<p><strong>ಶಿವಮೊಗ್ಗ/ಬೆಂಗಳೂರು:</strong> ಕರ್ನಾಟಕದ 19 ವರ್ಷದೊಳಗಿನವರ ತಂಡವು ಇದೇ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿ ಗೆದ್ದುಕೊಂಡಿತು. ಸಂಕ್ರಾಂತಿಯಂದು ಸಂಭ್ರಮದ ಹೊನಲು ಹರಿಸಿತು.</p><p>ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮುಂಬೈ ಎದುರು ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ತಂಡದ ಆರಂಭಿಕ ಬ್ಯಾಟರ್ ಪ್ರಖರ್ ಚತುರ್ವೇದಿ ಅಜೇಯ 404 ರನ್ ಗಳಿಸಿ ಯುವರಾಜ್ ಸಿಂಗ್ ದಾಖಲೆ ಮುರಿದರು. <br></p><p>ಈ ಟೂರ್ನಿಯ 79 ವರ್ಷಗಳ ಇತಿಹಾಸ ದಲ್ಲಿ ಕರ್ನಾಟಕ ತಂಡವು ಮೊದಲ ಬಾರಿ ಚಾಂಪಿಯನ್ ಆಯಿತು. </p><p>ಡ್ರಾ ಆದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದ್ದ ಆತಿಥೇಯರು ಪ್ರಶಸ್ತಿ ಮುಡಿಗೇರಿಸಿಕೊಂಡರು. 510 ರನ್ಗಳ ಮುನ್ನಡೆಯ ದಾಖಲೆಯನ್ನೂ ಬರೆಯಿತು.</p><p>ಪ್ರಖರ್ ಒಟ್ಟು 638 ಎಸೆತಗಳನ್ನು ಎದುರಿಸಿದರು. 46 ಬೌಂಡರಿ ಹಾಗೂ ಮೂರು ಸಿಕ್ಸರ್ ಹೊಡೆದರು. ತಂಡವು 8 ವಿಕೆಟ್ಗಳಿಗೆ 890 ರನ್ಗಳ ದಾಖಲೆಯ ಮೊತ್ತ ಪೇರಿಸಿತು. ಚಹಾ ವಿರಾಮಕ್ಕೆ ಮುನ್ನ ತನೀಶ್ ಮೆಹರ್ ಬೌಲಿಂಗ್ನಲ್ಲಿ ಸತತ 3 ಬೌಂಡರಿ ಬಾರಿ ಸಿದ ಪ್ರಖರ್ 400ರ ಗಡಿ ದಾಟಿದರು.</p><p>ಕರ್ನಾಟಕ ತಂಡಕ್ಕೆ ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ಹಾಗೂ ಮಾಜಿ ಸಚಿವ ಡಿ.ಎಚ್. ಶಂಕರಮೂರ್ತಿ ₹ 30 ಲಕ್ಷ ಚೆಕ್ ಹಾಗೂ ಟ್ರೋಫಿ ವಿತರಿಸಿದರು. ರನ್ನರ್ ಅಪ್ ಮುಂಬೈ ತಂಡ ₹ 15 ಲಕ್ಷ ಚೆಕ್, ಟ್ರೋಫಿ ಪಡೆಯಿತು.</p><p><strong>ಸಂಕ್ಷಿಪ್ತ ಸ್ಕೋರು</strong>: ಮೊದಲ ಇನಿಂಗ್ಸ್: ಮುಂಬೈ: 113.5 ಓವರ್ಗಳಲ್ಲಿ 380. ಕರ್ನಾಟಕ: 223 ಓವರ್ಗಳಲ್ಲಿ 8 ವಿಕೆಟ್ಗಳಿಗೆ 890 (ಪ್ರಖರ್ ಚತುರ್ವೇದಿ ಔಟಾಗದೆ 404, ಎಸ್.ಯು. ಕಾರ್ತಿಕ್ 50, ಹರ್ಷಿಲ್ ಧರ್ಮಾನಿ 169, ಕೆ.ಪಿ. ಕಾರ್ತಿಕೇಯ 72, ಹಾರ್ದಿಕ್ ರಾಜ್ 51, ಎನ್. ಸಮರ್ಥ್ ಔಟಗದೆ 55)<br>ಫಲಿತಾಂಶ: ಪಂದ್ಯ ಡ್ರಾ. ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದ ಕರ್ನಾಟಕ ಚಾಂಪಿಯನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ/ಬೆಂಗಳೂರು:</strong> ಕರ್ನಾಟಕದ 19 ವರ್ಷದೊಳಗಿನವರ ತಂಡವು ಇದೇ ಮೊದಲ ಬಾರಿಗೆ ಕೂಚ್ ಬಿಹಾರ್ ಟ್ರೋಫಿ ಗೆದ್ದುಕೊಂಡಿತು. ಸಂಕ್ರಾಂತಿಯಂದು ಸಂಭ್ರಮದ ಹೊನಲು ಹರಿಸಿತು.</p><p>ಕೆಎಸ್ಸಿಎ ಕ್ರೀಡಾಂಗಣದಲ್ಲಿ ಮುಂಬೈ ಎದುರು ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ತಂಡದ ಆರಂಭಿಕ ಬ್ಯಾಟರ್ ಪ್ರಖರ್ ಚತುರ್ವೇದಿ ಅಜೇಯ 404 ರನ್ ಗಳಿಸಿ ಯುವರಾಜ್ ಸಿಂಗ್ ದಾಖಲೆ ಮುರಿದರು. <br></p><p>ಈ ಟೂರ್ನಿಯ 79 ವರ್ಷಗಳ ಇತಿಹಾಸ ದಲ್ಲಿ ಕರ್ನಾಟಕ ತಂಡವು ಮೊದಲ ಬಾರಿ ಚಾಂಪಿಯನ್ ಆಯಿತು. </p><p>ಡ್ರಾ ಆದ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದ್ದ ಆತಿಥೇಯರು ಪ್ರಶಸ್ತಿ ಮುಡಿಗೇರಿಸಿಕೊಂಡರು. 510 ರನ್ಗಳ ಮುನ್ನಡೆಯ ದಾಖಲೆಯನ್ನೂ ಬರೆಯಿತು.</p><p>ಪ್ರಖರ್ ಒಟ್ಟು 638 ಎಸೆತಗಳನ್ನು ಎದುರಿಸಿದರು. 46 ಬೌಂಡರಿ ಹಾಗೂ ಮೂರು ಸಿಕ್ಸರ್ ಹೊಡೆದರು. ತಂಡವು 8 ವಿಕೆಟ್ಗಳಿಗೆ 890 ರನ್ಗಳ ದಾಖಲೆಯ ಮೊತ್ತ ಪೇರಿಸಿತು. ಚಹಾ ವಿರಾಮಕ್ಕೆ ಮುನ್ನ ತನೀಶ್ ಮೆಹರ್ ಬೌಲಿಂಗ್ನಲ್ಲಿ ಸತತ 3 ಬೌಂಡರಿ ಬಾರಿ ಸಿದ ಪ್ರಖರ್ 400ರ ಗಡಿ ದಾಟಿದರು.</p><p>ಕರ್ನಾಟಕ ತಂಡಕ್ಕೆ ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್ ಹಾಗೂ ಮಾಜಿ ಸಚಿವ ಡಿ.ಎಚ್. ಶಂಕರಮೂರ್ತಿ ₹ 30 ಲಕ್ಷ ಚೆಕ್ ಹಾಗೂ ಟ್ರೋಫಿ ವಿತರಿಸಿದರು. ರನ್ನರ್ ಅಪ್ ಮುಂಬೈ ತಂಡ ₹ 15 ಲಕ್ಷ ಚೆಕ್, ಟ್ರೋಫಿ ಪಡೆಯಿತು.</p><p><strong>ಸಂಕ್ಷಿಪ್ತ ಸ್ಕೋರು</strong>: ಮೊದಲ ಇನಿಂಗ್ಸ್: ಮುಂಬೈ: 113.5 ಓವರ್ಗಳಲ್ಲಿ 380. ಕರ್ನಾಟಕ: 223 ಓವರ್ಗಳಲ್ಲಿ 8 ವಿಕೆಟ್ಗಳಿಗೆ 890 (ಪ್ರಖರ್ ಚತುರ್ವೇದಿ ಔಟಾಗದೆ 404, ಎಸ್.ಯು. ಕಾರ್ತಿಕ್ 50, ಹರ್ಷಿಲ್ ಧರ್ಮಾನಿ 169, ಕೆ.ಪಿ. ಕಾರ್ತಿಕೇಯ 72, ಹಾರ್ದಿಕ್ ರಾಜ್ 51, ಎನ್. ಸಮರ್ಥ್ ಔಟಗದೆ 55)<br>ಫಲಿತಾಂಶ: ಪಂದ್ಯ ಡ್ರಾ. ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದ ಕರ್ನಾಟಕ ಚಾಂಪಿಯನ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>