವನ್ನು ಎಂದಿಗೂ ಕಡೆಗಣಿಸಬಾರದು. ಅಲ್ಲಿ 130 ಕೋಟಿ ಭಾರತೀಯರಿದ್ದಾರೆ. ಅವರಲ್ಲಿ ನೀವು ಆ ಮೊದಲ ಹನ್ನೊಂದರಲ್ಲಿ ಆಡಿದರೆ ನಿಜಕ್ಕೂ ನೀವು ಕಠಿಣವಲ್ಲವೇ ? ಎಂದು ಸೋಲಿನ ನಡುವೆಯೂ ಟೀಮ್ ಇಂಡಿಯಾ ಸಾಧನೆಯನ್ನು ಮೆಚ್ಚಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>