ಸಿಎಸ್ಕೆಯ ಮುಕೇಶ್ ಚೌಧರಿ, ಆರ್ಸಿಬಿ ಬ್ಯಾಟರ್ಗಳಾದ ಸುಯಶ್ ಪ್ರಭುದೇವ ಹಾಗೂ ದಿನೇಶ್ ಕಾರ್ತಿಕ್ ಕ್ಯಾಚ್ಗಳನ್ನು ಕೈಚೆಲ್ಲಿದ್ದರು. ಆದರೆ ಪಂದ್ಯದ 15ನೇ ಓವರ್ನಲ್ಲಿ ಮಹೀಶ್ ತೀಕ್ಷಣ ದಾಳಿಯಲ್ಲಿ ಶಹಬಾಜ್ ಅಹ್ಮದ್ ವಿಕೆಟ್ ಪಡೆದ ತಕ್ಷಣ ಚೌಧರಿ ಬಳಿ ತೆರಳಿದ ಧೋನಿ ಧೈರ್ಯ ತುಂಬಿದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.