ದೀಪಕ್ ಚಾಹರ್ ದಾಳಿಯಲ್ಲಿ ಕ್ವಿಂಟನ್ ಡಿ ಕಾಕ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು.ಆದರೆಬಲವಾದ ಮನವಿಯನ್ನು ಅಂಪೈರ್ ಪುರಸ್ಕರಿಸಲಿಲ್ಲ. ತಕ್ಷಣ ಧೋನಿ ಡಿಆರ್ಎಸ್ ಮೇಲ್ಮನವಿ ಮೋರೆ ಹೋಗಲು ನಿರ್ಧರಿಸಿದರು. ಬಳಿಕ ಮೂರನೇ ಅಂಪೈರ್ ರಿಪ್ಲೇ ಪರಿಶೀಲಿಸಿದಾಗ ಎಲ್ಬಿಡಬ್ಲ್ಯು ಎಂಬುದು ಸ್ಪಷ್ಟಗೊಂಡಿತ್ತು. ಪರಿಣಾಮ ಡಿ ಕಾಕ್ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.