<p><strong>ಮುಂಬೈ:</strong> ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನವನ್ನು ಮಹೇಂದ್ರ ಸಿಂಗ್ ಧೋನಿ ತೊರೆದಿರಬಹುದು. ಆದರೆನಾಯಕತ್ವದ ಸಹಜ ಗುಣ ಈಗಲೂ ಅಚ್ಚಳಿಯದೇ ಉಳಿದಿದೆ.</p>.<p>ಅದರಲ್ಲೂ ಯುವ ಆಟಗಾರರನ್ನು ಹುರಿದುಂಬಿಸುವಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/sports/cricket/ipl-2022-rayudus-one-handed-catch-to-dismiss-akash-deep-sets-social-media-on-fire-928114.html" itemprop="url">ನಮಗಿನ್ನೂ ವಯಸ್ಸಾಗಿಲ್ಲ; ಸಿಎಸ್ಕೆ ಆಟಗಾರರ ಮಿಂಚಿನ ಆಟ, ಒಂದು ಕೈಯಲ್ಲಿ ಕ್ಯಾಚ್! </a></p>.<p>ಮಂಗಳವಾರರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಎರಡು ಕ್ಯಾಚ್ ಕೈಚೆಲ್ಲಿದ ಯುವ ಆಟಗಾರನ ಬೆನ್ನಿಗೆ ನಿಲ್ಲುವ ಮೂಲಕ ಮಹಿ ಮಗದೊಮ್ಮೆ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಸಿಎಸ್ಕೆಯ ಮುಕೇಶ್ ಚೌಧರಿ, ಆರ್ಸಿಬಿ ಬ್ಯಾಟರ್ಗಳಾದ ಸುಯಶ್ ಪ್ರಭುದೇವ ಹಾಗೂ ದಿನೇಶ್ ಕಾರ್ತಿಕ್ ಕ್ಯಾಚ್ಗಳನ್ನು ಕೈಚೆಲ್ಲಿದ್ದರು. ಆದರೆ ಪಂದ್ಯದ 15ನೇ ಓವರ್ನಲ್ಲಿ ಮಹೀಶ್ ತೀಕ್ಷಣ ದಾಳಿಯಲ್ಲಿ ಶಹಬಾಜ್ ಅಹ್ಮದ್ ವಿಕೆಟ್ ಪಡೆದ ತಕ್ಷಣ ಚೌಧರಿ ಬಳಿ ತೆರಳಿದ ಧೋನಿ ಧೈರ್ಯ ತುಂಬಿದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>ಏತನ್ಮಧ್ಯೆ ಆರ್ಸಿಬಿ ವಿರುದ್ಧ 23 ರನ್ ಅಂತರದ ಗೆಲುವು ದಾಖಲಿಸಿರುವ ಸಿಎಸ್ಕೆ, ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಸ್ಥಾನವನ್ನು ಮಹೇಂದ್ರ ಸಿಂಗ್ ಧೋನಿ ತೊರೆದಿರಬಹುದು. ಆದರೆನಾಯಕತ್ವದ ಸಹಜ ಗುಣ ಈಗಲೂ ಅಚ್ಚಳಿಯದೇ ಉಳಿದಿದೆ.</p>.<p>ಅದರಲ್ಲೂ ಯುವ ಆಟಗಾರರನ್ನು ಹುರಿದುಂಬಿಸುವಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/sports/cricket/ipl-2022-rayudus-one-handed-catch-to-dismiss-akash-deep-sets-social-media-on-fire-928114.html" itemprop="url">ನಮಗಿನ್ನೂ ವಯಸ್ಸಾಗಿಲ್ಲ; ಸಿಎಸ್ಕೆ ಆಟಗಾರರ ಮಿಂಚಿನ ಆಟ, ಒಂದು ಕೈಯಲ್ಲಿ ಕ್ಯಾಚ್! </a></p>.<p>ಮಂಗಳವಾರರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಎರಡು ಕ್ಯಾಚ್ ಕೈಚೆಲ್ಲಿದ ಯುವ ಆಟಗಾರನ ಬೆನ್ನಿಗೆ ನಿಲ್ಲುವ ಮೂಲಕ ಮಹಿ ಮಗದೊಮ್ಮೆ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.</p>.<p>ಸಿಎಸ್ಕೆಯ ಮುಕೇಶ್ ಚೌಧರಿ, ಆರ್ಸಿಬಿ ಬ್ಯಾಟರ್ಗಳಾದ ಸುಯಶ್ ಪ್ರಭುದೇವ ಹಾಗೂ ದಿನೇಶ್ ಕಾರ್ತಿಕ್ ಕ್ಯಾಚ್ಗಳನ್ನು ಕೈಚೆಲ್ಲಿದ್ದರು. ಆದರೆ ಪಂದ್ಯದ 15ನೇ ಓವರ್ನಲ್ಲಿ ಮಹೀಶ್ ತೀಕ್ಷಣ ದಾಳಿಯಲ್ಲಿ ಶಹಬಾಜ್ ಅಹ್ಮದ್ ವಿಕೆಟ್ ಪಡೆದ ತಕ್ಷಣ ಚೌಧರಿ ಬಳಿ ತೆರಳಿದ ಧೋನಿ ಧೈರ್ಯ ತುಂಬಿದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.</p>.<p>ಏತನ್ಮಧ್ಯೆ ಆರ್ಸಿಬಿ ವಿರುದ್ಧ 23 ರನ್ ಅಂತರದ ಗೆಲುವು ದಾಖಲಿಸಿರುವ ಸಿಎಸ್ಕೆ, ಅಂಕಪಟ್ಟಿಯಲ್ಲಿ ಖಾತೆ ತೆರೆದುಕೊಂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>