<p><strong>ದುಬೈ :</strong> ಹಿಂದೆ ಅನುಭವಿಸಿದ ನಿರಾಸೆಗಳನ್ನು ಮರೆತು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ‘ಶಾಂತ ಮನಸ್ಥಿತಿ‘ಯೊಂದಿಗೆ ತಂಡವನ್ನು ಮುನ್ನಡೆಸುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.</p>.<p>ಕೊಹ್ಲಿ, ಎಬಿ ಡಿವಿಲಿಯರ್ಸ್ರಂತಹ ಚಾಂಪಿಯನ್ ಆಟಗಾರರಿದ್ದರೂ ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಿಲ್ಲ. ಆರ್ಸಿಬಿ ಕೊನೆಯ ಬಾರಿ ಫೈನಲ್ ತಲುಪಿದ್ದು2016ರಲ್ಲಿ. ಆ ಋತುವಿನಲ್ಲಿ ಕೊಹ್ಲಿ ಅವರ ಬ್ಯಾಟ್ನಿಂದ ನಾಲ್ಕು ಅಮೋಘ ಶತಕಗಳು ಮೂಡಿಬಂದಿದ್ದವು.</p>.<p>‘2016ರ ಐಪಿಎಲ್ನಲ್ಲಿ ಆಡಿದ್ದ ರೀತಿಯ ನಮಗೆ ಹೆಮ್ಮೆಯಿದೆ. ಆಗಿದ್ದ ತಂಡ ಹೊರತುಪಡಿಸಿದರೆ ಈಗ ಇರುವ ತಂಡ ಅತ್ಯಂತ ಸಮತೋಲಿತವಾಗಿದೆ‘ ಎಂದು ಆರ್ಸಿಬಿಯ ಯೂಟ್ಯೂಬ್ ಕಾರ್ಯಕ್ರಮ ಬೋಲ್ಡ್ ಡೈರೀಸ್ನಲ್ಲಿ ವಿರಾಟ್ ಹೇಳಿದ್ದಾರೆ.</p>.<p>ಈ ಬಾರಿಯ ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಸೆಪ್ಟೆಂಬರ್ 19ರಿಂದ ನಿಗದಿಯಾಗಿದೆ.</p>.<p>‘ಈ ಹಿಂದಿನ ಯಾವ ಆವೃತ್ತಿಯಲ್ಲೂ ನನಗೆ ಇಷ್ಟು ನಿರಾಳ ಭಾವದ ಅನುಭವವಾಗಿರಲಿಲ್ಲ. ಎಬಿಡಿ ಬೇರೊಂದು ತಾಣದಿಂದ ಬರುತ್ತಿದ್ದಾರೆ. ಈಗಅವರು ಹೆಚ್ಚು ಫಿಟ್ ಆಗಿದ್ದಾರೆ. ಈ ಬಾರಿಯ ಐಪಿಎಲ್ಗೂ ಮುನ್ನ ನನ್ನ ಮನಸ್ಥಿತಿ ಸಮತೋಲನದಲ್ಲಿದೆ‘ ಎಂದು ವಿರಾಟ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುಬೈ :</strong> ಹಿಂದೆ ಅನುಭವಿಸಿದ ನಿರಾಸೆಗಳನ್ನು ಮರೆತು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ‘ಶಾಂತ ಮನಸ್ಥಿತಿ‘ಯೊಂದಿಗೆ ತಂಡವನ್ನು ಮುನ್ನಡೆಸುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.</p>.<p>ಕೊಹ್ಲಿ, ಎಬಿ ಡಿವಿಲಿಯರ್ಸ್ರಂತಹ ಚಾಂಪಿಯನ್ ಆಟಗಾರರಿದ್ದರೂ ಕಳೆದ ಮೂರು ಐಪಿಎಲ್ ಆವೃತ್ತಿಗಳಲ್ಲಿ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಿಲ್ಲ. ಆರ್ಸಿಬಿ ಕೊನೆಯ ಬಾರಿ ಫೈನಲ್ ತಲುಪಿದ್ದು2016ರಲ್ಲಿ. ಆ ಋತುವಿನಲ್ಲಿ ಕೊಹ್ಲಿ ಅವರ ಬ್ಯಾಟ್ನಿಂದ ನಾಲ್ಕು ಅಮೋಘ ಶತಕಗಳು ಮೂಡಿಬಂದಿದ್ದವು.</p>.<p>‘2016ರ ಐಪಿಎಲ್ನಲ್ಲಿ ಆಡಿದ್ದ ರೀತಿಯ ನಮಗೆ ಹೆಮ್ಮೆಯಿದೆ. ಆಗಿದ್ದ ತಂಡ ಹೊರತುಪಡಿಸಿದರೆ ಈಗ ಇರುವ ತಂಡ ಅತ್ಯಂತ ಸಮತೋಲಿತವಾಗಿದೆ‘ ಎಂದು ಆರ್ಸಿಬಿಯ ಯೂಟ್ಯೂಬ್ ಕಾರ್ಯಕ್ರಮ ಬೋಲ್ಡ್ ಡೈರೀಸ್ನಲ್ಲಿ ವಿರಾಟ್ ಹೇಳಿದ್ದಾರೆ.</p>.<p>ಈ ಬಾರಿಯ ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಸೆಪ್ಟೆಂಬರ್ 19ರಿಂದ ನಿಗದಿಯಾಗಿದೆ.</p>.<p>‘ಈ ಹಿಂದಿನ ಯಾವ ಆವೃತ್ತಿಯಲ್ಲೂ ನನಗೆ ಇಷ್ಟು ನಿರಾಳ ಭಾವದ ಅನುಭವವಾಗಿರಲಿಲ್ಲ. ಎಬಿಡಿ ಬೇರೊಂದು ತಾಣದಿಂದ ಬರುತ್ತಿದ್ದಾರೆ. ಈಗಅವರು ಹೆಚ್ಚು ಫಿಟ್ ಆಗಿದ್ದಾರೆ. ಈ ಬಾರಿಯ ಐಪಿಎಲ್ಗೂ ಮುನ್ನ ನನ್ನ ಮನಸ್ಥಿತಿ ಸಮತೋಲನದಲ್ಲಿದೆ‘ ಎಂದು ವಿರಾಟ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>