ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ಕ್ವಿಂಟನ್ ಡಿ ಕಾಕ್ ಬಳಗವು ಹೋದ ತಿಂಗಳು ಭಾರತಕ್ಕೆ ಬಂದಿತ್ತು. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಿಗದಿಯಾಗಿದ್ದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ತಂಡವು ಎರಡನೇ ಪಂದ್ಯ ನಿಗದಿಯಾಗಿದ್ದ ಲಖನೌಗೆ ಪ್ರಯಾಣ ಬೆಳೆಸಿತ್ತು. ಕೊರೊನಾ ಭೀತಿಯಿಂದಾಗಿ ಸರಣಿ ರದ್ದಾದ ಕಾರಣ ಹರಿಣಗಳ ತಂಡದ ಆಟಗಾರರು ಕೋಲ್ಕತ್ತಕ್ಕೆ ಬಂದು ಅಲ್ಲಿಂದ ದುಬೈ ಮಾರ್ಗವಾಗಿ ತವರಿಗೆ ಹಿಂದಿರುಗಿದ್ದರು.