<p><strong>ನವದೆಹಲಿ</strong>: ಜಾಗತಿಕ ಪಿಡುಗು ಕೋವಿಡ್–19 ಪರಿಹಾರಕ್ಕಾಗಿಹಣ ಸಂಗ್ರಹಿಸಲು ಕ್ರಿಕೆಟ್ ಸರಣಿ ಆಯೋಜಿಸುವಂತೆಸಲಹೆ ನೀಡಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಅವರಿಗೆ ಕಪಿಲ್ ದೇವ್ ತಿರುಗೇಟು ನೀಡಿದ್ದಾರೆ. ಕ್ರಿಕೆಟ್ ಸಲುವಾಗಿ ಹಲವು ಜೀವಗಳನ್ನು ಸಂಕಷ್ಟಕ್ಕೆ ದೂಡುವುದು ಸರಿಯಲ್ಲ ಎಂದು ಕಪಿಲ್ಕಿಡಿಕಾರಿದ್ದಾರೆ.</p>.<p>ಕ್ರೀಡಾಂಗಣದಲ್ಲಿ ಕುಳಿತುಪಂದ್ಯ ವೀಕ್ಷಿಸಲುಜನರಿಗೆ ಅವಕಾಶ ನೀಡದೆ (ಮುಚ್ಚಿದ ಕ್ರೀಡಾಂಗಣದಲ್ಲಿ) ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಮೂರು ಪಂದ್ಯಗಳ ಸರಣಿಆಯೋಜಿಸುವ ವಿಚಾರವನ್ನು ಅಖ್ತರ್ ಪ್ರಸ್ತಾಪಿಸಿದ್ದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕಪಿಲ್, ಇದು ಸಾಧ್ಯವಿಲ್ಲ ಎಂದಿದ್ದಾರೆ.</p>.<p>‘ಅಭಿಪ್ರಾಯ ವ್ಯಕ್ತಪಡಿಸುವ ಅರ್ಹತೆ ಅಖ್ತರ್ಗೆಇದೆ. ಆದರೆ, ಹಣ ಸಂಗ್ರಹಿಸಬೇಕಾದಅಗತ್ಯ ನಮಗಿಲ್ಲ. ನಮ್ಮಲ್ಲಿ ಸಾಕಷ್ಟು ಹಣವಿದೆ. ಈ ಬಿಕ್ಕಟ್ಟನ್ನು ಎದುರಿಸಲು ನಮ್ಮ ಅಧಿಕಾರಿಗಳು ಹೇಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬುದು ನಮಗೆ ಮುಖ್ಯ’ಎಂದು ಹೇಳಿದ್ದಾರೆ.</p>.<p>‘ಆದಾಗ್ಯೂ, ಕೋವಿಡ್–19 ಪರಿಹಾರ ನಿಧಿಗೆ ಬಿಸಿಸಿಐ ಭಾರಿ ಮೊತ್ತವನ್ನು (51 ಕೋಟಿ ರೂ.) ದೇಣಿಗೆಯಾಗಿ ನೀಡಿದೆ. ಅಗತ್ಯವಿದ್ದರೆ ಮತ್ತಷ್ಟು ಹಣ ನೀಡುವ ಸಾಮರ್ಥ್ಯವನ್ನು ಬಿಸಿಸಿಐ ಹೊಂದಿದೆ. ಈ ರೀತಿಯಲ್ಲಿ ಹಣ ಸಂಗ್ರಹಿಸುವ ಅಗತ್ಯವಿಲ್ಲ. ಈಗಲೂ ಸಾಕಷ್ಟು ರಾಜಕಾರಣಿಗಳು ಸೋಂಕಿನ ವಿಚಾರವಾಗಿಕೆಸರೆರಚಾಟ ನಡೆಸುತ್ತಿದ್ದಾರೆ. ಅದು ನಿಲ್ಲಬೇಕಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<p>‘ಕೋವಿಡ್–19 ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಅಷ್ಟು ಬೇಗನೆ ಸುಧಾರಿಸುವುದು ಅಸಾಧ್ಯವಾಗಿದೆ. ಪಂದ್ಯ ಆಯೋಜಿಸುವುದು ಎಂದರೆ ನಮ್ಮ ಕ್ರಿಕೆಟಿಗರನ್ನು ಅಪಾಯಕ್ಕೆ ತಳ್ಳುವುದಾಗಿದೆ. ಅದರ ಅಗತ್ಯ ಇಲ್ಲ’ ಎಂದು 1983 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಜಾಗತಿಕ ಪಿಡುಗು ಕೋವಿಡ್–19 ಪರಿಹಾರಕ್ಕಾಗಿಹಣ ಸಂಗ್ರಹಿಸಲು ಕ್ರಿಕೆಟ್ ಸರಣಿ ಆಯೋಜಿಸುವಂತೆಸಲಹೆ ನೀಡಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯಬ್ ಅಖ್ತರ್ ಅವರಿಗೆ ಕಪಿಲ್ ದೇವ್ ತಿರುಗೇಟು ನೀಡಿದ್ದಾರೆ. ಕ್ರಿಕೆಟ್ ಸಲುವಾಗಿ ಹಲವು ಜೀವಗಳನ್ನು ಸಂಕಷ್ಟಕ್ಕೆ ದೂಡುವುದು ಸರಿಯಲ್ಲ ಎಂದು ಕಪಿಲ್ಕಿಡಿಕಾರಿದ್ದಾರೆ.</p>.<p>ಕ್ರೀಡಾಂಗಣದಲ್ಲಿ ಕುಳಿತುಪಂದ್ಯ ವೀಕ್ಷಿಸಲುಜನರಿಗೆ ಅವಕಾಶ ನೀಡದೆ (ಮುಚ್ಚಿದ ಕ್ರೀಡಾಂಗಣದಲ್ಲಿ) ಭಾರತ ಮತ್ತು ಪಾಕಿಸ್ತಾನ ಜಂಟಿಯಾಗಿ ಮೂರು ಪಂದ್ಯಗಳ ಸರಣಿಆಯೋಜಿಸುವ ವಿಚಾರವನ್ನು ಅಖ್ತರ್ ಪ್ರಸ್ತಾಪಿಸಿದ್ದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಕಪಿಲ್, ಇದು ಸಾಧ್ಯವಿಲ್ಲ ಎಂದಿದ್ದಾರೆ.</p>.<p>‘ಅಭಿಪ್ರಾಯ ವ್ಯಕ್ತಪಡಿಸುವ ಅರ್ಹತೆ ಅಖ್ತರ್ಗೆಇದೆ. ಆದರೆ, ಹಣ ಸಂಗ್ರಹಿಸಬೇಕಾದಅಗತ್ಯ ನಮಗಿಲ್ಲ. ನಮ್ಮಲ್ಲಿ ಸಾಕಷ್ಟು ಹಣವಿದೆ. ಈ ಬಿಕ್ಕಟ್ಟನ್ನು ಎದುರಿಸಲು ನಮ್ಮ ಅಧಿಕಾರಿಗಳು ಹೇಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬುದು ನಮಗೆ ಮುಖ್ಯ’ಎಂದು ಹೇಳಿದ್ದಾರೆ.</p>.<p>‘ಆದಾಗ್ಯೂ, ಕೋವಿಡ್–19 ಪರಿಹಾರ ನಿಧಿಗೆ ಬಿಸಿಸಿಐ ಭಾರಿ ಮೊತ್ತವನ್ನು (51 ಕೋಟಿ ರೂ.) ದೇಣಿಗೆಯಾಗಿ ನೀಡಿದೆ. ಅಗತ್ಯವಿದ್ದರೆ ಮತ್ತಷ್ಟು ಹಣ ನೀಡುವ ಸಾಮರ್ಥ್ಯವನ್ನು ಬಿಸಿಸಿಐ ಹೊಂದಿದೆ. ಈ ರೀತಿಯಲ್ಲಿ ಹಣ ಸಂಗ್ರಹಿಸುವ ಅಗತ್ಯವಿಲ್ಲ. ಈಗಲೂ ಸಾಕಷ್ಟು ರಾಜಕಾರಣಿಗಳು ಸೋಂಕಿನ ವಿಚಾರವಾಗಿಕೆಸರೆರಚಾಟ ನಡೆಸುತ್ತಿದ್ದಾರೆ. ಅದು ನಿಲ್ಲಬೇಕಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.</p>.<p>‘ಕೋವಿಡ್–19 ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಅಷ್ಟು ಬೇಗನೆ ಸುಧಾರಿಸುವುದು ಅಸಾಧ್ಯವಾಗಿದೆ. ಪಂದ್ಯ ಆಯೋಜಿಸುವುದು ಎಂದರೆ ನಮ್ಮ ಕ್ರಿಕೆಟಿಗರನ್ನು ಅಪಾಯಕ್ಕೆ ತಳ್ಳುವುದಾಗಿದೆ. ಅದರ ಅಗತ್ಯ ಇಲ್ಲ’ ಎಂದು 1983 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>