ಕರ್ನಾಟಕದ ಹುಡುಗ ದೇವದತ್ತ ಪಡಿಕ್ಕಲ್ ಅರ್ಧಶತಕದ ಬಲದಿಂದ ಮುಂಬೈ ಎದುರಿನ ಪಂದ್ಯದಲ್ಲಿ ಬೆಂಗಳೂರು ತಂಡವು 164 ರನ್ಗಳ ಮೊತ್ತ ಗಳಿಸಿತ್ತು. ಆದರೆ, ಮುಂಬೈನ ಸೂರ್ಯಕುಮಾರ್ ಯಾದವ್ ಅವರ ಪ್ರತಾಪಕ್ಕೆ ಕಡಿವಾಣ ಹಾಕುವಲ್ಲಿ ಕ್ರಿಸ್ ಮೊರಿಸ್, ಡೇಲ್ ಸ್ಟೇಯ್ನ್, ಮೊಹಮ್ಮದ್ ಸಿರಾಜ್ ಮತ್ತು ಯಜುವೇಂದ್ರ ಚಾಹಲ್ ಬೌಲಿಂಗ್ ಪಡೆಯು ವಿಫಲವಾಗಿತ್ತು. ಅದರಿಂದಾಗಿ ತಂಡವು ಸೋತಿತ್ತು. ಬ್ಯಾಟಿಂಗ್ನಲ್ಲಿ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಮತ್ತು ಶಿವಂದುಬೆ ಲಯಕ್ಕೆ ಮರಳಿದರೆ ದೊಡ್ಡ ಮೊತ್ತದ ಗಳಿಕೆ ಸಾಧ್ಯವಾಗಲಿದೆ.