ಮುಂಬೈ: ವಿರಾಟ್ ಕೊಹ್ಲಿ ಪಡೆಗೆ ಈ ಬಾರಿಯ ವಿಶ್ವಕಪ್ ಎತ್ತಿಹಿಡಿಯುವ ಅದ್ಭುತ ಅವಕಾಶವಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದಿಲೀಪ್ ವೆಂಗ್ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಕ್ರಿಕೆಟ್ ಸಂಸ್ಥೆಯ ಸಂಘಟಕರುಮುಂಬೈ ಟ್ವೆಂಟಿ–20 ಲೀಗ್ನ ಎರಡನೇ ಆವೃತ್ತಿಯ ಆರಂಭವನ್ನು ಘೋಷಿಸಿದರು. ಲೀಗ್ನ ಮಾರ್ಗದರ್ಶಿ ಆಗಿರುವ ವೆಂಗ್ಸರ್ಕಾರ್ ಈ ಸಂದರ್ಭದಲ್ಲಿ ಮಾತನಾಡಿದರು.
ಭಾರತ ಕನಿಷ್ಠ ಸೆಮಿಫೈನಲ್ಗಾದರೂ ಖಂಡಿತ ತಲುಪಲಿದೆ. ತಂಡ ಫೈನಲ್ವರೆಗೆ ಸಾಗಲಿದೆ ಎಂಬುದನ್ನು ನಿಖರವಾಗಿ ಹೇಳಲಾಗದು. ಕೊಹ್ಲಿ ಪಡೆ ಭಾರೀ ಸಾಮರ್ಥ್ಯವನ್ನು ಹೊಂದಿದ್ದು, ಎಲ್ಲ ಆಟಗಾರರು ಉತ್ತಮ ಲಯದಲ್ಲಿದ್ದಾರೆ ಎಂದು ವೆಂಗ್ಸರ್ಕಾರ್ ವಿಶ್ವಾಸ ವ್ಯಕ್ತಪಡಿಸಿದರು.
ಇಂಗ್ಲೆಂಡ್ನಲ್ಲಿ ಮೇ 30ರಿಂದ ವಿಶ್ವಕಪ್ ಟೂರ್ನಿ ಆರಂಭವಾಗಲಿದೆ. ಭಾರತ ಜೂ.5ರಂದು ದ.ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ.